5 ಲಕ್ಷ ಮಂದಿಗೆ ಉದ್ಯೋಗ? ಆ್ಯಪಲ್ 3 ವರ್ಷದ ಪ್ಲ್ಯಾನ್ ಸೂಪರ್!
ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಸೇಫ್ ಅನ್ನೋ ಮಾತು ಇದೆ. ಇದೇ ಕಾರಣಕ್ಕೆ ಜನರು, ಐಫೋನ್ ಬಳಸಲು ಬಯಸುತ್ತಾರೆ. ಅದ್ರಲ್ಲೂ ಶ್ರೀಮಂತರು ತಮ್ಮ ಗೌಪ್ಯ ಮಾಹಿತಿ ಕಾಪಾಡಿಕೊಳ್ಳಲು ಈ ರೀತಿಯಾಗಿ ಐಫೋನ್ ಮೊರೆ ಹೋಗ್ತಾರೆ. ಹೀಗಿದ್ದಾಗ ಐಫೋನ್ ತಯಾರಿಸುವ ಸಂಸ್ಥೆಯಾದ 'ಆ್ಯಪಲ್' ಕಂಪನಿ ಭಾರತದಲ್ಲೇ ಬೃಹತ್ ಪ್ರಮಾಣದಲ್ಲಿ ಐಫೋನ್ ತಯಾರಿಸಲು, ಕಳೆದ ಕೆಲವು ವರ್ಷಗಳಿಂದ ಕ್ರಮ ಕೈಗೊಂಡಿದೆ. ಈ ಸಮದಯಲ್ಲೇ, ಮತ್ತೊಂದು ಗುಡ್ ನ್ಯೂಸ್ ಕೂಡ ಸಿಕ್ಕಿದೆ. ಭಾರತದಲ್ಲಿ ಲಕ್ಷ ಲಕ್ಷ ಉದ್ಯೋಗ ಸೃಷ್ಟಿ ಆಗೋದು ಗ್ಯಾರಂಟಿ ಆಗಿದೆ.
5 ಲಕ್ಷ ಜನರಿಗೆ ಉದ್ಯೋಗ?
ಒಂದು ಕಾಲ ಇತ್ತು ಐಫೋನ್ ತಗೊಬೇಕು ಅಂದರೆ ತುಂಬಾ ಕಷ್ಟ ಆಗುತ್ತಿತ್ತು. ಅದರಲ್ಲಿಯೂ ಐಫೋನ್ ಅಂದ್ರೆ ಅದು ಶ್ರೀಮಂತರ ಫೋನ್ ಎಂಬ ಮಾತು ಕೂಡ ಕೇಳಿಬರುತ್ತಿತ್ತು. ಆದ್ರೆ ಈಗ ಜಮಾನ ಬದಲಾಗಿದೆ ಕಾಲ ಬದಲಾಗಿ ಹೋಗಿದೆ. ಯಾರು ಬೇಕಾದ್ರೂ, ಐಫೋನ್ ಸುಲಭವಾಗಿ ಖರೀದಿ ಮಾಡಬಹುದು. ಅದ್ರಲ್ಲೂ ಬಜೆಟ್ ಫ್ರೆಂಡ್ಲಿಯಾಗಿ ಐಫೋನ್ ಖರೀದಿ ಮಾಡಬಹುದು. ಇಷ್ಟೆಲ್ಲಾ ಸೌಕರ್ಯ ನೀಡುತ್ತಿರುವ 'ಆ್ಯಪಲ್' ಭಾರತದಲ್ಲೇ ತನ್ನ ತಯಾರಿಕ ಘಟಕಗಳನ್ನ ವಿಸ್ತರಣೆ ಮಾಡಲು ಮುಂದಾಗುತ್ತಿದ್ದು, ಇದರಿಂದ ಭರ್ಜರಿ ಲಾಭವೂ ಸಿಗುತ್ತಿದೆ. ಭಾರತದ 5 ಲಕ್ಷ ಜನರಿಗೆ ಉದ್ಯೋಗ ಸಿಗುವುದು ಬಹುತೇಕ ಪಕ್ಕಾ ಆಗುತ್ತಿದೆ.

ಭಾರತದಲ್ಲಿಯೇ ಫ್ಯಾಕ್ಟರಿ ಸ್ಥಾಪನೆ?
ಅಂದಹಾಗೆ ಈಗ ಇರುವ ಮಾಹಿತಿ ಪ್ರಕಾರ 'ಆ್ಯಪಲ್' ಫೋನ್ಗಳ ಖರೀದಿ ಹೆಚ್ಚಾಗುತ್ತಿದ್ದು, ಭಾರತದಲ್ಲಿ ಈ ಕ್ರೇಜ್ ಇದೀಗ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಇದೇ ಕಾರಣಕ್ಕೆ ಐಫೋನ್ ತಯಾರಿಕೆಗೆ 'ಆ್ಯಪಲ್' ಕಂಪನಿ ಭಾರತದಲ್ಲಿಯೇ ಫ್ಯಾಕ್ಟರಿ ಸ್ಥಾಪಿಸುತ್ತಿದೆ. ಸದ್ಯಕ್ಕೆ ಐಫೋನ್ ತಯಾರಿಸುವ ಕಂಪನಿ ಆ್ಯಪಲ್, ತನ್ನ ಬಿಡಿಭಾಗ ತಯಾರಿಸಿ ಪೂರೈಸುವ ಸಂಸ್ಥೆಗಳ ಮೂಲಕ ಮುಂದಿನ 3 ವರ್ಷದಲ್ಲಿ ಒಟ್ಟಾರೆ 5 ಲಕ್ಷ ಉದ್ಯೋಗಿಗಳ ನೇಮಕಕ್ಕೆ ನಿರ್ಧರಿಸಿದೆ ಎಂಬ ವಿಚಾರ ಈಗ ಹಲ್ಚಲ್ ಎಬ್ಬಿಸಿದೆ. ಹಾಗೇ ಉದ್ಯೋಗ ಆಕಾಂಕ್ಷಿಗಳಿಗು ಕೂಡ, ಇದರಿಂದ ಭರ್ಜರಿ ನ್ಯೂಸ್ ಸಿಕ್ಕಂತಾಗಿದೆ.
3.32 ಲಕ್ಷ ಕೋಟಿ ರೂಪಾಯಿ ಬಂಡವಾಳ?
ಮತ್ತೊಂದು ಕಡೆ ಭಾರತದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿ 'ಐಫೋನ್' ತಯಾರಿಕೆಯನ್ನ ಮಾಡುತ್ತಿದೆ. ಇದೇ ಕಾರಣಕ್ಕೆ ಅಂತಾ ಇದೀಗ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿ ಭಾರತದಲ್ಲೇ 2 ಘಟಕ ಸ್ಥಾಪನೆ ಮಾಡಿದೆ. ಇಲ್ಲಿ ಆ್ಯಪಲ್ ಕಂಪನಿಯ ಉತ್ಪನ್ನ ಸಿದ್ಧವಾಗುತ್ತಿವೆ. ಹೀಗೆ, ಭಾರತದಲ್ಲೇ ಆ್ಯಪಲ್ ಕಂಪನಿಯ ಉತ್ಪನ್ನ ತಯಾರಿಸುತ್ತಿರುವ ಹಿನ್ನೆಲೆ ಲಾಭವೂ ಸಖತ್ ಆಗಿದೆ. ಹೀಗಾಗಿ ಭಾರತದಲ್ಲೇ ಮತ್ತಷ್ಟು ತಯಾರಿಕಾ ಘಟಕಗಳನ್ನು ವಿಸ್ತರಣೆ ಮಾಡೋಕೆ, ಆ್ಯಪಲ್ ಕಂಪನಿ ನಿರ್ಧಾರ ಮಾಡಿದೆ ಎನ್ನಲಾಗಿದೆ. ಸದ್ಯಕ್ಕೆ 1.5 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ಹೀಗೆ ಮುಂದಿನ 3-4 ವರ್ಷಗಳಲ್ಲಿ 'ಆ್ಯಪಲ್' ಸಂಸ್ಥೆ ಭಾರತದಲ್ಲಿ 5 ಪಟ್ಟು ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಲು ನಿರ್ಧಾರ ಮಾಡಿದೆ. ಇದೇ ಕಾರಣಕ್ಕೆ, ₹3.32 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಲು ನಿರ್ಧಾರ ಕೂಡ ಮಾಡಿದೆ ಎನ್ನಲಾಗಿದೆ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು












Click it and Unblock the Notifications