ಡಿಜಿಟಲ್ ಇಂಡಿಯಾ ಎಂದರೇನು? ಉದ್ದೇಶಗಳೇನು?
ನವದೆಹಲಿ, ಜು. 01 : ಪ್ರಧಾನಿ ನರೇಂದ್ರ ಮೋದಿ 'ಡಿಜಿಟಲ್ ಇಂಡಿಯಾ' (#DigitalIndia) ಸಪ್ತಾಹಕ್ಕೆ ನವದೆಹಲಿ ಇಂದಿರಾ ಗಾಂಧಿ ಮೈದಾನದಲ್ಲಿ ಚಾಲನೆ ನೀಡಿದ್ದಾರೆ.
ಏರ್ಬಸ್ ಇಂಡಿಯಾ ಸಿಇಒ ಪೀಟರ್ ಗುಟ್ಸ್ಮೇಡ್, ರಿಲಯನ್ಸ್ನ ಮುಖೇಶ್ ಅಂಬಾನಿ, ಟಾಟಾ ಗ್ರೂಪ್ನ ಸೈರಸ್ ಮಿಸ್ಟ್ರಿ, ಭಾರ್ತಿ ಎಂಟರ್ಪ್ರೈಸಸ್ನ ಸುನೀಲ್ ಭಾರ್ತಿ ಮಿತ್ತಲ್, ವಿಪ್ರೋನ ಅಜೀಂ ಪ್ರೇಮ್ಜಿ, ಸ್ಟೆರ್ಲೈಟ್ನ ಅನಿಲ್ ಅಗರವಾಲ್, ಆದಿತ್ಯ ಬಿರ್ಲಾ ಗ್ರೂಪ್ನ ಕುಮಾರಮಂಗಲಂ ಬಿರ್ಲಾ ಸೇರಿದಂತೆ ಅನೇಕ ಕೈಗಾರಿಕೋದ್ಯಮಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.[ಚೀನಾದಲ್ಲೂ ಮೋದಿ ಮೇಕ್ ಇನ್ ಇಂಡಿಯಾ ಮ್ಯಾಜಿಕ್]

ಭಾರತವನ್ನು ಡಿಜಿಟಲೀಕರಣಗೊಳಿಸುವ ಸ್ಪಷ್ಟ ಯೋಜನೆಯನ್ನು ಪ್ರಧಾನಿ ಮೋದಿ ಪ್ರಸ್ತುತಪಡಿಸಿದರು. ಡಿಜಿಟಲ್ ಲಾಕರ್, ಇ-ಎಜುಕೇಷನ್ ಮತ್ತು ಇ-ಹೆಲ್ತ್ನಂಥ ವಿಭಿನ್ನ ಯೋಜೆಗಳಿಗೂ ನರೇಂದ್ರ ಮೋದಿ ಚಾಲನೆ ನೀಡಿದರು. [ಕರ್ನಾಟಕದಲ್ಲಿ ಸ್ಮಾರ್ಟ್ ಸಿಟಿ ಕನಸು ಸಾಕಾರವಾಗುವುದೆ?]
ನೇರ ಪ್ರಸಾರ : ಸರಕಾರಿ ಸ್ವಾಮ್ಯದ ದೂರದರ್ಶನ ಇಂಡಿಯಾ ಮತ್ತು ದೂರದರ್ಶನ ನ್ಯೂಸ್ ಡಿಜಿಟಲ್ ಇಂಡಿಯಾ ಕಾರ್ಯಕ್ರಮ ಡಿಡಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಆನ್ ಲೈನ್ ನಲ್ಲಿ ಕೂಡ Yuva4India.TV ತಾಣದಲ್ಲಿ ವೀಕ್ಷಿಸಬಹುದು.
ಡಿಜಿಟಲ್ ಇಂಡಿಯಾ ಎಂದರೇನು?
ಭಾರತದ ಪ್ರತಿಯೊಂದು ಗ್ರಾಮಗಳನ್ನು ಡಿಜಿಟಲೀಕರಣ ಮಾಡುವುದು ಯೋಜನೆಯ ಮುಖ್ಯ ಉದ್ದೇಶ
ಯೋಜನೆಯ ಧ್ಯೇಯ
* ದೇಶದೆಲ್ಲೆಡೆ ಡಿಜಿಟಲ್ ಮೂಲ ಸೌಕರ್ಯ
* ಜನರ ಇಚ್ಛೆಗೆ ಅನುಗುಣವಾದ ಪಾರದರ್ಶಕ ಆಡಳಿತ
* ಡಿಜಿಟಲ್ ಉದ್ಯಮ
ಯೋಜನೆ ಏನೇನನ್ನು ಒಳಗೊಂಡಿದೆ?
