ರಾನ್ಸಮ್ವೇರ್ ಸೈಬರ್ ದಾಳಿಗೆ ತುತ್ತಾದ ಮೊದಲ ಕನ್ನಡಿಗ ಹಾವೇರಿಯವರು
ವಾನ್ನಕ್ರೈ ಎಂಬ ರಾನ್ಸಮ್ವೇರ್ ಸೈಬರ್ ದಾಳಿಗೆ ಮೇ 15 ಶನಿವಾರದಂದು ಇಡೀ ವಿಶ್ವವೇ ಬೆಚ್ಚಿತ್ತು. ಕರ್ನಾಟಕದಲ್ಲೂ ಈ ಸೈಬರ್ ದಾಳಿ ನಡೆದದಿದ್ದು, ಹಾವೇರಿಯ ಹಿರೆಕೆರೂರ್ ನಿವಾಸಿ ಕೆ ಎಚ್ ನಾಯಕ್ ಈ ದಾಳಿಗೆ ತುತ್ತಾದ ಮೊದಲ ಕನ್ನಡಿಗ.
ಹಾವೇರಿ, ಮೇ 15: ವಾನ್ನಕ್ರೈ ಎಂಬ ರಾನ್ಸಮ್ವೇರ್ ಸೈಬರ್ ದಾಳಿಗೆ ಮೇ 15 ಶನಿವಾರದಂದು ಇಡೀ ವಿಶ್ವವೇ ಬೆಚ್ಚಿತ್ತು. ಕರ್ನಾಟಕದಲ್ಲೂ ಈ ಸೈಬರ್ ದಾಳಿ ನಡೆದದಿದ್ದು, ಹಾವೇರಿಯ ಹಿರೆಕೆರೂರ್ ನಿವಾಸಿ ಕೆ ಎಚ್ ನಾಯಕ್ ಈ ದಾಳಿಗೆ ತುತ್ತಾದ ಮೊದಲ ಕನ್ನಡಿಗ.
ಅವರೇ ಹೇಳುವಂತೆ ಶುಕ್ರವಾರ (ಮೇ 12) ರಂದೇ ನನ್ನ ಕಂಪ್ಯೂಟರ್ ಹ್ಯಾಂಗ್ ಆಗುತ್ತಿತ್ತು. ಕಾರಣ ತಿಳಿಯಲಿಲ್ಲ. ಮೇ 13 ಶನಿವಾರ ಬೆಳಗ್ಗೆ ಕಂಪ್ಯೂಟರ್ ಆನ್ ಮಾಡುತ್ತಿದ್ದಂತೆಯೇ, ನನ್ನ ಕಂಪ್ಯೂಟರ್ ಹ್ಯಾಕ್ ಆಗಿತ್ತು. ಸದ್ಯಕ್ಕೆ ನನ್ನ ಕಂಪ್ಯೂಟರ್ ನಲ್ಲಿನ ಯಾವ ಫೈಲ್ ಅನ್ನೂ ಓಪ್ ಮಾಡಲು ಸಾಧ್ಯವಾಗುತ್ತಿಲ್ಲ.
ಹ್ಯಾಕರ್ಸ್ ಗಳು ಇದೀಗ ಅವರಲ್ಲಿ ಬಿಟ್ ಕಾಯ್ನ್ ಮೂಲಕ ರಾನ್ಸಮ್ ಗೆ ಬೇಡಿಕೆ ಇಟ್ಟಿದ್ದಾರೆ![ಭೀಕರ ಸೈಬರ್ ದಾಳಿ ಬಗ್ಗೆ ಎಚ್ಚರಿಸಿದ್ದ ಭಾರತೀಯ ಮೂಲದ ವೈದ್ಯ]

ಈಗಾಗಲೇ ಜಾಗತಿಕ ಸೈಬರ್ ಲೋಕವನ್ನು ತಲ್ಲಣಗೊಳಿಸಿರುವ ವಾನ್ನಕ್ರೈ ಎಂಬ ರಾನ್ಸಮ್ವೇರ್ ಸೈಬರ್ ದಾಳಿಯಿಂದಾಗಿ ಸುಮಾರು 150 ದೇಶದ ಲಕ್ಷಾಂತರ ಜನರ ಕಂಪ್ಯೂಟರ್ ಗಳು ಹ್ಯಾಕ್ ಆಗಿವೆ.












Click it and Unblock the Notifications