Adani: ಅದಾನಿ & ಗೂಗಲ್ ಪಾಲುದಾರಿಕೆ: ವಿಶಾಖಪಟ್ಟಣದಲ್ಲಿ "AI ಡೇಟಾ ಸೆಂಟರ್ ಕ್ಯಾಂಪಸ್' ನಿರ್ಮಾಣ
ಬೆಂಗಳೂರು, ಅಕ್ಟೋಬರ್ 14: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಭಾರತದ ಅತಿದೊಡ್ಡ "AI ಡೇಟಾ ಸೆಂಟರ್ ಕ್ಯಾಂಪಸ್' ಮತ್ತು ಹೊಸ ಹಸಿರು ಇಂಧನ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಅದಾನಿ ಎಂಟರ್ಪ್ರೈಸಸ್ ಮುಂದಾಗಿದೆ. ಇದಕ್ಕಾಗಿ ಅದಾನಿ ಕಂಪನಿಯ ಜಂಟಿ ಉದ್ಯಮ ಕಂಪನಿ ಅದಾನಿಕಾನೆಕ್ಸ್ ಮತ್ತು ಗೂಗಲ್ ಪಾಲುದಾರಿಕೆಯಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಕಂಪನಿ ತಿಳಿಸಿದೆ.
ಗೂಗಲ್ನ AI ಹಬ್ ಮುಂದಿನ ಐದು ವರ್ಷಗಳಲ್ಲಿ ಅಂದರೆ 2026 ರಿಂದ 2030ರವರೆಗೆ ಆಂಧ್ರದ ವಿಶಾಖಪಟ್ಟಣದಲ್ಲಿ ಸುಮಾರು ಯುಎಸ್ಡಿ 15 ಶತಕೋಟಿ ಹೂಡಿಕೆ ಮಾಡಿದೆ. ಇದು ಗಿಗಾವ್ಯಾಟ್-ಪ್ರಮಾಣದ ಡೇಟಾ ಸೆಂಟರ್ ಕಾರ್ಯನಿರ್ವಹಣೆ ಹೊಂದಿದೆ. ಇಲ್ಲಿನ ಕಂಪನಿಯು ಸಬ್ಸೀ ಕೇಬಲ್ ನೆಟ್ವರ್ಕ್ ಮತ್ತು ಶುದ್ಧ ಇಂಧನ ಉತ್ಪಾದನೆ ಬೆಂಬಲಿಸುತ್ತದೆ. ದೇಸದಲ್ಲಿ ಅತೀವ ಬೇಡಿಕೆ ಇರುವ ಕೃತಕ ಬುದ್ಧಿಮತ್ತೆ (AI) ಕೆಲಗಳ ಹೊರೆಗಳನ್ನು ನಿಭಾಯಿಸಲು ಇದು ಸಹಾಯ ಮಾಡುತ್ತದೆ. ಅದಾನಿಕಾನೆಕ್ಸ್ ಮತ್ತು ಏರ್ಟೆಲ್ ಸೇರಿದಂತೆ ಪರಿಸರ ವ್ಯವಸ್ಥೆಯ ಪಾಲುದಾರಿಕೆಗೂ ಇದು ಪೂರಕವಾಗಲಿದೆ.

ವಿಶಾಖಪಟ್ಟಣದಲ್ಲಿನ ಗೂಗಲ್ ಎಐ ಹಬ್ನ ಅಡಿಪಾಯದ ಸ್ತಂಭಗಳು ನಿರ್ಮಿಸಬೇಕೆಂಬ ಉದ್ದೇಶ ಹೊಂದಿರುವ ಎಐ ಡೇಟಾ ಸೆಂಟರ್ ಮೂಲಸೌಕರ್ಯಗಳನ್ನು ಒಳಗೊಂಡಿವೆ. ಇದು ದೇಶದ ಎಐ ಸಾಮರ್ಥ್ಯಗಳಲ್ಲಿ ಮಹತ್ವದ ಬದಲಾವಣೆ ತರಲಿದೆ. ದಕ್ಷತೆ ಮತ್ತು ಸಾಮರ್ಥ್ಯ ಹೆಚ್ಚಿಸಲಿದೆ. ಆಂಧ್ರಪ್ರದೇಶದಲ್ಲಿ ಹೊಸ ಪ್ರಸರಣ ಮಾರ್ಗಗಳು, ಶುದ್ಧ ಇಂಧನ ಉತ್ಪಾದನೆ ಮತ್ತು ನವೀನ ಇಂಧನ ಸಂಗ್ರಹ ವ್ಯವಸ್ಥೆಗಳಲ್ಲಿ ಸಹ-ಹೂಡಿಕೆಯತ್ತ ಗಮನಹರಿಸಿದೆ. ಭಾರತದ ವಿದ್ಯುತ್ ಗ್ರಿಡ್ನ ಸ್ಥಿತಿಸ್ಥಾಪಕತ್ವ ಮತ್ತು ಶಕ್ತಿಯನ್ನು ವರ್ಧಿಸುತ್ತದೆ.
"ಭಾರತದ ಡಿಜಿಟಲ್ ಭವಿಷ್ಯಕ್ಕಾಗಿ ಅದಾನಿ ಗ್ರೂಪ್ ಈ ಐತಿಹಾಸಿಕ ಯೋಜನೆಯಡಿ ಗೂಗಲ್ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದಕ್ಕೆ ಹೆಮ್ಮೆ ಇದೆ. ಇದು ಮೂಲಸೌಕರ್ಯದಲ್ಲಿನ ಹೂಡಿಕೆಗಿಂತ ಅಧಿಕವಾದದ್ದಾಗಿದೆ. ಇದು ಉದಯೋನ್ಮುಖ ರಾಷ್ಟ್ರದಲ್ಲಿನ ಹೂಡಿಕೆಯನ್ನು ಪ್ರತಿಬಿಂಬಿಸುತ್ತದೆ. ಈ ಪಾಲುದಾರಿಕೆಯಿಂದ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ಸಿಕ್ಕಂತಾಗುತ್ತದೆ. ದೂರದೃಷ್ಟಿ ಹೊಂದಿದ್ದು, 21ನೇ ಶತಮಾನದಲ್ಲಿ ಪ್ರತಿ ಭಾರತೀಯನನ್ನು ಸಬಲೀಕರಣಗೊಳಿಸುವ ಬದ್ಧತೆಗೆ ಸಾಕ್ಷಿ ಆಗುತ್ತದೆ ಎಂದು ಅದಾನಿ ಗ್ರೂಪ್ನ ಅಧ್ಯಕ್ಷ ಶ್ರೀ ಗೌತಮ್ ಅದಾನಿ ಹೇಳಿದರು.
Google ಕ್ಲೌಡ್ನ ಸಿಇಒ ಥಾಮಸ್ ಕುರಿಯನ್ ಅವರು ಮಾತನಾಡಿ, ಇಂದಿನ ತಂತ್ರಜ್ಞಾನಗಳ ಪೈಕಿ ಕೃತಕ ಬುದ್ಧಿಮತ್ತೆ (ಎಐ) ಹೆಚ್ಚು ಪ್ರಭಾವ ಹೊಂದಿದೆ. ಈ ಯುಗದಲ್ಲಿ ದೇಶದ ಮಹತ್ವದ ಶಕ್ತಿ, ಸಾಮರ್ಥ್ಯ ತಿಳಿಯಲು ನಮ್ಮ ಕಂಪನಿ ಗೂಗಲ್ AI ಹಬ್ನಲ್ಲಿ ಹೂಡಿಕೆ ಮಾಡುತ್ತಿದೆ. ಅಭಿವೃದ್ಧಿಗೆ ನಿರ್ಣಾಯಕ ಅಡಿಪಾಯ ಇದಾಗಿದೆ. ಸಂಶೋಧಕರು ಮತ್ತು ಸೃಷ್ಟಿಕರ್ತರು AI ನೊಂದಿಗೆ ಸಹಕರಿಸಲು ಈ ಹೂಡಿಕೆ, ಪಾಲುದಾರಿಗೆ ಅನುವು ಮಾಡುತ್ತದೆ ಎಂದು ಹೇಳಿದರು. ಗೂಗಲ್ ಅದಾನಿ ಕಂಪನಿ ಜೊತೆಗೆ ಕೆಲಸ ಮಾಡುವುದರಿಂದ ಆಧುನಿಕ ಸಂಪನ್ಮೂಲಗಳನ್ನು ಸಮುದಾಯಗಳಿಗೆ ಹತ್ತಿರವಾಗುತ್ತವೆ. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲು ಸಾಧ್ಯತವಾಗುತ್ತದೆ. ಜಾಗತಿಕ ವೇದಿಕೆಯಲ್ಲಿ ನಾವೀನ್ಯತೆ, ಅಭಿವೃದ್ಧಿ ಕಾರ್ಯಕ್ಷಮತೆ, ಭದ್ರತೆ ಸಿಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿದರು.
AI ಡೇಟಾ ಸೆಂಟರ್ ಕ್ಯಾಂಪಸ್ ಮತ್ತು ಹಸಿರು ಇಂಧನ ಯೋಜನೆಯು ವಿಶಾಖಪಟ್ಟಣದಲ್ಲಿ ಆರ್ಥಿಕ ಬೆಳವಣಿಗೆಗೆ ವೇಗ ನೀಡುತ್ತದೆ. ಡಿಜಿಟಲ್ ಬೆಳವಣಿಗೆಗೆ ಉತ್ತೇಜನ ಕೊಟ್ಟಂತಾಗುತ್ತದೆ. ತಂತ್ರಜ್ಞಾನ, ನಿರ್ಮಾಣ ಮತ್ತು ಶುದ್ಧ ಇಂಧನದಲ್ಲಿ ಹತ್ತಾರು ಸಾವಿರ ಉದ್ಯೋಗಗಳನ್ನು ಸೃಷ್ಟಿಸುತ್ತದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications