Get Updates
Get notified of breaking news, exclusive insights, and must-see stories!

Ambani: ಕೇರಳದ ದೇವಾಲಯಗಳು, ಆನೆಗಳ ಕಲ್ಯಾಣಕ್ಕಾಗಿ ₹18 ಕೋಟಿ ದೇಣಿಗೆ ನೀಡಿದ ಅನಂತ್ ಅಂಬಾನಿ

ಮುಂಬೈ: ದೇಶದ ಪ್ರತಿಷ್ಠಿತ ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಅವರು ಕೇರಳದ ಎರಡು ಪ್ರಮುಖ ಧಾರ್ಮಿಕ ತಾಣಗಳಾದ ರಾಜರಾಜೇಶ್ವರಂ ದೇವಾಲಯ ಮತ್ತು ಗುರುವಾಯೂರ್ ದೇವಾಲಯಕ್ಕೆ ಭೇಟಿ ನೀಡಿದರು. ವಿಶೇಷ ಪೂಜೆ, ಪುನಸ್ಕಾರ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಂರಕ್ಷಣೆ ಮತ್ತು ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿವಿಧ ಉಪಕ್ರಮಗಳನ್ನು ಘೋಷಿಸಿದರು. ಎರಡೂ ದೇವಾಲಯಗಳಿಗೆ ಒಟ್ಟು 6 ಕೋಟಿ ರೂಪಾಯಿ ದೇಣಿಗೆ ನೀಡಿದರು ಮತ್ತು ರಾಜರಾಜೇಶ್ವರಂ ದೇವಾಲಯದ ಸಮಗ್ರ ಪುನಃಸ್ಥಾಪನೆಗಾಗಿ 12 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ಉತ್ತರ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ಪಟ್ಟಣದಲ್ಲಿ ಇರುವ ಪ್ರಾಚೀನ ರಾಜರಾಜೇಶ್ವರಂ ದೇವಾಲಯಕ್ಕೆ ಅನಂತ್ ಅಂಬಾನಿ 3 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ದೇವಾಲಯದ ಸಮಗ್ರ ನವೀಕರಣಕ್ಕಾಗಿ ಅವರು ಹೆಚ್ಚುವರಿಯಾಗಿ 12 ಕೋಟಿ ರೂಪಾಯಿ ದೇಣಿಗೆ ನೀಡಲಿದ್ದಾರೆ. ಈ ಯೋಜನೆಯಲ್ಲಿ ಬಹಳ ದಿನಗಳಿಂದ ಶಿಥಿಲಾವಸ್ಥೆಯಲ್ಲಿ ಇದ್ದ ದೇವಾಲಯದ ಐತಿಹಾಸಿಕ ಪೂರ್ವ ಗೋಪುರದ ಪುನರ್ನಿರ್ಮಾಣ ಮತ್ತು ಭಕ್ತರ ಅನುಕೂಲಕ್ಕಾಗಿ ಮೂಲಸೌಕರ್ಯ ಮತ್ತು ಪಾರ್ಕಿಂಗ್ ಸೌಲಭ್ಯಗಳ ಸುಧಾರಣೆ ಸೇರಿವೆ.

Anant Ambani

ಆ ನಂತರ, ಅನಂತ್ ಅಂಬಾನಿ ಮಧ್ಯ ಕೇರಳದ ತ್ರಿಶೂರ್ ಜಿಲ್ಲೆಯ ಪ್ರಸಿದ್ಧ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಾಲಯದ ಟ್ರಸ್ಟ್‌ಗೆ 3 ಕೋಟಿ ರೂಪಾಯಿ ದೇಣಿಗೆ ನೀಡಿದರು. ದೇವಾಲಯ ಸಂಪ್ರದಾಯಗಳಿಗೆ ಸಂಬಂಧಿಸಿದ ಆನೆಗಳ ಕಲ್ಯಾಣಕ್ಕಾಗಿ ಆಸ್ಪತ್ರೆಗಳು, ಸರಪಳಿ ಇಲ್ಲದ ಆಶ್ರಯಗಳು ಮತ್ತು ಆಧುನಿಕ ಆರೈಕೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಉಪಕ್ರಮಗಳಿಗೆ ಅವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಭಾರತೀಯ ರೈಲ್ವೆ ಸುಧಾರಣೆ: 1,364 ಕೋಟಿ ರೂ.ವೆಚ್ಚದ 'ಕವಚ' ಮತ್ತು ಸಿಗ್ನಲಿಂಗ್ ಯೋಜನೆಗಳಿಗೆ ಅನುಮೋದನೆ
ಭಾರತೀಯ ರೈಲ್ವೆ ಸುಧಾರಣೆ: 1,364 ಕೋಟಿ ರೂ.ವೆಚ್ಚದ 'ಕವಚ' ಮತ್ತು ಸಿಗ್ನಲಿಂಗ್ ಯೋಜನೆಗಳಿಗೆ ಅನುಮೋದನೆ

ಸಾಂಪ್ರದಾಯಿಕ ಪದ್ಧತಿಗಳನ್ನು ಕಾಪಾಡಿಕೊಳ್ಳುವಾಗ ಪ್ರಾಣಿಗಳಿಗೆ ಮಾನವೀಯ ಮತ್ತು ವೈಜ್ಞಾನಿಕ ಆರೈಕೆಯನ್ನು ದೊರಕಿಸಲು ಮೀಸಲಾದ ಆಸ್ಪತ್ರೆಗಳು, ಸರಪಳಿ ಇಲ್ಲದಂಥ ಆಶ್ರಯಗಳು ಮತ್ತು ಆಧುನಿಕ ಆರೈಕೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳು ಈ ಉಪಕ್ರಮಗಳಲ್ಲಿ ಸೇರಿವೆ. ಈ ಉಪಕ್ರಮವು ಅನಂತ್ ಅಂಬಾನಿ ಅವರ ವನ್ಯಜೀವಿ ಸಂರಕ್ಷಣಾ ಯೋಜನೆಯಾದ 'ವಂತಾರ'ಕ್ಕೆ ಸಂಬಂಧಿಸಿದ ಪ್ರಯತ್ನಗಳ ಭಾಗವೆಂದು ಪರಿಗಣಿಸಲಾಗಿದೆ.

ಪರಂಪರೆ ಸಂರಕ್ಷಣೆ ಸಾಮೂಹಿಕ ಜವಾಬ್ದಾರಿ: ಅಂಬಾನಿ

ದೇವಸ್ಥಾನ ಭೇಟಿಯ ಬಳಿಕ ಮಾತನಾಡಿದ ಅನಂತ್ ಅಂಬಾನಿ ಅವರು, ಭಾರತದ ಆಧ್ಯಾತ್ಮಿಕ ಸಂಪ್ರದಾಯಗಳು ಕೇವಲ ಪೂಜಾ ಸ್ಥಳಗಳಲ್ಲ, ಬದಲಾಗಿ ಸಮಾಜ, ಪ್ರಕೃತಿ ಮತ್ತು ಕರುಣೆಯನ್ನು ಸಂಪರ್ಕಿಸುವ ಜೀವಂತ ಸಂಸ್ಥೆಗಳು ಎಂದು ಹೇಳಿದರು. ಭವಿಷ್ಯದ ಪೀಳಿಗೆಗೆ ಈ ಪರಂಪರೆಯನ್ನು ಸಂರಕ್ಷಿಸುವುದು ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.

ಅಂಬಾನಿ ಅವರ ಭೇಟಿಯ ವೇಳೆ ದೇವಾಲಯ ಆಡಳಿತವು ಅವರನ್ನು ಸಾಂಪ್ರದಾಯಿಕ ಗೌರವಗಳೊಂದಿಗೆ ಸ್ವಾಗತಿಸಿತು. ದೇವಾಲಯಗಳ ದೇವಸ್ವಂ ಮಂಡಳಿಗಳ ಅಧಿಕಾರಿಗಳು ಮತ್ತು ಪುರೋಹಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+