ANI's Twitter Blocked: ಎಎನ್ಐ ಟ್ವಿಟ್ಟರ್ ಖಾತೆ ಬ್ಲಾಕ್ ಮಾಡಿದ ಟ್ವಿಟ್ಟರ್ ಸಂಸ್ಥೆ, ಕಾರಣವೇನು?
ಬೆಂಗಳೂರು, ಏಪ್ರಿಲ್ 29: ಭಾರತಾದ್ಯಂತ ಕ್ಷಣಾರ್ಧದಲ್ಲಿ ಸುದ್ದಿ ಪಸರಿಸುವ ಪ್ರಮುಖ ಏಜೆನ್ಸಿಯಾಗಿರುವ 'ಏಷಿಯನ್ ನ್ಯೂಸ್ ಇಂಟರ್ನ್ಯಾಷನ್' (ANI) ಟ್ವಿಟ್ಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. ಈ ಮೂಲಕ ಕೋಟ್ಯಂತರ ಎಎನ್ಐ ಅನುಯಾಯಿಗಳಿಗೆ ಕಹಿ ಸುದ್ದಿಯೊಂದು ಹೊರ ಬಿದ್ದಿದೆ.
So those who follow @ANI bad news, @Twitter has locked out India’s largest news agency which has 7.6 million followers and sent this mail - under 13 years of age! Our gold tick was taken away, substituted with blue tick and now locked out. @elonmusk pic.twitter.com/sm8e765zr4
— Smita Prakash (@smitaprakash) April 29, 2023
ಚಿಕ್ಕದಾಗಿ, ತತಕ್ಷಣಕ್ಕೆ ಮಾಹಿತಿ ನೀಡಲು ಪೋಸ್ಟ್ ಮಾಡುವ ಮೈಕ್ರೋ ಬ್ಲಾಗಿಂಗ್ ಅನ್ನು ನಿರ್ವಹಿಸಲು ಸುಮಾರು 13 ವರ್ಷವಾಗಿರಬೇಕು ಎಂದು ಟ್ವಿಟ್ಟರ್ ಸಂಸ್ಥೆ ಹೇಳುತ್ತದೆ. ಈ 3 ವರ್ಷ ನಿಯಮ ಪೂರೈಸಲು ಎಎನ್ಐ ವಿಫಲವಾಗಿದೆ ಎಂಬ ಕಾರಣಕ್ಕೆ ದೇಶಾದ್ಯಂತ ಸುದ್ದಿ ಜಾಲ ಹೊಂದಿರುವ ANI ಟ್ವಿಟ್ಟರ್ ಖಾತೆಯನ್ನು ಸಂಸ್ಥೆ ಶನಿವಾರ ಬ್ಲಾಕ್ ಮಾಡಲಾಗಿದೆ.

ಭಾರತದಲ್ಲಿ ಸುಮಾರು 100 ಶಾಖೆಗಳನ್ನು ಹೊಂದಿರುವ 'ಏಷಿಯನ್ ನ್ಯೂಸ್ ಇಂಟರ್ನ್ಯಾಷನ್' (ANI) ಹೊಂದಿದೆ. ಎಎನ್ಐಗೆ ಟ್ವಿಟ್ಟರ್ ನಿರ್ಬಂಧ ವಿಧಿಸಿದೆ. ಹೀಗಾಗಿ ಎಎನ್ಐ ಟ್ವೀಟ್ ಗಳು ಶನಿವಾರ ಪೋಸ್ಟ್ ಆಗಿಲ್ಲ. ಎಎನ್ಐ ಡಿಜಿಟಲ್ ಖಾತೆ ಇದೆ. ಈ ಕುರಿತು ಟ್ವಿಟ್ಟರ್ ಸಂಸ್ಥೆ ಎಎನ್ಐಗೆ ಕಳುಹಿಸಿರುವ ಮೇಲ್ ನ ಸ್ಕ್ರೀನ್ ಶಾಟ್ ಅನ್ನು ಎಎನ್ಐ ಸಂಪಾದಕಿಯಾದ ಸ್ಮಿತಾ ಪ್ರಕಾಶ್ ವೈಯಕ್ತಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ANI ಗೆ 7.6 ಮಿಲಿಯನ್ ಫಾಲೋವರ್ಸ್
ಎಎನ್ಐ ಸಂಸ್ಥೆ ದೇಶಾದ್ಯಂತ 7.6 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದೆ. ಸದ್ಯ ಟ್ವಿಟ್ಟರ್ ಸಂಸ್ಥೆ ನಮ್ಮ 'ಏಷಿಯನ್ ನ್ಯೂಸ್ ಇಂಟರ್ನ್ಯಾಷನ್' (ANI) ಟ್ವಿಟ್ಟರ್ನಿಂದ ತೆಗೆದು ಹಾಕಿದೆ. ಇದು ಎಲ್ಲ ಅನುಯಾಯಿಗಳಿಗೆ ಕಹಿ ಸುದ್ದಿಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಮೊದಲು ಎಎನ್ಐ ಗೋಲ್ಡ್ ಟಿಕ್ ಹೊಂದಿದ್ದು, ನಂತರ ಬ್ಲೂ ಟಿಕ್ ಹೊಂದಿತ್ತು. ಇದೀಗ ಹ್ಯಾಂಡಲ್ಗೆ ನಿರ್ಬಂಧ ವಿಧಿಸಲಾಗಿದೆ. ಟ್ವಿಟ್ಟರ್ ಸಂಸ್ಥೆ ಈ ನಿರ್ಧಾರವು ತಮಗೇ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದ್ದು, ದಯವಿಟ್ಟು ಎಎನ್ಐ ಟ್ವಿಟ್ಟರ್ ಹ್ಯಾಂಡರ್ ಪುನರ್ಸ್ಥಾಪನೆಗೆ ಅವಕಾಶ ನೀಡುವಂತೆ ಸ್ಮಿತಾ ಪ್ರಕಾಶ್ ಮನವಿ ಮಾಡಿದ್ದಾರೆ.

ಸಂಪಾದಕಿಯ ಟ್ವೀಟ್ಗೆ ಪ್ರಕ್ರಿಯಿಸಿದ ಹಲವರು, ಎಲಾನ್ ಮಸ್ಕ್ ಬಂದ ನಂತರ ಟ್ವಿಟ್ಟರ್ನಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ದೇಶದ ಪ್ರಮುಖ ಸುದ್ದಿ ಸಂಸ್ಥೆಗಳಲ್ಲಿ ಎಎನ್ಐ ಸಹ ಒಂದು. ಇಂತಹ ವಿಲಕ್ಷಣ ಕಾರಣದಿಂದಾಗಿ ಅದಕ್ಕೆ ನಿರ್ಬಂಧ ವಿಧಿಸುವುದು ಎಷ್ಟು ಸರಿ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತದ ಟ್ವಿಟ್ಟರ್ ಮಟ್ಟಿಗೆ ಇದೊಂದು ಬೃಹತ್ ಸಮಸ್ಯೆಯಾಗಿದ್ದು, ಕೂಡಲೇ ಬಗೆಹರಿಸಬೇಕು. ಎಎನ್ಐಗೆ ಟ್ವಿಟ್ಟರ್ನಲ್ಲಿ ಅವಕಾಶ ನೀಡಬೇಕು ಎಂದು ನೆಟ್ಟಿಗರು ಮನವಿ ಮಾಡಿದ್ದಾರೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications