Get Updates
Get notified of breaking news, exclusive insights, and must-see stories!

ವಿಎಚ್‌ಪಿ, ಬಜರಂಗದಳದ ರ‍್ಯಾಲಿಗಳನ್ನು ನಿಲ್ಲಿಸಲು ಸುಪ್ರೀಂ ಕೋರ್ಟ್‌ಗೆ ಅರ್ಜಿ, ಶೀಘ್ರದಲ್ಲೇ ವಿಚಾರಣೆ

ನವದೆಹಲಿ, ಆಗಸ್ಟ್. 02: ಹರಿಯಾಣದಲ್ಲಿ ನಡೆದ ಕೋಮು ಘರ್ಷಣೆಗಳ ಕುರಿತ ಪ್ರತಿಭಟನೆಗಳು ದೆಹಲಿಯ ಗಡಿಯನ್ನು ತಲುಪುತ್ತಿವೆ. ಹಿಂಸಾಚಾರ ಕೂಡ ಗುರುಗ್ರಾಮ್ ತಲುಪಿದೆ. ಇದರ ಬೆನ್ನಲ್ಲೇ "ಕೋಮು ಘರ್ಷಣೆ ಮತ್ತು ಹಿಂಸಾಚಾರಕ್ಕೆ ಜನರನ್ನು ಪ್ರಚೋದಿಸುವ" ರ‍್ಯಾಲಿಗಳನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶೀಘ್ರದಲ್ಲೇ ವಿಚಾರಣೆ ನಡೆಸಲಿದೆ.

ಹರಿಯಾಣದ ನುಹ್‌ನಲ್ಲಿ ನಡೆದ ಕೋಮು ಹಿಂಸಾಚಾರದ ನಂತರ ದೆಹಲಿ-ಎನ್‌ಸಿಆರ್‌ನಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳ ಘೋಷಿಸಿದ ರ‍್ಯಾಲಿಗಳನ್ನು ನಿಲ್ಲಿಸುವಂತೆ ಸಲ್ಲಿಸಲಾದ ತುರ್ತು ಅರ್ಜಿಯನ್ನು ವಿಚಾರಣೆ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿತ್ತು.

communal-clash-in-haryana

"ನುಹ್ ಮತ್ತು ಗುರ್‌ಗಾಂವ್‌ನಲ್ಲಿ ಪರಿಸ್ಥಿತಿಯು ಅತ್ಯಂತ ಉದ್ವಿಗ್ನವಾಗಿದೆ. ಸಣ್ಣದೊಂದು ಪ್ರಚೋದನೆಯು ಸಹ ಗಂಭೀರವಾದ ಜೀವಹಾನಿ ಮತ್ತು ಆಸ್ತಿಪಾಸ್ತಿಗೆ ಹಾನಿಗೆ ಕಾರಣವಾಗಬಹುದು ಎಂಬ ಅಂಶವನ್ನು ಗಮನಿಸಿ, ಕೋಮು ಘರ್ಷಣೆಯನ್ನು ಪ್ರಚೋದಿಸುವ ಮತ್ತು ಹಿಂಸಾಚಾರಕ್ಕೆ ಜನರನ್ನು ಪ್ರಚೋದಿಸುವ ರ‍್ಯಾಲಿಗಳಿಗೆ ಅನುಮತಿ ನೀಡಬಾರದು" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ತುರ್ತು ವಿಚಾರಣೆಗಾಗಿ ತನ್ನ ವಿನಂತಿಯನ್ನು ತೆಗೆದುಕೊಳ್ಳಲು "ದೆಹಲಿಗೆ 23 ಪ್ರತಿಭಟನಾ ಮೆರವಣಿಗೆಗಳು" ಘಟನೆಯನ್ನು ಉಲ್ಲೇಖಿಸಿದೆ.

ಸದ್ಯ ದೆಹಲಿಯ ಬದರ್‌ಪುರ ಮತ್ತು ಸೀಲಂಪುರ ಪ್ರದೇಶಗಳಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಹರಿಯಾಣದ ನುಹ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ಘರ್ಷಣೆಗಳ ವಿರುದ್ಧ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರತಿಭಟನೆಗೆ ಕರೆ ನೀಡಿದ ನಂತರ ಬಜರಂಗದಳದ ಸದಸ್ಯರು ದೆಹಲಿಯ ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ್ದಾರೆ.

communal-clash-in-haryana

ನುಹ್ ಘರ್ಷಣೆಯನ್ನು ವಿರೋಧಿಸಿ ದೆಹಲಿಯ ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳ ಯೋಜಿಸಿರುವ ಕಾರಣ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮೇವಾತ್ ಪ್ರದೇಶದಲ್ಲಿ ನಡೆಯುತ್ತಿರುವ ಘರ್ಷಣೆಗಳ ವಿರುದ್ಧ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಬುಧವಾರ ಪ್ರತಿಭಟನೆಗೆ ಕರೆ ನೀಡಿದೆ. ವಿಎಚ್‌ಪಿ ಮತ್ತು ಬಜರಂಗದಳ ಬುಧವಾರ ಸಂಜೆ 4 ಗಂಟೆಗೆ ಮನೇಸರ್‌ನ ಭೀಸಂ ದಾಸ್ ಮಂದಿರದಲ್ಲಿ ಮಹಾಪಂಚಾಯತ್‌ಗೆ ಕರೆ ನೀಡಿವೆ.

ಬಲಪಂಥೀಯ ಸಂಘಟನೆಯು ಬುಧವಾರ ನೋಯ್ಡಾದಲ್ಲಿ ಪ್ರಮುಖ ಪ್ರದರ್ಶನ'ವನ್ನು ನಡೆಸಲಿದೆ. ಸೆಕ್ಟರ್ 21 ಎ ನಲ್ಲಿರುವ ನೋಯ್ಡಾ ಕ್ರೀಡಾಂಗಣದಿಂದ ಸೆಕ್ಟರ್ 16 ರ ರಜನಿಗಂಧ ಚೌಕ್ ಕಡೆಗೆ ಪ್ರತಿಭಟನಾ ಮೆರವಣಿಗೆಯನ್ನು ಪ್ರಾರಂಭಿಸಲಾಗುವುದು, ಅಲ್ಲಿ ಪ್ರತಿಕೃತಿ ದಹಿಸಲಾಗುವುದು ಎಂದು ವಿಎಚ್‌ಪಿಯ ಪ್ರಚಾರ ಮುಖ್ಯಸ್ಥ ರಾಹುಲ್ ದುಬೆ ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಗುರುಗ್ರಾಮ್‌ನಲ್ಲಿ ನಡೆದ ಹಿಂಸಾಚಾರದಿಂದ ದೆಹಲಿ ಹೈ ಅಲರ್ಟ್‌ನಲ್ಲಿದೆ. ಗುರುಗ್ರಾಮ್ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿನ ವರದಿಗಳಿಗೆ ಗಮನ ಕೊಡಬೇಡಿ, ಯಾವುದೇ ಸಹಾಯ ಬೇಕಿದ್ದರೂ 112 ಸಂಖ್ಯೆಯನ್ನು ಡಯಲ್ ಮಾಡಿ ಎಂದು ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+