Chandrayaan-3: ಇಸ್ರೋಗೆ ಸಿಗದ ಸಂದೇಶ, ರೋವರ್ ಕಥೆ ಏನಾಯ್ತು?
ಚಂದ್ರನ ಮೇಲೆ ಬೆಚ್ಚಗೆ ಮಲಗಿರುವ ಇಸ್ರೋ ಸಂಸ್ಥೆಯ 'ವಿಕ್ರಮ್' ಲ್ಯಾಂಡರ್ & 'ಪ್ರಜ್ಞಾನ್' ರೋವರ್ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದೆ. ಚಂದ್ರನ ಮೇಲೆ ಸೂರ್ಯ ಮುಳುಗಿದ ನಂತರ ಲ್ಯಾಂಡರ್ & ರೋವರ್ ನಿದ್ರಾವಸ್ಥೆಗೆ ಜಾರಿದ್ದವು. ಆದರೆ ಈಗ ಮತ್ತೆ ಚಂದ್ರನ ಮೇಲೆ ಬೆಳಕು ಹರಿಯುತ್ತಿದ್ದು, ಅಲ್ಲಿ ಸೂರ್ಯ ಉದಯಿಸಿದ್ದಾನೆ. ಇಸ್ರೋ ಸಂಸ್ಥೆ ಅಲರ್ಟ್ ಆಗಿದೆ. ಹಾಗೇ ಮಹತ್ವದ ಮಾಹಿತಿಯೂ ಸಿಕ್ಕಿದೆ.
ಚಂದ್ರನ ಮೇಲೆ ವಾತಾವರಣ ಇಲ್ಲ, ಹೀಗಾಗಿ ಚಂದ್ರನ ಮೇಲೆ ಸೂರ್ಯ ಮುಳುಗಿದ ನಂತರ ಚಳಿ ತಡೆಯಲು ಆಗುವುದಿಲ್ಲ. ಹೀಗಾಗಿ ಅಲ್ಲಿ ಕಾರ್ಯನಿರ್ವಹಿಸಲು ಹೆಚ್ಚು ಶಕ್ತಿ ಅಗತ್ಯ. ಇದೇ ಕಾರಣಕ್ಕೆ ಲ್ಯಾಂಡರ್ & ರೋವರ್ ನಿದ್ರಾವಸ್ಥೆಗೆ ಜಾರಿದ್ದವು. ಈ ವೇಳೆ ಮತ್ತೆ ಶುಕ್ರವಾರ ಚಂದ್ರನ ಮೇಲೆ ಸೂರ್ಯೋದಯ ಆಗಿದೆ. ಹೀಗಾಗಿ ಲ್ಯಾಂಡರ್, ರೋವರ್ ನಿದ್ದೆಯಿಂದ ಎದ್ದೇಳಬೇಕಿತ್ತು. ಆದರೆ ಇಸ್ರೋ ಕಳುಹಿಸಿದ ಸಿಗ್ನಲ್ಗೆ ಇನ್ನು ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎನ್ನಲಾಗಿದೆ.

ಇಸ್ರೋ ಸಂಸ್ಥೆ ಹೇಳಿದ್ದು ಏನು?
ಅಷ್ಟಕ್ಕೂ ಇಂದು ಮಧ್ಯಾಹ್ನ ಸ್ಪೇಸ್ ಅಪ್ಲಿಕೇಷನ್ ಸೆಂಟರ್ ನಿರ್ದೇಶಕರಾದ ನೀಲೇಶ್ ದೇಸಾಯಿ ಅವರು, ರೋವರ್ ಮತ್ತು ಲ್ಯಾಂಡರ್ ಎಚ್ಚರಿಸುವ ಕಾರ್ಯ ಒಂದು ದಿನ ಮುಂದಕ್ಕೆ ಹೋಗಿದೆ ಎಂದಿದ್ದರು. ಆದರೆ ಇಂದು ಸಂಜೆ ಹೊಸ ಮಾಹಿತಿ ನೀಡಿರುವ ಇಸ್ರೋ ಸಂಸ್ಥೆ, 'ವಿಕ್ರಮ್' ಲ್ಯಾಂಡರ್ & 'ಪ್ರಜ್ಞಾನ್' ರೋವರ್ ಎಚ್ಚರಗೊಂಡ ಸ್ಥಿತಿ ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಆರಂಭಿಸಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಸಿಗ್ನಲ್ ಬಂದಿಲ್ಲ. ಹೀಗಾಗಿ ಸಂಪರ್ಕ ಮರು ಸ್ಥಾಪಿಸುವ ಪ್ರಯತ್ನಗಳು ಮುಂದುವರಿಯಲಿವೆ ಎಂದಿದೆ.
Chandrayaan-3 Mission:
— ISRO (@isro) September 22, 2023
Efforts have been made to establish communication with the Vikram lander and Pragyan rover to ascertain their wake-up condition.
As of now, no signals have been received from them.
Efforts to establish contact will continue.
ಚಂದ್ರನ ದಕ್ಷಿಣ ಧ್ರುವದ ಮೇಲೆ ಯಾವುದೇ ದೇಶ ಈವರೆಗೂ ಲ್ಯಾಂಡರ್ ಇಳಿಸಿಲ್ಲ. ಭಾರತವೇ ಈ ಸಾಧನೆ ಮಾಡಿದ ಮೊದಲ ದೇಶವಾಗಿತ್ತು. ಭಾರತ ಇದೀಗ ಮತ್ತೊಮ್ಮೆ ಚಂದ್ರನ ಮೇಲೆ ಮಲಗಿರುವ ರೋವರ್ & ಲ್ಯಾಂಡರ್ ಎದ್ದೇಳಿಸಲು ಯಶಸ್ವಿಯಾದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಏಕೆಂದರೆ ಈ ರೀತಿ ಕಾರ್ಯ ಮಾಡುತ್ತಿರುವ ಮೊದಲ ದೇಶ ಎಂಬ ಹೆಗ್ಗಳಿಕೆ ಕೂಡ ಭಾರತಕ್ಕೆ ಸಿಗಲಿದೆ. ಇದೇ ಕಾರಣಕ್ಕೆ ಇಸ್ರೋ ವಿಜ್ಞಾನಿಗಳು ಹಗಲು ರಾತ್ರಿ ಶ್ರಮವಹಿಸಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಆಗಸ್ಟ್ 23ರಂದು ಲ್ಯಾಂಡ್ ಆಗಿತ್ತು
ಹೌದು, ಇಸ್ರೋ ಆಗಸ್ಟ್ 23ಕ್ಕೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಅಂಗಳಕ್ಕೆ ಇಳಿಸಿತ್ತು. ಚಂದ್ರಯಾನ-2 ಎಡವಟ್ಟು ಮರುಕಳಿಸದಂತೆ ಎಚ್ಚರಿಕೆ ವಹಿಸಿ, ಲ್ಯಾಂಡರ್ ಇಳಿಸುವ ಪ್ರತಿಕ್ಷಣವೂ ಇಸ್ರೋಗೆ ಗೊತ್ತಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ವಿಕ್ರಮ್ಗೆ ಸರಿಯಾದ ಲ್ಯಾಂಡಿಂಗ್ ಸ್ಥಳ ತೋರಿಸಿತ್ತು. ಹಾಗೂ ಲ್ಯಾಂಡರ್ನ ಅಪಾಯ ಪತ್ತೆ & ಅಪಾಯ ತಪ್ಪಿಸುವ ಕ್ಯಾಮರಾ (LHDAC) ಕೂಡ ಇದರಲ್ಲಿತ್ತು. ಇದಿಷ್ಟೇ ಅಲ್ಲದೆ ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನ ಲ್ಯಾಂಡರ್ & ರೋವರ್ ಒಳಗೆ ಇದೆ. ಹೀಗಾಗಿ ಮತ್ತೊಂದು ಅಧ್ಯಯನಕ್ಕೆ ಭಾರತ ಸಜ್ಜಾಗಿದೆ. ಶನಿವಾರದ ಒಳಗೆ ಸಿಹಿಸುದ್ದಿ ಸಿಗುವ ಸಾಧ್ಯತೆ ಇದೆ.
ಚಂದ್ರನ ಮೇಲೆ ಏನೆಲ್ಲಾ ಇದೆ?
ಈಗಾಗಲೇ ಪ್ರಗ್ಯಾನ್ ರೋವರ್ ನೀಡಿರುವ ಮಾಹಿತಿಯ ಪ್ರಕಾರ, ಚಂದ್ರನ ದಕ್ಷಿಣದಲ್ಲಿ ಅಲ್ಯೂಮಿನಿಯಂ (Al), ಸಲ್ಫರ್ (S), ಕ್ಯಾಲ್ಸಿಯಂ (Ca), ಕಬ್ಬಿಣ (Fe) ಸೇರಿದಂತೆ ಕ್ರೋಮಿಯಂ (Cr), ಟೈಟಾನಿಯಂ (Ti) ಇದೆ. ಇದಲ್ಲದೆ ಮ್ಯಾಂಗನೀಸ್ (Mn), ಸಿಲಿಕಾನ್ (Si), ಆಮ್ಲಜನಕ (O) ಕೂಡ ಇರುವುದು ಗೊತ್ತಾಗಿದೆ. ಆದರೆ ನೀರು ಹುಡುಕುವ ಕೆಲಸ ನಡೆಯಬೇಕು. ಚಂದ್ರನ ಮೇಲೆ ನೀರು ಸಿಕ್ಕರೆ ಇಸ್ರೋ ಮಾತ್ರವಲ್ಲ ಮನುಷ್ಯನೇ ಗೆದ್ದಂತೆ.
ಇದೀಗ ಇಸ್ರೋ ಸಂಸ್ಥೆ ನಿದ್ದೆಯಲ್ಲಿರುವ ರೋವರ್ & ಲ್ಯಾಂಡರ್ ನಿದ್ದೆಯಿಂದ ಎದ್ದೇಳುವಂತೆ ಮಾಡಿ, ಅಧ್ಯಯನ ನಡೆಸಲು ಆರಂಭಿಸಿದರೆ ಆ ಕೆಲಸ ಪೂರ್ತಿ ಆಗಲಿದೆ. ನೀರು ಹುಡುಕುವ ಕೆಲಸ ಪೂರ್ಣವಾದರೆ ಭಾರತದ ಯೋಜನೆ ಹೊಸ ಇತಿಹಾಸ ನಿರ್ಮಿಸಿದಂತೆ. ಹೀಗೆ ಹೊಸ ಇತಿಹಾಸ ನಿರ್ಮಿಸಲು ಇಸ್ರೋಗೆ ಮತ್ತೊಂದು ಉತ್ತಮ ಅವಕಾಶ ಸಿಕ್ಕಿದೆ. ಈ ಕೆಲಸ ಮಾಡಿದರೆ ಭವಿಷ್ಯದಲ್ಲಿ ಮನುಷ್ಯರು ಚಂದ್ರನ ಮೇಲೆ ವಾಸಿಸಲು ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತದೆ.
-
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ












Click it and Unblock the Notifications