ಕಚೇರಿಯೊಳಗೆ ಪಕ್ಕದಲ್ಲೇ ಹೋದ ಚಿರತೆಯನ್ನು ನೋಡಿ 12 ವರ್ಷದ ಬಾಲಕ ಮಾಡಿದ್ದೇನು?
ಕಚೇರಿಯಲ್ಲಿ ಮೊಬೈಲ್ ನೋಡುತ್ತಾ ಕುಳಿತಿರುವ 12 ವರ್ಷದ ಬಾಲಕ, ಏಕಾಏಕಿ ಅದೇ ಕೋಣೆಗೆ ನುಗ್ಗುವ ಚಿರತೆ. ಇಂತಹದ್ದೊಂದು ಪರಿಸ್ಥಿತಿಯಲ್ಲಿ ನೀವಿದ್ದರೆ ಏನು ಮಾಡ್ತಿದ್ರಿ, ಭಯಕ್ಕೆ ಏನು ಮಾಡಬೇಕು ಅನ್ನೋದೆ ಗೊತ್ತಾಗ್ತಾ ಇರಲಿಲ್ಲ, ಅಥವಾ ಜೋರಾಗಿ ಕಿರುಚಿ ಚಿರತೆಗೂ ಗಾಬರಿ ಮಾಡ್ತಿದ್ರಿ. ಆದರೆ ಈ ಬಾಲಕ ಮಾತ್ರ ಅಸಾಧ್ಯ ಧೈರ್ಯ ಪ್ರದರ್ಶಿಸಿದ್ದಾನೆ.
12 ವರ್ಷ ವರ್ಷದ ಹುಡುಗ ಮೋಹಿತ್ ಅಹಿರೆ ಅವನ ಅಸಾಧಾರಣ ಧೈರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಚಿರತೆ ಒಳಗೆ ಬರುತ್ತಿದ್ದಂತೆ ಸೈಲೆಂಟಾಗಿ ರೂಮಿನಿಂದ ಹೊರ ಹೋದ ಬಾಲಕ ಬಾಗಿಲು ಹಾಕಿದ್ದು, ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾನೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ನಲ್ಲಿ ಈ ಘಟನೆ ನಡೆದಿದೆ. ಹುಡುಗನ ಶೌರ್ಯ ಮತ್ತು ಚಾಣಾಕ್ಷತನ ಊರಿನಲ್ಲಿ ಚರ್ಚೆಯಾಯಿತು. ಮದುವೆ ಮಂಟಪದ ಸೆಕ್ಯುರಿಟಿ ಗಾರ್ಡ್ನ ಮಗನಾದ ಮೋಹಿತ್ ಅಹಿರೆ, ಚಿರತೆ ಅವನ ಹಿಂದೆ ನಡೆದು ಕಚೇರಿಗೆ ಪ್ರವೇಶಿಸಿದಾಗ ಕೇವಲ ಒಂದು ಅಡಿ ದೂರದಲ್ಲಿತ್ತು ಎನ್ನುವುದನ್ನು ನೋಡಬಹುದು.
No panic, no screams.. just with his presence of mind this young boy Mohit Ahire, a 12-year-old in Malegaon, locked a leopard inside an office cabin & the leopard was rescued later by experts
— Sudha Ramen 🇮🇳 (@SudhaRamenIFS) March 6, 2024
Such kind of awareness should be instilled in our childrenpic.twitter.com/6k61qjSY2G
ವೈರಲ್ ಆದ ವಿಡಿಯೋ
ಮಾಲೆಗಾಂವ್-ನಂಪುರ್ ರಸ್ತೆಯಲ್ಲಿರುವ ಸಾಯಿ ಸೆಲೆಬ್ರೇಷನ್ ಮದುವೆ ಮಂಟಪದಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆಗೆ ಈ ಘಟನೆ ನಡೆದಿದೆ.
ಆ ಸಮಯದಲ್ಲಿ, ಮೋಹಿತ್ ಅಹಿರೆ ಮದುವೆ ಮಂಟಪದ ಬುಕಿಂಗ್ ಕಚೇರಿಯ ಪ್ರವೇಶ ದ್ವಾರದ ಬಳಿಯ ಬೆಂಚಿನ ಮೇಲೆ ಕುಳಿತು ತನ್ನ ಸೆಲ್ಫೋನ್ನಲ್ಲಿ ಆಟವಾಡುತ್ತಿದ್ದನು. ಏಕಾಏಕಿ ಚಿರತೆ ರೂಮಿನೊಳಗೆ ಸಾಗುತ್ತಿರುವುದನ್ನು ಕಂಡನು. ಆದರೆ, ಚಿರತೆಯು ಹುಡುಗನನ್ನು ಗಮನಿಸಲಿಲ್ಲ.
ಚಿರತೆ ತುಂಬಾ ಹತ್ತಿರವಾಗಿತ್ತು. ಚಿರತೆ ಮತ್ತು ನನ್ನ ನಡುವೆ ಸ್ವಲ್ಪ ಜಾಗವಿರಲಿಲ್ಲ. ಅದು ನನ್ನ ಮುಂದೆಯೇ ಕಚೇರಿಯ ಒಳಗಿನ ಕ್ಯಾಬಿನ್ಗೆ ಕಾಲಿಟ್ಟಿತು. ನನಗೆ ಭಯವಾಯಿತು, ಆದರೆ ನಾನು ಸದ್ದಿಲ್ಲದೆ ಬೆಂಚ್ನಿಂದ ಇಳಿದು ರೂಮಿನಿಂದ ಹೊರಬಂದು ಬಾಗಿಲು ಮುಚ್ಚಿದೆ, ಎಂದು ಬಾಲಕ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮದುವೆ ಮಂಟಪದ ಮಾಲೀಕ ಅನಿಲ್ ಪವಾರ್, "ಬುಕಿಂಗ್ ಕಚೇರಿಯ ಸುತ್ತಳತೆ 22 ಅಡಿ x 10 ಅಡಿ. ನಾವು ಕಚೇರಿಯಲ್ಲಿ ಎರಡು ವಿಭಾಗಗಳನ್ನು ರಚಿಸಿದ್ದೇವೆ. ಮೋಹಿತ್ ಅಹಿರೆ ಪ್ರವೇಶದ್ವಾರದ ಬಳಿ ಮೊದಲ ಕಂಪಾರ್ಟ್ಮೆಂಟ್ನಲ್ಲಿ ಕುಳಿತಿದ್ದರು. ಚಿರತೆ ನೇರವಾಗಿ ಒಳಗೆ ಹೋಗಿದೆ. ಚಿರತೆ ಅವನಿಂದ ಕೇವಲ ಒಂದು ಅಡಿ ದೂರದಲ್ಲಿ ನಡೆದುಕೊಂಡು ಹೋಗುವುದನ್ನು ಕಂಡಾಗ ಆತ ಶಾಂತವಾಗಿದ್ದ. ನಂತರ ಅವನು ಕಛೇರಿಯಿಂದ ಹೊರಬಂದು ಬಾಗಿಲು ಮುಚ್ಚಿದ" ಎಂದು ಹೇಳಿದ್ದಾರೆ.
ಮುಂಜಾನೆಯೇ ಸಮೀಪದ ವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು ಎಂದು ಪವಾರ್ ಹೇಳಿದ್ದಾರೆ. ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಯೊಂದಿಗೆ ನಿವಾಸಿಗಳು ಅದನ್ನು ಪತ್ತೆಹಚ್ಚಲು ಪ್ರಯತ್ನಿಸಿದರು. ಕಚೇರಿಯೊಳಗೆ ಚಿರತೆಯನ್ನು ಹಿಡಿದಿರುವುದಾಗಿ ಮೋಹಿತ್ ಅಹಿರೆ ತನ್ನ ತಂದೆಗೆ ತಿಳಿಸಿದ ನಂತರ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಇತರ ನಾಗರಿಕರು ಸ್ಥಳಕ್ಕೆ ಬಂದರು.
ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಈ ಪ್ರದೇಶದ ಸುತ್ತಲೂ ಅನೇಕ ಕೃಷಿ ಕ್ಷೇತ್ರಗಳಿರುವುದರಿಂದ ಮತ್ತು ಮೌಸಮ್ ನದಿಯು ಸಹ ಪ್ರದೇಶದಿಂದ ಕೇವಲ ಒಂದೆರಡು ಕಿಲೋಮೀಟರ್ ದೂರದಲ್ಲಿ ಹರಿಯುವುದರಿಂದ ಈ ಹಿಂದೆ ಚಿರತೆ ಕಾಣಿಸಿಕೊಂಡಿದೆ ಎಂದು ಅಧಿಕಾರಿ ಹೇಳಿದ್ದಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications