ರಾನ್ಸಮ್ವೇರ್ ಭೀತಿಗೆ ಎಟಿಎಂ ವ್ಯವಸ್ಥೆಯಲ್ಲಿ ವ್ಯತ್ಯಯ
ಎಟಿಎಂಗಳಲ್ಲಿರುವ ವಿಂಡೋಸ್ ಸಿಸ್ಟಂಗಳನ್ನು ಅಪ್ಡೇಟ್ ಮಾಡುವಂತೆ ಆರ್ಬಿಐ ಹೇಳಿದೆ. ಅಪ್ಡೇಟ್ ಮಾಡದೇ ಎಟಿಂಎಗಳು ಕಾರ್ಯಚರಿಸುವುದು ಬೇಡ ಎಂದು ಸ್ಪಷ್ಟ ಸಂದೇಶವನ್ನು ರಿಸರ್ವ್ ಬ್ಯಾಂಕ್ ನೀಡಿದೆ.
ನವದೆಹಲಿ, ಮೇ 15: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಧೀನದಲ್ಲಿರುವ ಎಲ್ಲಾ ಬ್ಯಾಂಕುಗಳಿಗೆ ಎಟಿಂಎಂ ಸಾಫ್ಟ್ ವೇರ್ ಗಳನ್ನು ಅಪ್ಡೇಟ್ ಮಾಡುವಂತೆ ಸೂಚನೆ ನೀಡಿದೆ. ಜಗತ್ತಿನಾದ್ಯಂತ ಬ್ಯಾಂಕಿಂಗ್ ಸಿಸ್ಟಂ ಮೇಲೆ ವಾನ್ನಕ್ರೈ ರಾನ್ಸಮ್ವೇರ್ ದಾಳಿ ನಡೆದಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ಮತ್ತೆ ದೇಶದಾದ್ಯಂತ ಎಟಿಎಂ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಲಿದೆ.
ಎಟಿಎಂಗಳಲ್ಲಿರುವ ವಿಂಡೋಸ್ ಸಿಸ್ಟಂಗಳನ್ನು ಅಪ್ಡೇಟ್ ಮಾಡುವಂತೆ ಆರ್ಬಿಐ ಹೇಳಿದೆ. ಅಪ್ಡೇಟ್ ಮಾಡದೇ ಎಟಿಂಎಗಳು ಕಾರ್ಯಚರಿಸುವುದು ಬೇಡ ಎಂದು ಸ್ಪಷ್ಟ ಸಂದೇಶವನ್ನು ರಿಸರ್ವ್ ಬ್ಯಾಂಕ್ ನೀಡಿದೆ.[ಸೈಬರ್ ದಾಳಿ 'ರಾನ್ಸಮ್ವೇರ್'ನಿಂದ ತಪ್ಪಿಸಿಕೊಳ್ಳುವುದು ಹೇಗೆ?]

ದೇಶದಲ್ಲಿ ಈಗಾಗಲೇ ಹಲವು ರಾನ್ಸಮ್ವೇರ್ ದಾಳಿ ನಡೆದ ವರದಿಯಾದ ಹಿನ್ನಲೆಯಲ್ಲಿ ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ರಿಸರ್ವ್ ಬ್ಯಾಂಕ್ ಹೇಳಿದೆ.[ಕೇರಳದ ವಯನಾಡು, ಕೊಲ್ಕೊತ್ತಾದಲ್ಲೂ ರಾನ್ಸಮ್ವೇರ್ ದಾಳಿ]
ಶನಿವಾರ ಹೈದರಾಬಾದ್ ಪೊಲೀಸರ 102 ಕಂಪ್ಯೂಟರ್ ಗಳು ವಾನ್ನಕ್ರೈ ದಾಳಿಗೆ ಗುರಿಯಾಗಿತ್ತು. ಇನ್ನು ನಿಸ್ಸಾನ್ ರೆನಾಲ್ಟ್ ಕಾರು ಉತ್ಪಾದನೆಯೂ ಮಾಲ್ವೇರ್ ದಾಳಿಯಿಂದ ಸ್ಥಗಿತವಾಗಿತ್ತು. ಇನ್ನು ಇಂದು ವಯನಾಡು ಹಾಗೂ ಕೊಲ್ಕೊತ್ತಾದಲ್ಲಿ ಇದೇ ರೀತಿಯ ರಾನ್ಸಮ್ವೇರ್ ದಾಳಿಗಳು ನಡೆದಿವೆ.[ರಾನ್ಸಮ್ವೇರ್ ಸೈಬರ್ ದಾಳಿಗೆ ತುತ್ತಾದ ಮೊದಲ ಕನ್ನಡಿಗ ಹಾವೇರಿಯವರು]
ದೇಶದಲ್ಲಿ ಒಟ್ಟು 2.25 ಲಕ್ಷ ಎಟಿಎಂಗಳಿದ್ದು ವರದಿಗಳ ಪ್ರಕಾರ ಶೇಕಡಾ 60 ಕಂಪ್ಯೂಟರ್ ಗಳು ಔಟ್ ಡೇಟ್ ಆದ 'ವಿಂಡೋಸ್ ಎಕ್ಸ್ ಪಿ' ಸಿಸ್ಟಂನಲ್ಲೇ ಕಾರ್ಯಚರಿಸುತ್ತಿವೆ. ಹೀಗಾಗಿ ಈ ಸಿಸ್ಟಂಗಳು ಅಪ್ಟೇಡ್ ಆಗುವವರೆಗೆ ಈ ಎಟಿಎಂಗಳು ಕಾರ್ಯಚರಿಸುವುದಿಲ್ಲ.
{promotion-urls}
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications