Adani Group: ಅದಾನಿ ಪೋರ್ಟ್ನಿಂದ ವಿಶ್ವದ ಮೊದಲ ಸ್ಟೀಲ್ ರಸ್ತೆ ಲೋಕಾರ್ಪಣೆ
Adani Ports Steel Road: ಎಲ್ಲ ರಂಗಗಳಲ್ಲೂ ತನ್ನದೇ ಆದ ಛಾಪು ಮೂಡಿಸುತ್ತಿರುವ ಅದಾನಿ ಸಮೂಹದ ಕಂಪನಿಯಾಗಿರುವ 'ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್' (APSEZ) ಬಂದರಿನಲ್ಲಿ ಪ್ರಪಂಚದ ಮೊದಲು ಉಕ್ಕಿನ ಸ್ಲ್ಯಾಗ್ ರಸ್ತೆಯನ್ನು ಇಂದು ಶನಿವಾರ ಉದ್ಘಾಟನೆ ಮಾಡಿದೆ. ಈ ಯೋಜನೆಯು ಜಾಗತಿಕ ಆರ್ಥಿಕತೆ ಹಾಗೂ ಅಭಿವೃದ್ಧಿಯಲ್ಲಿ ಹೊಸ ಮಾನದಂಡ ಸೃಷ್ಟಿಸಿದೆ ಎಂದು ವರದಿ ಆಗಿದೆ.
ಹೌದು, APSEZ ಕಂಪನಿಯು ಹಜೀರಾ ಬಂದರಿನೊಳಗೆ 1.1 ಕಿಲೋಮೀಟರ್ ಉದ್ದದ ಉಕ್ಕಿನ ಸ್ಲ್ಯಾಗ್ ರಸ್ತೆ ನಿರ್ಮಿಸಿದೆ. ಸುಸ್ಥಿರ ರಸ್ತೆ ಇದಾಗಿದ್ದು, ಬಹುಪಯೋಗಿ ಬರ್ತ್ (MPB-1) ನಿಂದ ಕಲ್ಲಿದ್ದಲು ಯಾರ್ಡ್ಗೆ ಸಂಪರ್ಕ ಕಲ್ಪಿಸುತ್ತದೆ. ಇದು ಉಕ್ಕಿನ ಉತ್ಪಾದನೆಯ ಉಪ-ಉತ್ಪನ್ನವಾದ ಸಂಸ್ಕರಿಸಿತ ಉಕ್ಕಿನ ಸ್ಲ್ಯಾಗ್ ಹಾಗೂ ಕೈಗಾರಿಕಾ ತ್ಯಾಜ್ಯವನ್ನು ಬಳಸಿ ಮಾಡಿದ ರಸ್ತೆಯಾಗಿದೆ. ಈ ರಸ್ತೆ ಬಾಳಿಕೆ ಬರುವ ಜೊತೆಗೆ ಹೇಗೆ ತ್ಯಾಜ್ಯವನ್ನು ಮರಬಳಕೆ ಮಾಡಿ ಮೂಲಸೌಕರ್ಯಕ್ಕೆ ಬಳಕೆ ಮಾಡಬಹುದೆಂದು ಸಾಬೀತು ಮಾಡಿದೆ.

ಈ ಉಕ್ಕಿನ ಸ್ಲ್ಯಾಗ್ ರಸ್ತೆ ಯೋಜನೆಯನ್ನು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ - ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ (CSIR-CRRI) ಮತ್ತು ಕೇಂದ್ರ ವಿಜ್ಞಾನ & ತಂತ್ರಜ್ಞಾನ ಸಚಿವಾಲಯದ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಬೃಹತ್ ಮತ್ತು ಸಾಮಾನ್ಯ ಸರಕು ಟರ್ಮಿನಲ್ (BGCT) ವಿಸ್ತರಣೆಯ ಹಂತ-II ರ ಭಾಗವಾಗಿ ಈ ರಸ್ತೆ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಈ ರಸ್ತೆಯಲ್ಲಿ ಅಂಟಿಕೊಂಡಂತಿರುವ ಪಾದಚಾರಿ ವಿನ್ಯಾಸ ಮಾರ್ಗವು ಲೋಡ್-ಬೇರಿಂಗ್ ಸಾಮರ್ಥ್ಯ ಹೊಂದಿದೆ. ರಸ್ತೆಗೆ ದೀರ್ಘಾಯುಷ್ಯ ಇದ್ದು, ಈ ಯೋಜನೆ ನಿರ್ಮಾಣ ವೆಚ್ಚ ಹಾಗೂ ನೈಸರ್ಗಿಕ ದುಷ್ಪರಿಣಾಮ ಕಡಿಮೆ ಮಾಡುತ್ತದೆ. ಒಟ್ಟಾರೆ ಈ ರಸ್ತೆಯೋಜನೆಯು ಪರಿಸರ ಕಾಳಜಿ ಜೊತೆಗೆ ಬಂದರು ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಬದ್ಧತೆ ಒದಗಿಸುತ್ತದೆ.
ಹಜೀರಾ ಬಂದರಿನಲ್ಲಿ ಅದಾನಿ ಕಂಪನಿಯು ಸ್ಥಾಪಿಸಿದ ಈ ರಸ್ತೆಯನ್ನು ನೀತಿ ಆಯೋಗದ ಸದಸ್ಯ (ವಿಜ್ಞಾನ ಮತ್ತು ತಂತ್ರಜ್ಞಾನ) ಡಾ. ವಿಜಯ್ ಕುಮಾರ್ ಸಾರಸ್ವತ್ ಹಾಗೂ CSIR ನ ಮಹಾ ನಿರ್ದೇಶಕ ಮತ್ತು DSIR ಕಾರ್ಯದರ್ಶಿ ಡಾ. ಎನ್. ಕಲೈಸೆಲ್ವಿ, CSIR-CRRI ನಿರ್ದೇಶಕ ಮತ್ತು ಭಾರತೀಯ ರಸ್ತೆಗಳ ಕಾಂಗ್ರೆಸ್ ಅಧ್ಯಕ್ಷ ಡಾ. ಮನೋರಂಜನ್ ಪರಿದಾ ಅವರು ಉದ್ಘಾಟಿಸಿ ಮಾತನಾಡಿದರು.
ಸ್ಟೀಲ್ ಸ್ಲ್ಯಾಗ್ ರಸ್ತೆ ತಂತ್ರಜ್ಞಾನದ ಹಿರಿಯ ವಿಜ್ಞಾನಿ ಮತ್ತು ಸಂಶೋಧಕ ಸತೀಶ್ ಪಾಂಡೆ, ಅದಾನಿ ಹಜೀರಾ ಬಂದರು ಕಂಪನಿಯ ಸಿಒಒ ಆನಂದ್ ಮರಾಠೆ ಮತ್ತಿತರರು ರಸ್ತೆ ಲೋಕಾರ್ಪಣೆಗೆ ಸಾಕ್ಷಿಯಾದರು.
ಜಾಗತಿಕ ಬಂದರಿನಲ್ಲಿ ನಿರ್ಮಿಸಿ ಮೊದಲ ರಸ್ತೆಯಾಗಿರುವ ಸದರಿ ಉಕ್ಕಿನ ಸ್ಲ್ಯಾಗ್ ರಸ್ತೆಯು ದೇಶದ ಮೂರನೇ ರಸ್ತೆಯಾಗಿದೆ. ಭಾರತ ಮತ್ತು APSEZ ಸುಸ್ಥಿರ ಕಡಲ ಭಾಗದ ಮೂಲಸೌಕರ್ಯವಾಗಿದೆ. ರಾಷ್ಟ್ರೀಯ ಬೆಳವಣಿಗೆ, ಹೊಸತನ, ಮೂಲಸೌಕರ್ಯ ಅಭಿವೃದ್ಧಿಗೆ ಹಾಗೂ ಕೈಗಾರಿಕಾ ಪರಿಸರ ವಿಜ್ಞಾನಕ್ಕೆ ಪೂರಕವಾದ ರಸ್ತೆ ಯೋಜನೆ ಇದಾಗಿದೆ ಎಂದು ಅತಿಥಿಗಳು ಹೇಳಿದರು.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್












Click it and Unblock the Notifications