Get Updates
Get notified of breaking news, exclusive insights, and must-see stories!

Sharad Pawar: ಎನ್‌ಸಿಪಿ ಅಧ್ಯಕ್ಷ ಸ್ಥಾನದಿಂದ ಶರದ್ ಪವಾರ್ ವಜಾ!

ಮುಂಬೈ: ಎನ್‌ಸಿಪಿ ಪಕ್ಷದಲ್ಲಿ ಹೊತ್ತಿರುವ ಬೆಂಕಿ ಈಗ ಕೆನ್ನಾಲಿಗೆಯಾಗಿ ಧಗಧಗಿಸುತ್ತಿದೆ. ಈ ಬೆಂಕಿಗೆ ಮೊದಲ ಬಲಿ ಎಂಬಂತೆ ಎನ್‌ಸಿಪಿ ಪಕ್ಷವನ್ನ 20 ವರ್ಷದಿಂದ ಕಟ್ಟಿ ಬೆಳೆಸಿದ್ದ ಶರದ್ ಪವಾರ್ ವಜಾಗೊಂಡಿದ್ದಾರೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಅಂದ್ರೆ ಎನ್‌ಸಿಪಿಯ ಬಂಡಾಯ ಬಣ ಶರದ್ ಪವಾರ್‌ರನ್ನ ರಾಷ್ಟ್ರಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದೆ. ಹೀಗೆ 2 ದಶಕದಿಂದ ಪಕ್ಷವನ್ನು ಮುನ್ನಡೆಸಿದ್ದ ನಾಯಕ ಶರದ್ ಪವಾರ್‌ಗೆ ಆಘಾತ ಎದುರಾಗಿದೆ.

ಅಷ್ಟಕ್ಕೂ ಎನ್‌ಸಿಪಿ ಬಂಡಾಯ ಬಣ ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಈ ವಿಚಾರ ಉಲ್ಲೇಖಿಸಿದ್ದು, ಪತ್ರದಲ್ಲಿ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲೆ ಹಕ್ಕು ಕೂಡ ಸಾಧಿಸಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಶರದ್ ಪವಾರ್ ಬೆಂಬಲಿಗರಿಗೆ ಭರವಸೆ ನೀಡಿದ್ದು, ಪಕ್ಷದ ಚುನಾವಣೆ ಚಿನ್ಹೆ ಉಳಿಸಿಕೊಂಡೇ ಸಿದ್ಧವೆಂದು ಸವಾಲು ಎಸೆದಿದ್ದಾರೆ. ಮತ್ತೊಂದ್ಕಡೆ ಇಂದು ಇಬ್ಬರೂ ನಾಯಕರು ಶಾಸಕಾಂಗ ಪಕ್ಷದ ಸಭೆಯನ್ನ ಕರೆದಿದ್ದರು. ಶರದ್ ಪವಾರ್ ಮತ್ತು ಅಜಿತ್ ಪವಾರ್ ಇಂದು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಇಷ್ಟೆಲ್ಲದರ ಮಧ್ಯೆ ಶರದ್ ಪವಾರ್ ಅವರನ್ನೇ ಎನ್‌ಸಿಪಿ ಉನ್ನತ ಸ್ಥಾನದಿಂದ ವಜಾ ಮಾಡಲಾಗಿದೆ.

Allegedly Ajit Pawar removes Sharad Pawar as NCP National President

ಅಜಿತ್ ಪವಾರ್ ಹೊಸ ರಾಷ್ಟ್ರೀಯ ಅಧ್ಯಕ್ಷ!

ಶರದ್ ಪವಾರ್ ಅವರನ್ನು ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ವಜಾ ಮಾಡುವ ಜೊತೆಗೆ ಮತ್ತೊಂದು ಆಘಾತವನ್ನೂ ಬಂಡಾಯ ಬಣ ನೀಡಿದೆ. ಶರದ್ ಪವಾರ್ ವಜಾ ಆಗಿರುವ ಸ್ಥಾನಕ್ಕೆ ಅಜಿತ್ ಪವಾರ್ ಅವರನ್ನ ನೇಮಕ ಮಾಡಿ ಹೊಸ ರಾಷ್ಟ್ರೀಯ ಅಧ್ಯಕ್ಷ ಎಂದು ಘೋಷಣೆ ಮಾಡಲಾಗಿದೆ.ಈ ಮೂಲಕ ಚಿಕ್ಕಪ್ಪ ಹಾಗೂ ಮಗನ ನಡುವೆ ಜಗಳ ತಾರಕಕ್ಕೆ ಏರಿದೆ. ದಿಢೀರ್ ಬಂಡಾಯ ಎದ್ದು ಎನ್‌ಸಿಪಿ ಬಿಟ್ಟು ಬಿಜೆಪಿ ಮತ್ತು ಶಿವಸೇನೆ ಜೊತೆ ಸೇರಿರುವ ಅಜಿತ್ ಪವಾರ್ ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಕ್ ಕೊಡುವ ಬಗ್ಗೆ ಮುನ್ಸೂಚನೆ ಸಿಕ್ಕಂತಾಗಿದೆ. ಒಟ್ನಲ್ಲಿ ಮಹಾರಾಷ್ಟ್ರ ರಾಜಕೀಯ ಹೊತ್ತಿ ಉರಿಯುತ್ತಿದೆ.

'ಅಸಹ್ಯ ಪ್ರಾರಂಭಿಸಿದ್ದು ಇದೇ ಪವಾರ್!'

ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿರುವ ರಾಜ್ ಠಾಕ್ರೆ, ಶರದ್ ಪವಾರ್ ಪಕ್ಷದ ಕೆಂಡ ಕಾರಿದ್ದಾರೆ. ಹಾಗೇ ಮತ್ತೊಂದು ಗಂಭೀರ ಆರೋಪ ಮಾಡಿದ ರಾಜ್ ಠಾಕ್ರೆ, 1978ರಲ್ಲಿ ಇಂಥ ಅಸಹ್ಯ ಪ್ರಾರಂಭಿಸಿದ್ದು ಇದೇ ಶರದ್ ಪವಾರ್. ಕಾಂಗ್ರೆಸ್‌ನ 38 ಶಾಸಕರ ಜೊತೆ ಪಕ್ಷ ಬಿಟ್ಟು ಜನತಾ ಪಕ್ಷದ ಜೊತೆ ಸೇರಿ ಸಿಎಂ ಆದರು. ಇದೀಗ ಅದನ್ನು ಕೊನೆಗೊಳಿಸಿದವರು ಕೂಡ ಅವರೇ ಎಂದಿದ್ದಾರೆ ಠಾಕ್ರೆ. ಈಗಾಗಲೇ ಈ ಬೆಳವಣಿಗೆ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ವಿರೋಧ ಪಕ್ಷಗಳ ಒಗ್ಗಟ್ಟಿನಲ್ಲಿ ಬಿರುಕು ಮೂಡುವ ಮುನ್ಸೂಚನೆ ಸಿಗುತ್ತಿದೆ. ಮತ್ತೊಂದ್ಕಡೆ ಖುದ್ದು ರಾಜ್ ಠಾಕ್ರೆ ಹೊಸ ಬಾಂಬ್ ಸಿಡಿಸಿ, ಶರದ್ ಪವಾರ್ ಈ ಹಿಂದೆ ಏನು ಮಾಡಿದ್ದರು ಅನ್ನೋದನ್ನ ಬಿಡಿಸಿಟ್ಟಿದ್ದಾರೆ.

Allegedly Ajit Pawar removes Sharad Pawar as NCP National President

ವಿರೋಧ ಪಕ್ಷಗಳಲ್ಲಿ ಶುರುವಾಯ್ತು ನಡುಕ

ದೇಶದಲ್ಲಿ ಅತಿಹೆಚ್ಚು ಲೋಕಸಭೆ ಸ್ಥಾನಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ 2ನೇ ಸ್ಥಾನ ಪಡೆದಿದೆ. 80 ಲೋಕಸಭಾ ಸ್ಥಾನ ಹೊಂದಿರುವ ಉತ್ತರ ಪ್ರದೇಶವನ್ನು ಬಿಟ್ಟರೆ, 48 ಲೋಕಸಭಾ ಸ್ಥಾನ ಹೊಂದಿರುವ ಮಹಾರಾಷ್ಟ್ರವೇ 2ನೇ ಸ್ಥಾನದಲ್ಲಿ ಇದೆ. ಹೀಗಾಗಿಯೇ ಮಹಾರಾಷ್ಟ್ರದ ಮೇಲೆ ರಾಜಕೀಯ ಹಿಡಿತ ಅತ್ಯಗತ್ಯ ಅನ್ನೋದು ಕಾಂಗ್ರೆಸ್ ಮತ್ತು ಬಿಜೆಪಿಯ ಒನ್‌ಲೈನ್ ಅಜೆಂಡಾ. ಮಹಾರಾಷ್ಟ್ರದಲ್ಲಿ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ, ಕಾಂಗ್ರೆಸ್ ಆಗಲಿ ಅಥವಾ ಬಿಜೆಪಿಯೇ ಆಗಲಿ ಒಬ್ಬರೇ ನಿಂತು ಹೋರಾಡುವುದು ಕಷ್ಟ ಎನ್ನಬಹುದು. ಹೀಗಾಗಿ ಮಹಾರಾಷ್ಟ್ರದ ಮೇಲೆ ರಾಜಕೀಯ ಹಿಡಿತಕ್ಕಾಗಿ ಬಿಜೆಪಿ ಮತ್ತು ವಿಪಕ್ಷಗಳ ಮಧ್ಯೆ ರಿಯಲ್ ಫೈಟಿಂಗ್ ಶುರುವಾಗಿತ್ತು. ಆದ್ರೆ ಈಗಿನ ಬೆಳವಣಿಗೆ ಕಾಂಗ್ರೆಸ್ ಮತ್ತು ವಿಪಕ್ಷ ನಾಯಕರಲ್ಲಿ ನಡುಕ ತರಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+