ತರಬೇತುದಾರನ ಯಡವಟ್ಟಿಗೆ ವಿದ್ಯಾರ್ಥಿನಿ ಬಲಿ: ಕಾಲೇಜು ಘಟನೆಯ ವೈರಲ್ ವಿಡಿಯೋ
ಕೊಯಮತ್ತೂರು, ಜುಲೈ 13: ವಿಪತ್ತು ನಿರ್ವಹಣೆಗೆ ನೀಡಲಾಗುತ್ತಿದ್ದ ತರಬೇತಿ ಯುವತಿಯೊಬ್ಬಳ ಜೀವ ಬಲಿತೆಗೆದುಕೊಂಡ ದಾರುಣ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಕೊಯಮತ್ತೂರಿನ ಹೊರವಲಯದ ನರಸಿಪುರಂನಲ್ಲಿರುವ ಕೊವೈ ಕಲೈಮಗಳ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಸಂಜೆ ವಿಪತ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆ ಹಾಗೂ ನಮ್ಮ ಜೀವ ಉಳಿಸಿಕೊಳ್ಳುವುದು ಹೇಗೆ ಎಂಬ ತರಬೇತಿ ನೀಡಲಾಗುತ್ತಿತ್ತು.
ಈ ವೇಳೆ ಎರಡನೆ ವರ್ಷದ ಪದವಿ ವಿದ್ಯಾರ್ಥಿನಿ ಎನ್. ಲೋಕೇಶ್ವರಿ ಎರಡನೆಯ ಮಹಡಿಯಿಂದ ಹಾರುವ ಸಾಹಸಕ್ಕೆ ಮುಂದಾಗಿದ್ದರು.

ಕೆಳಗೆ ಉಳಿದ ವಿದ್ಯಾರ್ಥಿಗಳು ಬಲೆ ಹಿಡಿದುಕೊಂಡು ಆಕೆಯನ್ನು ಹಿಡಿಯಲು ನಿಂತಿದ್ದರು. ಆದರೆ, ಮೇಲಿನಿಂದ ಕೆಳಕ್ಕೆ ನೋಡಿದ್ದ ಲೋಕೇಶ್ವರಿ ಭಯದಿಂದಾಗಿ ಜಿಗಿಯಲು ಹಿಂದೇಟು ಹಾಕಿದ್ದರು.
ಅವರ ಜತೆಯಲ್ಲಿ ಇದ್ದ ತರಬೇತುದಾರ ಜಿಗಿದರೂ ಹಿಡಿದುಕೊಳ್ಳುತ್ತಾರೆ, ಯಾವ ಅಪಾಯವೂ ಆಗೊಲ್ಲ ಎಂದು ಧೈರ್ಯ ತುಂಬಿದರೂ ಲೋಕೇಶ್ವರಿ ಒಪ್ಪಲಿಲ್ಲ.
Innocent girl succumbed during national disaster management program held at private college campus in Coimbatore. Sheer negligence and irresponsible activity in the name of training program. pic.twitter.com/fiJxqqvV6z
— Aishwarya (@AishwaryaPT) 12 July 2018
ಆಗ ತರಬೇತುದಾರ ಏಕಾಏಕಿ ಅವರನ್ನು ಕೆಳಕ್ಕೆ ತಳ್ಳಿದ್ದಾನೆ. ಬೀಳುವ ವೇಳೆ ಕಟ್ಟಡದ ಮೊದಲ ಮಹಡಿಯ ಹೊರಭಾಗದ ಕಟ್ಟೆಗೆ ಆಕೆಯ ತಲೆಬಡಿದಿದೆ.
ಕೆಳಗಿದ್ದ ವಿದ್ಯಾರ್ಥಿಗಳು ಬಲೆಯಲ್ಲಿ ಆಕೆಯನ್ನು ಹಿಡಿದರೂ, ತಲೆಗೆ ತೀವ್ರ ಗಾಯವಾದ ಕಾರಣ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಯುವತಿಯ ತಲೆ ಮತ್ತು ಕುತ್ತಿಗೆಯ ಸೂಕ್ಷ್ಮ ಭಾಗಗಳಿಗೆ ಪೆಟ್ಟಾಗಿತ್ತು. ತುರ್ತು ದ್ವಾರದ ಮೂಲಕ ಜಿಗಿಯುವ ತರಬೇತಿಗೆ 20 ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿತ್ತು.
ಪೊಲೀಸರು ತರಬೇತುದಾರ ಆರ್ಮುಗಂ ಮತ್ತು ಕಾಲೇಜಿನ ಪ್ರಿನ್ಸಿಪಾಲ್ ಮಾಲಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications