ಛತ್ತೀಸ್ ಗಢದ ಈ ಮತದಾನ ಕೇಂದ್ರದಲ್ಲಿ ಇರುವುದು ನಾಲ್ಕು ಮತ
ರಾಯ್ ಪುರ (ಛತ್ತೀಸ್ ಗಢ), ನವೆಂಬರ್ 19 : ಛತ್ತೀಸ್ ಗಢ ವಿಧಾನಸಭೆಗೆ ಮಂಗಳವಾರದಂದು, ಅಂದರೆ ನವೆಂಬರ್ 20ರಂದು ಎರಡನೇ ಹಂತದ ಚುನಾವಣೆ, ಎಪ್ಪತ್ತೆರಡು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆ ನವೆಂಬರ್ 12ರಂದು 18 ಕ್ಷೇತ್ರಗಳಿಗೆ ನಡೆದಿತ್ತು. ಅವುಗಳಲ್ಲಿ ಬಹುತೇಕ ನಕ್ಸಲರ ಹಿಡಿತ ಇರುವ ಪ್ರದೇಶಗಳು. ಶೇಕಡಾ ಎಪ್ಪತ್ತರಷ್ಟು ಮತದಾನ ಆಗಿತ್ತು.
ಇನ್ನು ಮಂಗಳವಾರದಂದು ಮತದಾನ ನಡೆಯುವ 72 ಕ್ಷೇತ್ರಗಳ ಪೈಕಿ ಭರತ್ ಪುರ್-ಸೋನ್ ಹತ್ ವಿಧಾನಸಭಾ ಕ್ಷೇತ್ರವು ಕೊರಿಯಾ ಜಿಲ್ಲೆಯ ಈಶಾನ್ಯಕ್ಕಿದೆ. ಇಲ್ಲಿ ಶೆರನ್ ದಾದ್ ಎಂಬ ಹಳ್ಳಿಯಲ್ಲಿ ಒಂದು ಮತದಾನ ಕೇಂದ್ರ ಇದ್ದು, ನಾಲ್ವರು ಮತದಾರರು ಮಾತ್ರ ಇದ್ದಾರೆ. ಅದರಲ್ಲಿ ಮೂವರು ಮತದಾರರು ಒಂದೇ ಕುಟುಂಬದವರು.
ಈ ಮತದಾನ ಕೇಂದ್ರ ತಲುಪುವುದು ಕೂಡ ಅಷ್ಟು ಸಲೀಸಾದ ವಿಚಾರ ಏನಲ್ಲ. ಅದಕ್ಕಾಗಿ ಬೆಟ್ಟ ಮತ್ತು ನದಿ ದಾಟಿ ಕುಗ್ರಾಮವಾದ ಶೆರನ್ ದಾದ್ ಮತದಾನ ಕೇಂದ್ರವನ್ನು ತಲುಪಬೇಕು.

2013ರಲ್ಲಿ ಬಿಜೆಪಿಯ ಚಂಪಾ ದೇವಿ ಪಾವ್ಲೆ ಭರತ್ ಪುರ್- ಸೋನ್ ಹತ್ ವಿಧಾನಸಭಾ ಕ್ಷೇತ್ರದಿಂದ 4608 ಮತಗಳಿಂದ ಜಯ ಗಳಿಸಿದ್ದರು. ಅಂದಹಾಗೆ ಕೊರಿಯಾ ಜಿಲ್ಲೆಯಲ್ಲಿ ಇರುವ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜಯ ಸಾಧಿಸಿತ್ತು. ಈ ವಿಧಾನಸಭಾ ಕ್ಷೇತ್ರವು ಕೊರ್ಬಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶವು ಡಿಸೆಂಬರ್ 11ರಂದು ಪ್ರಕಟವಾಗಲಿದೆ.
-
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ












Click it and Unblock the Notifications