ಚಿತ್ರಗಳಲ್ಲಿ ಕ್ರಿಸ್ಮಸ್ ಸಂಭ್ರಮ, ಸಡಗರ
ಬೆಂಗಳೂರು, ಡಿ. 25 : ಪ್ರಪಂಚದಾದ್ಯಂತ ಯೇಸುಕ್ರಿಸ್ತನ ಜನ್ಮದಿನದ ಹಬ್ಬವಾದ ಕ್ರಿಸ್ಮಸ್ ಸಂಭ್ರಮ, ಸಡಗರ. ಭಾರತದಲ್ಲೂ ಕ್ರಿಸ್ಮಸ್ ಸಂಭ್ರಮ ಜೋರಾಗಿದ್ದು, ಬುಧವಾರ ರಾತ್ರಿಯಿಂದಲೇ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಸಂತಾ ಕ್ಲಾಸ್ ವೇಷ ತೊಟ್ಟವರು ಉಡುಗೊರೆ, ಚಾಕೋಲೇಟ್ಗಳನ್ನು ಹಂಚಿ ಹಬ್ಬದ ಸಂಭ್ರಮ ಹೆಚ್ಚಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂತಾದ ನಾಯಕರು ಕ್ರಿಸ್ಮಸ್ ಹಬ್ಬವು ಕ್ರೈಸ್ತ ಬಾಂಧವರೆಲ್ಲರಿಗೂ ಒಳಿತನ್ನು ಉಂಟು ಮಾಡಲಿ ಎಂದು ಶುಭ ಹಾರೈಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕ್ರಿಸ್ಮಸ್ ಅಂಗವಾಗಿ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.
ಕ್ರಿಸ್ಮಸ್ ಪ್ರಾರ್ಥನೆ, ಸಂತಾ ಕ್ಲಾಸ್ ವೇಷ ತೊಟ್ಟವರು ಉಡುಗೊರೆ, ಚಾಕೋಲೇಟ್ಗಳನ್ನು ಹಂಚುವ, ಕ್ರೈಸ್ತ ಬಾಂಧವರೆಲ್ಲರೂ ಪ್ರಾರ್ಥನೆ ಸಲ್ಲಿಸುವ ಚಿತ್ರಗಳು ಇಲ್ಲಿವೆ. [ಪಿಟಿಐ ಚಿತ್ರಗಳು]
ವ್ಯಾಟಿಕನ್ನಲ್ಲಿ ಕ್ರಿಸ್ಮಸ್ ಸಂಭ್ರಮ
ಕ್ರೈಸ್ತರ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿವೊಂದಾದ ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ಕ್ರಿಸ್ತನ ಮೂರ್ತಿಗೆ ಮುತ್ತಿಕ್ಕಿದ್ದು ಹೀಗೆ.
ಕ್ರಿಸ್ಮಸ್ ಪ್ರಾರ್ಥನೆ
ಗೌಹಾತಿಯಲ್ಲಿ ಕ್ರಿಸ್ಮಸ್ ಅಂಗವಾಗಿ ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಜಮ್ಮುವಿನಲ್ಲಿ ವಿಶೇಷ ಪ್ರಾರ್ಥನೆ
ಕ್ರಿಸ್ಮಸ್ ಅಂಗವಾಗಿ ಜಮ್ಮುವಿನಲ್ಲಿ ಕ್ರೈಸ್ತ ಬಾಂಧವರು ಪ್ರಾರ್ಥನೆ ಸಲ್ಲಿಸಿದರು.
ಉಡುಗೊರೆಕೊಟ್ಟ ಸಂತಾ ಕ್ಲಾಸ್
ಗೌಹಾತಿಯಲ್ಲಿ ಸಂತಾ ಕ್ಲಾಸ್ ವೇಷ ತೊಟ್ಟವರು ಉಡುಗೊರೆಗಳನ್ನು ಹಂಚಿ, ಹಬ್ಬದ ಸಂಭ್ರಮ ಹೆಚ್ಚಿಸಿದರು.
ಕ್ರಿಸ್ಮಸ್ ಸಂಭ್ರಮದಲ್ಲಿ ಸಂತಾ ಕ್ಲಾಸ್
ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಸಂತಾ ಕ್ಲಾಸ್ ವೇಷ ತೊಟ್ಟವರು ಮಕ್ಕಳಿಗೆ ಕ್ರಿಸ್ ಮಸ್ ಅಂಗವಾಗಿ ಚಾಕೋಲೇಟ್ ಹಂಚಿದರು.
ರಸ್ತೆಯಲ್ಲಿ ಕ್ರಿಸ್ಮಸ್ ಶುಭಾಶಯ ವಿನಿಮಯ
ಮೀರತ್ನಲ್ಲಿ ರಸ್ತೆಯಲ್ಲಿ ಸಂತಾ ಕ್ಲಾಸ್ ವೇಷ ತೊಟ್ಟ ವ್ಯಕ್ತಿ ಕ್ರಿಸ್ಮಸ್ ಶುಭಾಶಯ ಹೇಳಿದ್ದು ಹೀಗೆ.
ಕ್ರಿಸ್ಮಸ್ ಸಂಭ್ರಮದಲ್ಲಿ ಸಿಎಂ ಸಿದ್ದರಾಮಯ್ಯ
ಬೆಂಗಳೂರಿನ ಶಿವಾಜಿನಗರದ ಚರ್ಚ್ನಲ್ಲಿ ಕ್ರೈಸ್ತ ಭಾಂದವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ ಚರ್ಚ್ಗೆ ಭೇಟಿ ನೀಡಿ ಕ್ರಿಸ್ಮಸ್ ಶುಭಾಶಯ ತಿಳಿಸಿದರು.
ಶ್ರೀನಗರದಲ್ಲಿ ಕ್ಯಾಂಡಲ್ ಹಚ್ಚಿ ಪ್ರಾರ್ಥನೆ
ಕ್ರಿಸ್ಮಸ್ ಅಂಗವಾಗಿ ಶ್ರೀನಗರದಲ್ಲಿ ಕ್ರೈಸ್ತ ಬಾಂಧವರು ಕ್ಯಾಂಡಲ್ ಹಚ್ಚಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕ್ರಿಸ್ಮಸ್ ಸೆಲ್ಫೀ
ಅಮೃತ್ಸರ್ನಲ್ಲಿ ಕ್ರಿಸ್ಮಸ್ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಸೆಲ್ಫೀ ಫೋಟೋ ಕ್ಲಿಕ್ಕಿಸಿ ಸಂಭ್ರಮಪಟ್ಟರು.
ಬೋಟ್ನಲ್ಲಿ ಕ್ರಿಸ್ಮಸ್ ಸಂಭ್ರಮ
ಇಟಲಿ ನಗರದ ಇಂಪಿರಿಯಾದಲ್ಲಿ ಸಂತಾ ಕ್ಲಾಸ್ ವೇಷಧಾರಿ ಬೋಟ್ನಲ್ಲಿ ಕ್ರಿಸ್ಮಸ್ ಶುಭಾಶಯ ಹೇಳಿದ್ದು ಹೀಗೆ.
ಇಲ್ಲಿ ಕ್ರಿಸ್ಮಸ್ ಸಂಭ್ರಮವಿಲ್ಲ
ಅಸ್ಸಾಂನಲ್ಲಿ ಬೋಡೋ ಉಗ್ರರು ಮಂಗಳವಾರ ಮತ್ತು ಬುಧವಾರರಾತ್ರಿ ನಡೆಸಿದ್ದ ಭೀಕರ ದಾಳಿಗೆ ಬಲಿಯಾದವರ ಸಂಖ್ಯೆ 78ಕ್ಕೆ ಏರಿದೆ. ಕ್ರಿಸ್ಮಸ್ ದಿನವಾದ ಇಂದು ಆದಿವಾಸಿಗಳು ಬಿಲ್ಲುಬಾಣಗಳನ್ನು ಹಿಡಿದು ಚರ್ಚ್ ಹೊರಗೆ ನಿಂತಿದ್ದರು.