Air india: ಜುಲೈ 1ರಿಂದಲೇ ಆಫರ್ ಅನ್ವಯ, ಬರೀ ₹833 ಏರ್ ಇಂಡಿಯಾದಲ್ಲಿ ಹಾರಾಡಿ
ಬೆಂಗಳೂರು, ಜೂನ್ 28: ವಿಮಾನಯಾನ ಕೈಗೊಳ್ಳುವವರಿಗೆ ಏರ್ಇಂಡಿಯಾ ವಿಶೇಷ ಅವಕಾಶ, ಆಫರ್ ಘೋಷಿಸಿದೆ. ಈ ಮೂಲಕ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಕಡಿಮೆ ದರದಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.
ಏರ್ಇಂಡಿಯಾ ಪ್ರಮುಖ ದೇಶೀಯ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದ್ದು, ಪ್ರಯಾಣಿಕರಿಗೆ ವಿಶೇಷ ಆಫರ್ ನೀಡಿದೆ. ಮುಂದಿನ ಜುಲೈ 1ರಿಂದ ವಿಮಾನ ಪ್ರಯಾಣಕ್ಕೆ ಅವಕಾಶ ನೀಡುತ್ತಿದೆ. ಈ ವಿಮಾನಯಾನ ಸಂಸ್ಥೆ ಸ್ಲ್ಪಾಶ್ ಸೇಲ್ (ಸ್ಪ್ಲಾಶ್ ಸೇಲ್) ಹೆಸರಿನಲ್ಲಿ ಕೇವಲ ₹883ರಿಂದ ವಿಮಾನ ಟಿಕೆಟ್ ನೀಡುತ್ತಿದೆ. ಒಟ್ಟು ಎರಡು ರೀತಿಯ ಟಿಕೆಟ್ ಗಳನ್ನು ನೀಡಲಾಗುತ್ತಿದೆ.

ಈ ಕಡಿಮೆ ಬೆಲೆಗೆ ದೇಶಿಯ ವಿಮಾನಯಾನ ಸೇವೆ ಪಡೆಯುವ ಆಸಕ್ತರಿಗೆ ಟಿಕೆಟ್ ಬುಕ್ಕಿಂಗ್ಗೆ ಜೂನ್ 28ರ ಸಂಜೆಯೊಳಗೆ ಅವಧಿ ನೀಡಲಾಗಿದೆ. ನಿಗದಿತ ಸಮಯದೊಳಗೆ ಪ್ರಯಾಣಿಕರು ತಮ್ಮ ತಮ್ಮ ಟಿಕೆಟ್ ಗಳನ್ನು ರೂ. 883ಕೊಟ್ಟು ಬುಕ್ ಮಾಡಿಕೊಳ್ಳಬೇಕು. ಇದಕ್ಕೆ ಯಾವುದೇ ಕನ್ವಿನಿಯನ್ಸ್ ಶುಲ್ಕ ಇರುವುದಿಲ್ಲ. ಜೊತೆಗೆ, ಎಕ್ಸ್ಪ್ರೆಸ್ ವ್ಯಾಲ್ಯೂ ಫೇರ್ (ಎಕ್ಸ್ಪ್ರೆಸ್ ಮೌಲ್ಯ ದರಗಳು) ಟಿಕೆಟ್ಗಳ ಬೆಲೆಗಳು ರೂ.1096 ರಿಂದ ಆರಂಭವಾಗಲಿವೆ ಎಂದು ತಿಳಿಸಲಾಗಿದೆ.
ಸೆಪ್ಟಂಬರ್ 30ರ ತನಕ ಪ್ರಯಾಣ
ಟಿಕೆಟ್ಗಳನ್ನು ಜೂನ್ 28ರೊಳಗೆ ಬುಕ್ ಮಾಡಿದವರಿಗೆ ಜುಲೈ 1 ರಿಂದ ಸೆಪ್ಟೆಂಬರ್ 30ರ ನಡುವೆ ಯಾವುದೇ ಸಮಯದಲ್ಲಿ ಆದರೂ ವಿಮಾನದಲ್ಲಿ ಪ್ರಯಾಣಿಸಬಹುದು. ಮುಂದಿನ ಮೂರು ತಿಂಗಳಿನಲ್ಲಿ ಯಾವುದೇ ಪ್ರವಾಸವನ್ನು ಯೋಜಿಸುವವರಿಗೆ ಇದು ಉತ್ತಮ ಅವಕಾಶವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಏರ್ ಎಕ್ಸ್ಪ್ರೆಸ್ ವಿಮಾನವು ಲೈಟ್ ಫೇರ್ ಟಿಕೆಟ್ಗಳಲ್ಲಿ 350 ರೂಪಾಯಿ ಕನ್ವಿನಿಯನ್ಸ್ ಶುಲ್ಕವನ್ನು ಮನ್ನಾ ಮಾಡಿದೆ. ಹೀಗಾಗಿ ಈ ಪ್ರಯಾಣ ಗ್ರಾಹಕರಿಗೆ ಲಾಭ ಎನ್ನಬಹುದು ಈ ಕನ್ವಿನಿಯನ್ಸ್ ಶುಲ್ಕ ವಿನಾಯಿತಿ ಪಡೆಯಲು, ನೀವು ಏರ್ ಇಂಡಿಯಾ ಎಕ್ಸ್ಪ್ರೆಸ್ ಅಧಿಕೃತ ವೆಬ್ಸೈಟ್ www.airindiaexpress.com ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್ ಬುಕ್ ಮಾಡಬೇಕಿದೆ ಎಂದು ಕಂಪನಿ ತಿಳಿಸಿದೆ.
ಹಣ ಹಿಂತಿರುಗಿಸುವ ಮಾಹಿತಿ ಏನಿದೆ?
ವಿಮಾನಯಾನ ಪ್ರಯಾಣಿಕರಿಗೆ ಸೀಮಿತ ಅವಧಿಗೆ ಈ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಆಫರ್ ಅಡಿ ನೀಡಿರುವ ಟಿಕೆಟ್ ಗಳು ಭರ್ತಿಯಾದರೆ ಅಂದರೆ, ಸೀಟು ಪೂರ್ಣಗೊಂಡರೆ, ನಂತರ ಟಿಕೆಟ್ ಬುಕ್ ಮಾಡುವವರಿಗೆ ಸಾಮಾನ್ಯ ಟಿಕೆಟ್ ನಿಯಮಗಳು ಅನ್ವಯಿಸುತ್ತವೆ. ಇನ್ನೂ ಕಡಿಮೆ ಬೆಲೆಯ ಮೊತ್ತ ಕೊಟ್ಟು ಏರ್ ಇಂಡಿಯಾ ಆಫರ್ ಟಿಕೆಟ್ ಬುಕ್ ಮಾಡಿದವರಿಗೆ ಯಾವುದೇ ಕಾರಣಕ್ಕೂ ರದ್ದಾದರೆ, ಹಣ ಹಿಂತಿರುಗಿಸಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ನಾಡಿದ್ದು ಅಂದರೆ ಜುಲೈ 1ರಿಂದ ಕಡಿಮೆ ಬೆಲೆಯಲ್ಲಿ ದೇಶಿಯ ಮಟ್ಟದಲ್ಲಿ ವಿಮಾನಯಾನಕ್ಕೆ ಸಜ್ಜಾಗಬೇಕಿದೆ. ಈ ರೀತಿ ಆಫರ್ ಕೆಲವು ದಿನಗಳ ಹಿಂದೆ ಘೋಷಣೆ ಆಗಿದ್ದು, ಟಿಕೆಟ್ ಬುಕ್ಕಿಂಗ್ ಶುಕ್ರವಾರಕ್ಕೆ ಅಂತ್ಯವಾಗಿದೆ. ಮುಂದಿನ ಸೆಪ್ಟಂಬರ್ ಅಂತ್ಯದವರೆಗೆ ಕಡಿಮೆ ಬೆಲೆಗೆ ಟಿಕೆಟ್ ಬುಕ್ ಮಾಡಿದವರಿಗೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications