ತಮಿಳುನಾಡಿಗೆ ಸದಾನಂದ ಗೌಡರ ನೇತೃತ್ವದ 4 ಸದಸ್ಯರ ನಿಯೋಗ ಕಳಿಸಿದ ಬಿಜೆಪಿ
ಚೆನ್ನೈ, ಅಕ್ಟೋಬರ್ 23: ತಮಿಳುನಾಡು ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಹರಡಿದ ಕಾರಣಕ್ಕಾಗಿ ತಮಿಳುನಾಡು ಬಿಜೆಪಿಯ ಪಕ್ಷದವರನ್ನು ಬಂಧಿಸುವ ಕುರಿತು ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಡಿಎಂಕೆ ನಡುವಿನ ಸಂಘರ್ಷ ನಡೆಯುತ್ತಿದೆ. ಹೀಗಾಗಿ ವಿಷಯದ ಸಂಪೂರ್ಣ ಮಾಹಿತಿಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ರಾಜ್ಯಕ್ಕೆ ನಾಲ್ಕು ಸದಸ್ಯರ ನಿಯೋಗವನ್ನು ಕಳುಹಿಸಿದ್ದಾರೆ.
ಈ ನಿಯೋಗದಲ್ಲಿ ಕರ್ನಾಟಕದ ಮಾಜಿ ಸಿಎಂ ಡಿವಿ ಸದಾನಂದ ಗೌಡ, ಸಂಸದ ಸತ್ಯಪಾಲ್ ಸಿಂಗ್, ಆಂಧ್ರಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಡಿ ಪುರಂದೇಶ್ವರಿ ಮತ್ತು ಸಂಸದ ಪಿಸಿ ಮೋಹನ್ ನೇತೃತ್ವದ ನಿಯೋಗ ತಮಿಳುನಾಡಿಗೆ ಭೇಟಿ ನೀಡಲಿದೆ ಎಂದು ನವದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಿಂದ ಪ್ರಕಟಣೆ ತಿಳಿಸಿದೆ. ಬಿಜೆಪಿ ಕಾರ್ಯಕರ್ತರು ತಮಿಳುನಾಡು ಸರ್ಕಾರದಿಂದ ಕಿರುಕುಳ ಎದುರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ವರದಿಯನ್ನು ನಿಯೋಗ ಶೀಘ್ರವಾಗಿ ವರದಿಗೆ ಸಲ್ಲಿಸುತ್ತದೆ.

ಈ ನಿಯೋಗದ ಉದ್ದೇಶವೇನು?
ಈ ಬೆಳವಣಿಗೆಗಳ ಕುರಿತು ಮಾತನಾಡಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ, ಕಳೆದ 30 ತಿಂಗಳಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ಅಧಿಕಾರ ದುರುಪಯೋಗ ಮತ್ತು ಈ ಸರ್ಕಾರದ ಅತಿರೇಕವನ್ನು ಈ ನಿಯೋಗವು ಬೆಳಕಿಗೆ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
On behalf of @BJP4TamilNadu, we thank our @BJP4India National President Thiru @JPNadda avl for the four-member delegation in response to the brutal & irrational behaviour of the Corrupt DMK Government.
— K.Annamalai (@annamalai_k) October 22, 2023
The DMK government has only displayed fascist tendencies since it came to… pic.twitter.com/ukG1cpm7Mg
"ಡಿಎಂಕೆ ಸರ್ಕಾರವು ಮೇ 2021 ರಲ್ಲಿ ಅಧಿಕಾರಕ್ಕೆ ಬಂದ ನಂತರ ಕೇವಲ ಫ್ಯಾಸಿಸ್ಟ್ ಪ್ರವೃತ್ತಿಯನ್ನು ಪ್ರದರ್ಶಿಸಿದೆ. ತಮಿಳುನಾಡು ಬಿಜೆಪಿಯ ಸಾಮಾಜಿಕ ಮಾಧ್ಯಮದ ಪದಾಧಿಕಾರಿಗಳಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ. ಕ್ಷುಲ್ಲಕ ಆರೋಪಗಳು ಮತ್ತು ಉತ್ಪ್ರೇಕ್ಷಿತ ಸೆಕ್ಷನ್ಗಳನ್ನು ವಿಧಿಸಲಾಗಿದೆ. ಹೆಚ್ಚಿನ ಪ್ರಕರಣಗಳನ್ನು ಸ್ಥಳೀಯ ಡಿಎಂಕೆ ಪದಾಧಿಕಾರಿಗಳು ದಾಖಲಿಸಿದ್ದಾರೆ. ಭ್ರಷ್ಟ ಡಿಎಂಕೆ ಮಂತ್ರಿಗಳ ಅಹಂಕಾರವನ್ನು ತೃಪ್ತಿಪಡಿಸಲು ಬಂಧನಗಳನ್ನು ಮಾಡುವಂತೆ ಪೊಲೀಸರ ಮೇಲೆ ಒತ್ತಡ ಹೇರಲಾಗಿದೆ" ಎಂದು ಅವರು ಆರೋಪಿಸಿದ್ದಾರೆ.
ತಮಿಳುನಾಡು ಬಿಜೆಪಿ ಕ್ರೀಡಾ ವಿಭಾಗದ ಅಧ್ಯಕ್ಷ ಮತ್ತು ಅಣ್ಣಾಮಲೈ ಅವರ ಪಾದಯಾತ್ರೆಯ ಸಹ ಉಸ್ತುವಾರಿ ಅಮರ್ ಪ್ರಸಾದ್ ರೆಡ್ಡಿ ಅವರನ್ನು ತಮಿಳುನಾಡು ಪೊಲೀಸರು ಭಾನುವಾರ ಅವರ ನಿವಾಸದಿಂದ ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ. ಚೆನ್ನೈನ ಪನೈಯೂರ್ನಲ್ಲಿರುವ ಅಣ್ಣಾಮಲೈ ಅವರ ನಿವಾಸದ ಆವರಣದ ಗೋಡೆಯ ಹೊರಗೆ ಧ್ವಜಸ್ತಂಭವನ್ನು ತೆಗೆಯುವ ವಿಚಾರದಲ್ಲಿ ಗಲಾಟೆ ಸೃಷ್ಟಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.
ಅಮರ್ ಪ್ರಸಾದ್ ರೆಡ್ಡಿ ಮತ್ತು ಪಕ್ಷದ ಇತರ ಪದಾಧಿಕಾರಿಗಳ ಬಂಧನದ ಕುರಿತು ಅಣ್ಣಾಮಲೈ ಅವರು, 13 ಬಿಜೆಪಿ ಕಾರ್ಯಕರ್ತರನ್ನು ಜೈಲಿನಲ್ಲಿ ಇರಿಸಲಾಗಿದೆ. ತಮಿಳುನಾಡು ಪೊಲೀಸರು ಈಸ್ಟ್ ಇಂಡಿಯಾ ಕಂಪನಿಗಿಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ ಏಕೆಂದರೆ ಅವರು ಡಿಎಂಕೆಯ ಕೈವಾಡಗಳಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.












Click it and Unblock the Notifications