* ಅತ್ಯುತ್ತಮ ದರ್ಜೆ ಹೆದ್ದಾರಿಗಳು
* ಅಂತಾರಾಷ್ಟ್ರೀಯ ಮಟ್ಟದ ದೂರ ಸಂಪರ್ಕ
* ಸಾರ್ವಜನಿಕ ಅಂತರ್ಜಾಲ ಸಂಪರ್ಕ ಸೇವೆ
* ಇ ಆಡಳಿತ, ತಂತ್ರಜ್ಞಾನದ ಮೂಲಕ ಆಡಳಿತ
* ಇ ಕ್ರಾಂತಿ, ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಎಲ್ಲ ಬಗೆಯ ಸಂಪರ್ಕ
* ಎಲ್ಲರಿಗೂ ಸಕಲ ಮಾಹಿತಿ
* ಎಲೆಕ್ಟ್ರಾನಿಕ್ ಉತ್ಪನ್ನ ತಯಾರಿಕೆಗೆ ವಿಶೇಷ ಒತ್ತು
* ಮಳೆ ನೀರು ಕೊಯ್ಲು ತಯೋಜನೆಗಳು
2019ಕ್ಕೆ ಡಿಜಿಟಲ್ ಎಫೆಕ್ಟ್
* ಎಲ್ಲ 2.5 ಲಕ್ಷ ಹಳ್ಳಿಗಳಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕ
* ವಿದೇಶಗಳಿಂದ ಎಲೆಕ್ಟ್ರಾನಿಕ್ ವಸ್ತು ಆಮದು ಇಲ್ಲ
* 4 ಲಕ್ಷ ಸಾರ್ವಜನಿಕ ಅಂತರ್ಜಾಲ ಸಂಪರ್ಕ ಘಟಕ
* ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಿಗೆ ವೈ ಫೈ ಸಂಪರ್ಕ
* ಆರೋಗ್ಯ ಶಿಕ್ಷಣ, ಬ್ಯಾಂಕಿಂಗ್ ಕ್ಷೇತ್ರಗಳು ಸಂಪೂರ್ಣ ಡಿಜಿಟಲೀಕರಣ
Delhi: PM Narendra Modi at the launch of 'Digital India Week'. pic.twitter.com/v1Tbl0mIFB
— ANI (@ANI_news) July 1, 2015 ಸಮಯ 5.31: ಬದಲಾವಣೆ ಪ್ರಪಂಚದೆಲ್ಲೆಡೆ ಆಗಿದೆ. ತಂತ್ರಜ್ಞಾನವನ್ನು ನಮ್ಮ ಲಾಭಕ್ಕೆ ಬಳಸಿಕೊಳ್ಳಬೇಕು.
ಸಮಯ 5.31: ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭ
ಸಮಯ 5.31: ಹಣಕಾಸು ಸಚಿವ ಅರುಣ್ ಜೇಟ್ಲಿ ಭಾಷಣ ಆರಂಭ
ಸಮಯ 5.19: ಹೀರೋ ಮೋಟಾರ್ ನ ಪವನ್ ಮುಂಜಾಲ್ ಮಾತನಾಡಿದರು.
ಸಮಯ5.15:ರಿಲಯನ್ಸ್ ಗ್ರೂಪ್ ನ ಅನಿಲ್ ಅಂಬಾನಿ ಮಾತನಾಡಿ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಸಮಯ5.02: ಏರ್ ಟೆಲ್ ನ ಸುನೀತ್ ಭಾರ್ತಿ ಮಿತ್ತಲ್ ಮಾತನಾಡಿ ಯೋಜನೆಗೆ ಬೆಂಬಲ ಸೂಚಿಸಿದರು.
ಸಮಯ 4.52: ಆದಿತ್ಯ ಬಿರ್ಲಾ ಸಂಸ್ಥೆಯ ಕುಮಾರ್ ಮಂಗಲಂ ಮಾತನಾಡಿ ಹೊಸ ನೀತಿಯನ್ನು ಸ್ವಾಗತಿಸಿದರು.
ಸಮಯ 4.43: ಟಾಟಾ ಸಂಸ್ಥೆ ಅಧ್ಯಕ್ಷ ಸೈರಸ್ ಮಿಸ್ಟ್ರಿ ಮಾತನಾಡಿದರು.
ಸಮಯ 4.25 : ಡಿಜಿಟಲ್ ಇಂಡಿಯಾ ಕುರಿತ ಪುಸ್ತಕವನ್ನು ಮೋದಿ ಬಿಡಯಗಡೆ ಮಾಡಿದರು.
ಸಮಯ 4.17: ಡಿಜಿಟಲ್ ಇಂಡಿಯಾದ ಪರಿಕಲ್ಪನೆಗಳಾದ ಡಿಜಿಟಲ್ ಲಾಕರ್, ಭಾರತ್ ನೆಟ್, ನ್ಯಾಶನಲ್ ಸ್ಕಾಲರ್ ಶಿಪ್ ಪೋಟರ್ಲ್ ಅನಾವರಣ ಮಾಡಿದ ಪ್ರಧಾನಿ
ಸಮಯ 4.15:ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ.
Foreign Dignitaries at #DigitalIndiaWeek launch event at #IGI stadium. Coming up more! #DigitalIndia pic.twitter.com/m8U0GbyzL8
— Digital India (@_DigitalIndia) July 1, 2015 -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications