ಗುಜರಾತ್ : ಸಿಂಹಕ್ಕಿಂತಲೂ ಕ್ರೂರಿಗಳು ಇವರು..
Recommended Video

ನವೆಂಬರ್ 10, ಗುಜರಾತ್ : ಮನುಷ್ಯ ಉಳಿದೆಲ್ಲ ವ್ಯಾಘ್ರ ಪ್ರಾಣಿಗಳಿಗಿಂತಲೂ ಕ್ರೂರಿ ಎಂಬುದು ಎ.ಎನ್.ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿರುವ ಈ ವಿಡಿಯೋ ನೋಡಿದರೆ ತಿಳಿಯುತ್ತದೆ. ಕ್ರೂರ ಪ್ರಾಣಿ ಎಂದೇ ಕರೆಯಲ್ಪಡುವ ಸಿಂಹವನ್ನೂ ಬಿಡದ ಕ್ರೂರಿ ಯುವಕರು ಬೇಕೆಂದೇ ಸಿಂಹಗಳನ್ನು ಅಟ್ಟಾಡಿಸಿಕೊಂಡು ಹೋಗಿ ತೊಂದರೆ ನೀಡಿ ವಿಕೃತಿ ಮೆರೆದಿದ್ದಾರೆ.
ಗುಜರಾತ್ ನ ಗಿರ್ ಅರಣ್ಯ ಪ್ರದೇಶದಲ್ಲಿ ಯುವಕರು ಸಿಂಹ ಮತ್ತು ಸಿಂಹಿಣಿಯೊಂದನ್ನು ಉದ್ದೇಶಪೂರ್ವಕವಾಗಿ ತಮ್ಮ ಬೈಕುಗಳಲ್ಲಿ ಅಟ್ಟಾಡಿಸಿಕೊಂಡು ಹೋಗಿರುವ ವಿಡಿಯೊ ಸಾಮಾಜಿಕ ವೈರಲ್ ಆಗಿದ್ದು ಕೋಟ್ಯಾಂತರ ಮಂದಿ ಪ್ರಾಣಿ ಪ್ರಿಯರಿಂದ ಟೀಕೆಗೆ ಗುರಿಯಾಗಿದೆ.

ಎ.ಎನ್.ಐ ಸುದ್ದಿ ಸಂಸ್ಥೆಯು ಎರಡು ಪ್ರತ್ಯೇಕ ವಿಡಿಯೋಗಳನ್ನು ಒಂದು ಮಾಡಿ ಟ್ವೀಟ್ ಮಾಡಿದೆ. ವಿಡಿಯೋದ ಮೊದಲ ಭಾಗದಲ್ಲಿ ಕತ್ತಲೆ ರಾತ್ರಿಯಲ್ಲಿ ಸಿಂಹಿಣಿಯೊಂದನ್ನು ಕಾರಿನಲ್ಲಿ ಅಟ್ಟಾಡಿಸಿಕೊಂಡು ಹೋಗುತ್ತಿರುವ ದೃಶ್ಯವಿದೆ. ಕಾರಿನಲ್ಲಿದ್ದ ಜನ "ಶೂಟ್ ಮಾಡು, ಶೂಟ್ ಮಾಡು' ಎಂದು ಗುಜರಾತಿ ಭಾಷೆಯಲ್ಲಿ ಹೇಳುತ್ತಿರುವುದು ಕೇಳುತ್ತದೆ. ಗಾಬರಿಗೊಂಡ ಸಿಂಹ ಬಹು ಕಾಲ ರಸ್ತೆಯ ನಡುವೆ ಓಡಿ ಬಳಲಿ ಕೊನೆಗೆ ಕಾಡಿನ ಕತ್ತಲೆಯಲ್ಲಿ ಮರೆಯಾಗಿಬಿಡುತ್ತದೆ.
ಮತ್ತೊಂದು ದೃಶ್ಯದಲ್ಲಿ ಹಾಡು ಹಗಲೇ ನಾಲ್ಕು ಮಂದಿ ಯುವಕರು ಎರಡು ಬೈಕ್ ಗಳಲ್ಲಿ ಸಿಂಹ ಮತ್ತು ಸಿಂಹಿಣಿಯೊಂದನ್ನು ಅಟ್ಟಾಡಿಸಿಕೊಂಡು ಹೋಗುತ್ತಿರುವ ದೃಶ್ಯವಿದೆ. ಯುವಕರ ಬೈಕ್ ಆರ್ಭಟ, ಹಾರ್ನ್ ಶಬ್ದಕ್ಕೆ ಬೆದರಿದ ಹುಲಿಗಳು ಗಾಬರಿಯಾಗಿ ಓಡುವುದು ಕರುಣೆ ಉಕ್ಕಿಸುತ್ತದೆ.
ಎ.ಎನ್.ಐ ಮಾಡಿರುವ ಟ್ವೀಟ್ ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಬಹುತೇಕ ಜನರು 'ಯುವಕರ ಬೈಕು ಕಿತ್ತುಕೊಂಡು ಸಿಂಹಗಳ ನಡುವೆ ಬಿಡಬೇಕಿತ್ತು' ಎಂಬ ಸಲಹೆಯನ್ನು ನೀಡಿದ್ದಾರೆ. ಇನ್ನು ಕೆಲವರು ಅವರ ಬೈಕ್ ಗೆ ಮಾತ್ರವೇ ವೇಗವಿದೆ ಬುದ್ದಿ ತೆವಳುತ್ತಿದೆ, ಪ್ರಾಣಿಗಳಿಗೆ ಹಿಂಸೆ ಕೊಡಬಾರದೆಂಬ ಕನಿಷ್ಠ ಜ್ಞಾನವೂ ಅವರಿಗಿಲ್ಲ ಎಂದು ಸಿಟ್ಟು ಹೊರಹಾಕಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಮೂರು ಮಂದಿ ಯುವಕರನ್ನು ಬಂಧಿಸಿದ್ದಾರೆ.
-
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ












Click it and Unblock the Notifications