Adani Group: ಅದಾನಿ ಅಹಮದಾಬಾದ್ ಮ್ಯಾರಥಾನ್ 2025 ವಿಶೇಷತೆ
Adani Group: ಸಬರಮತಿ ರಿವರ್ಫ್ರಂಟ್ ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಡೆದ 9ನೇ ಅದಾನಿ ಅಹಮದಾಬಾದ್ ಮ್ಯಾರಥಾನ್ನಲ್ಲಿ 24,000 ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ್ದರು. ಇದರಿಂದ ಪಾರಂಪರಿಕ ನಗರವಾದ ಅಹಮದಾಬಾದ್ ಸಹಿಷ್ಣುತೆ ಮತ್ತು ಏಕತೆಯ ವೈಭವದ ಆಚರಣೆಯಾಗಿ ರೂಪಾಂತರಗೊಂಡಿತು. #Run4OurSoldiers ಎಂಬ ಉದ್ದೇಶಿತ ಥೀಮ್ನಡಿ ಈ ಮ್ಯಾರಥಾನ್, ಭಾರತದ ಸಶಸ್ತ್ರ ಪಡೆಗಳಿಗೆ ಮನದಾಳದ ಗೌರವ ಸಲ್ಲಿಸಲು ಮತ್ತೊಮ್ಮೆ ನಗರವನ್ನು ಒಟ್ಟುಗೂಡಿಸಿತು. ಈ ವರ್ಷದ ಓಟವು ಆಪರೇಷನ್ ಸಿಂಧೂರ್ ಹಿನ್ನೆಲೆಯಲ್ಲಿ ಮತ್ತಷ್ಟು ಮಹತ್ವವನ್ನು ಪಡೆದುಕೊಂಡಿತ್ತು.
ಆದಾನಿ ಎಂಟರ್ಪ್ರೈಸೆಸ್ ಲಿಮಿಟೆಡ್ನ ನಿರ್ದೇಶಕ ಶ್ರೀ ಪ್ರಣವ್ ಆದಾನಿ, ಏರ್ ಮಾರ್ಷಲ್ ನಾಗೇಶ್ ಕಪೂರ್, ಮೇಜರ್ ಜನರಲ್ ಗೌರವ್ ಬಗ್ಗಾ, ಫಿಟ್ನೆಸ್ ಅಂಬಾಸಿಡರ್ ಹಾಗೂ ನಿರೂಪಕಿ ಮಂದಿರಾ ಬೇಡಿ, ಒಲಿಂಪಿಕ್ ಪದಕ ವಿಜೇತ ಮತ್ತು ಪದ್ಮಶ್ರೀ ಪುರಸ್ಕೃತ ಗಗನ್ ನರಂಗ್, ನಟಿ-ನಿರ್ಮಾಪಕಿ ಹಾಗೂ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ನ ಉಪಾಧ್ಯಕ್ಷೆ ಪ್ರೀತಿ ಝಾಂಗಿಯಾನಿ, ಹೆಸರಾಂತ ಡಿಸೈನರ್ ಆಕಿಬ್ ವಾನಿ, ಅದಾನಿ ಗ್ರೂಪ್ನ ಕ್ರೀಡಾ ವಿಭಾಗವಾಗಿರುವ ಆದಾನಿ ಸ್ಪೋರ್ಟ್ಸ್ಲೈನ್ನ ಹಿರಿಯ ನಾಯಕರ ಸಮ್ಮುಖದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾರತದ ಕ್ರಿಕೆಟರ್ ಮತ್ತು ಗುಜರಾತ್ ಜೈಂಟ್ಸ್ ತಂಡದ ಯಸ್ತಿಕಾ ಭಾಟಿಯಾ ಕೂಡ ಹಾಜರಿದ್ದರು.

4,000ಕ್ಕೂ ಹೆಚ್ಚು ಮಿಲಿಟರಿ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ಈ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದು, ದೇಶ ಸೇವೆಯಲ್ಲಿರುವವರಿಗೆ ಗೌರವ ಮತ್ತು ಒಗ್ಗಟ್ಟಿನ ಸಂದೇಶವನ್ನು ಮತ್ತಷ್ಟು ಬಲಪಡಿಸಿದರು. ಗಾಂಧಿ ಆಶ್ರಮ, ಅಟಲ್ ಸೇತುವೆ, ಎಲಿಸ್ ಬ್ರಿಡ್ಜ್ ಸೇರಿದಂತೆ ಅಹಮದಾಬಾದ್ನ ಕೆಲವು ಪ್ರಸಿದ್ಧ ಹೆಗ್ಗುರುತುಗಳನ್ನು ಒಳಗೊಂಡ ಮಾರ್ಗದಲ್ಲಿ ಓಟಗಾರರು ಪೂರ್ಣ ಮ್ಯಾರಥಾನ್, ಹಾಫ್ ಮ್ಯಾರಥಾನ್, 10 ಕಿ.ಮೀ. ಮತ್ತು 5 ಕಿ.ಮೀ. ವಿಭಾಗಗಳಲ್ಲಿ ಸ್ಪರ್ಧಿಸಿದರು. ಪ್ರಶಸ್ತಿ ವಿಜೇತ ಆಕಿಬ್ ವಾನಿ ವಿನ್ಯಾಸಗೊಳಿಸಿದ ಅಧಿಕೃತ ಮ್ಯಾರಥಾನ್ ಜೆರ್ಸಿಯು, ಈ ಕಾರ್ಯಕ್ರಮದ ಉತ್ಸಾಹ ಹಾಗೂ ಸೈನಿಕರಿಗೆ ಸಲ್ಲಿಸಿದ ಗೌರವವನ್ನು ಪ್ರತಿಬಿಂಬಿಸಿತು.
ಪೂರ್ಣ ಮ್ಯಾರಥಾನ್, ಹಾಫ್ ಮ್ಯಾರಥಾನ್ ಮತ್ತು 10ಕೆ ವಿಭಾಗಗಳಲ್ಲಿ ₹40 ಲಕ್ಷಕ್ಕಿಂತ ಹೆಚ್ಚು ಬಹುಮಾನ ಮೊತ್ತವನ್ನು ಘೋಷಿಸಲಾಗಿದ್ದು, ವಿವಿಧ ಸ್ಪರ್ಧಾತ್ಮಕ ಮತ್ತು ವಯೋಮಾನದ ವಿಭಾಗಗಳ ವಿಜೇತರಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು. ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI)ನಿಂದ ಮಾನ್ಯತೆ ಪಡೆದಿರುವ ಈ ಮ್ಯಾರಥಾನ್, ಅಸೋಸಿಯೇಷನ್ ಆಫ್ ಇಂಟರ್ನ್ಯಾಷನಲ್ ಮ್ಯಾರಥಾನ್ಸ್ ಅಂಡ್ ಡಿಸ್ಟನ್ಸ್ ರೇಸಸ್ (AIMS) ಗ್ಲೋಬಲ್ ಮ್ಯಾರಥಾನ್ ಈವೆಂಟ್ ಪಟ್ಟಿಯಲ್ಲಿ ಕೂಡ ಸ್ಥಾನ ಪಡೆದಿದೆ. ಮಾರ್ಗದ ನಿಖರತೆ, ಅಳತೆ ಮತ್ತು ಈವೆಂಟ್ ಗುಣಮಟ್ಟಕ್ಕೆ ಜಾಗತಿಕ ಮಾನದಂಡಗಳನ್ನು ಪೂರೈಸುವ ಪ್ರಮಾಣೀಕೃತ ಮ್ಯಾರಥಾನ್ಗಳ ಅಧಿಕೃತ ನೋಂದಣಿ ಪಟ್ಟಿಯಾಗಿದೆ ಇದು. ಈ ಎಲ್ಲ ಸಾಧನೆಗಳಿಂದ ಆದಾನಿ ಅಹಮದಾಬಾದ್ ಮ್ಯಾರಥಾನ್ ಇಂದು ಭಾರತದ ಅತ್ಯಂತ ಗೌರವಾನ್ವಿತ ದೂರ ಓಟದ ಈವೆಂಟ್ಗಳಲ್ಲಿ ಒಂದಾಗಿ ಬೆಳೆದಿದೆ.
ಆದಾನಿ ಸ್ಪೋರ್ಟ್ಸ್ಲೈನ್ಗೆ, ಇದು ಭಾರತದ ಕ್ರೀಡಾ ಸಂಸ್ಕೃತಿಯನ್ನು ಬೆಳೆಸುವ ಮತ್ತು ಸಾಮೂಹಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವ ದೊಡ್ಡ ಮಟ್ಟದ ವೇದಿಕೆಗಳನ್ನು ನಿರ್ಮಿಸುವ ದೀರ್ಘಕಾಲೀನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಆದಾನಿ ಎಂಟರ್ಪ್ರೈಸಸ್ ಲಿಮಿಟೆಡ್ (AEL) ನಿರ್ದೇಶಕ ಶ್ರೀ ಪ್ರಣವ್ ಆದಾನಿ ಅವರು ಮಾತನಾಡಿದರು. "2017ರಿಂದ ಅಹಮದಾಬಾದ್ ಮ್ಯಾರಥಾನ್ ನಮ್ಮ ಪ್ರೀತಿಯ ನಗರವು ಸ್ವೀಕರಿಸಿದ ಒಂದು ಹೆಗ್ಗುರುತು ಕಾರ್ಯಕ್ರಮವಾಗಿದೆ. ಈ ವರ್ಷ, #Run4OurSoldiers ಎಂಬ ಸಂದೇಶವು ಮತ್ತಷ್ಟು ಆಳವಾಗಿ ಪ್ರತಿಧ್ವನಿಸಿತು. ಏಕೆಂದರೆ 'ಆಪರೇಷನ್ ಸಿಂಧೂರ್' ವೇಳೆ ನಮ್ಮ ಸಶಸ್ತ್ರ ಪಡೆಗಳು ದಿಟ್ಟವಾಗಿ ನಿಂತಿದ್ದವು. 24,000ಕ್ಕೂ ಹೆಚ್ಚು ಓಟಗಾರರು ಭಾಗವಹಿಸುವಿಕೆಯ ಈ ಕಾರ್ಯಕ್ರಮವು ನಗರವು ಹೆಮ್ಮೆಯಿಂದ ಹೊಂದಿರುವ ಒಂದು ಚಳುವಳಿಯಾಗಿ ಹೇಗೆ ಬೆಳೆದಿದೆ ಎಂಬುದನ್ನು ತೋರಿಸುತ್ತದೆ," ಎಂದು ಹೇಳಿದರು.
ಭಾರತೀಯ ಸೇನೆಯ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ಗೌರವ್ ಬಗ್ಗಾ ಅವರು ಮಾತನಾಡಿದ್ದು, "ಆದಾನಿ ಅಹಮದಾಬಾದ್ ಮ್ಯಾರಥಾನ್ ಒಂದು ಕ್ರೀಡಾ ಕಾರ್ಯಕ್ರಮಕ್ಕಷ್ಟೇ ಸೀಮಿತವಲ್ಲ. ಇದು ಸಶಸ್ತ್ರ ಪಡೆಗಳು ಮತ್ತು ನಾವು ಸೇವೆ ಸಲ್ಲಿಸುವ ನಾಗರಿಕರ ನಡುವಿನ ಶಾಶ್ವತ ಬಾಂಧವ್ಯಕ್ಕೆ ಜೀವಂತ ಸಾಕ್ಷಿಯಾಗಿದೆ. ದೇಶದ ಹಲವೆಡೆಯಿಂದ ಬಂದ ಸಾವಿರಾರು ಜನರೊಂದಿಗೆ 4,000ಕ್ಕೂ ಹೆಚ್ಚು ಸೈನಿಕರು ಹೆಗಲಿಗೆ ಹೆಗಲು ಕೊಟ್ಟು ಓಡುವುದನ್ನು ನೋಡುವುದು ಅತ್ಯಂತ ಹೃದಯಸ್ಪರ್ಶಿಯಾಗಿತ್ತು. ಇಂತಹ ಭಾಗವಹಿಸುವಿಕೆಯು ಕೇವಲ ಅಂಕಿಗಳ ವಿಷಯ ಮಾತ್ರವಲ್ಲ. ಇದು ಭಾರತದ ಏಕತೆ, ಶಿಸ್ತು ಹಾಗೂ ಸಕಾರಾತ್ಮಕ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಪ್ರತಿ ಹೆಜ್ಜೆಯಲ್ಲೂ ಒಟ್ಟಿಗೆ ಮುಂದೆ ಸಾಗುತ್ತಿರುವ ಒಂದು ರಾಷ್ಟ್ರದ ಸೋಲುಗಳು, ಶಕ್ತಿ ಮತ್ತು ಸ್ಪಂದನೆ ಸ್ಪಷ್ಟವಾಗಿ ಅರಿವಾಗುತ್ತಿತ್ತು," ಎಂದು ಹೇಳಿದರು.
ಭಾರತೀಯ ವಾಯುಪಡೆಯ ವಾಯು ಅಧಿಕಾರಿ ಕಮಾಂಡಿಂಗ್-ಇನ್-ಚೀಫ್ ಏರ್ ಮಾರ್ಷಲ್ ನಾಗೇಶ್ ಕಪೂರ್ ಮಾತನಾಡಿದ್ದು, "ಇಂದು, 9ನೇ ಅದಾನಿ ಅಹಮದಾಬಾದ್ ಮ್ಯಾರಥಾನ್ 2025ರಲ್ಲಿ ಭಾಗವಹಿಸುವ ಮೂಲಕ ನಮ್ಮ ಸಶಸ್ತ್ರ ಪಡೆಗಳನ್ನು ಬೆಂಬಲಿಸಲು ಇಷ್ಟೊಂದು ಬೃಹತ್ ಮತ್ತು ಉತ್ಸಾಹಭರಿತ ಜನಸಮೂಹ ಒಗ್ಗೂಡಿರುವುದನ್ನು ನೋಡಿ ನಾವು ರೋಮಾಂಚನಗೊಂಡಿದ್ದೇವೆ. ಈ ಕಾರ್ಯಕ್ರಮವು ನಾವು ಫಿಟ್ನೆಸ್ಗೆ ನೀಡುವ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ ಮತ್ತು ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸುವ ಆದಾನಿ ಗ್ರೂಪ್ನ ಈ ಅದ್ಭುತ ಮುಂದಾಳುತ್ವವನ್ನು ನೋಡಿ ಸಂತೋಷವಾಗಿದೆ. ಇಂದು ಕಂಡುಬಂದ ಅಪಾರ ಪ್ರತಿಕ್ರಿಯೆ ಮತ್ತು ಉತ್ಸಾಹ ನಿಜಕ್ಕೂ ಅಚ್ಚರಿಪಡಿಸುವಂತಿದೆ. ಸುಂದರವಾದ ಸಬರಮತಿ ರಿವರ್ಫ್ರಂಟ್ ಹಿನ್ನೆಲೆಯೊಂದಿಗೆ ಕೂಡಿದ ಈ ಅನುಭವ ನಿಜವಾಗಿಯೂ ನೆನಪಿನಲ್ಲಿ ಉಳಿಯುವಂತಹದ್ದಾಗಿದೆ," ಎಂದು ಹೇಳಿದರು.
ನಟಿ, ನಿರೂಪಕಿ, ಲೇಖಕಿ ಹಾಗೂ ಫಿಟ್ನೆಸ್ ಉತ್ಸಾಹಿ ಮಂದಿರಾ ಬೇಡಿ ಅವರು ಮಾತನಾಡಿ, "ಆದಾನಿ ಅಹಮದಾಬಾದ್ ಮ್ಯಾರಥಾನ್ ನಮ್ಮ ಸಶಸ್ತ್ರ ಪಡೆಗಳಿಗೆ ಮತ್ತು ಅವರು ಪ್ರತಿನಿಧಿಸುವ ಸೇವಾ ಮನೋಭಾವಕ್ಕೆ ನೀಡಿದ ಅದ್ಭುತ ಗೌರವವಾಗಿದೆ. ಎಲ್ಲಾ ವಯೋಮಾನದ ಓಟಗಾರರು ಅಹಮದಾಬಾದ್ನ ಐತಿಹಾಸಿಕ ಹೆಗ್ಗುರುತುಗಳಲ್ಲಿ ಒಟ್ಟಿಗೆ ಸೇರಿ ಓಡಿರುವುದು ಕಾರ್ಯಕ್ರಮದ ಉತ್ಸಾಹವನ್ನು ಹೆಚ್ಚಿಸಿತು. ಓಟವನ್ನು ಪ್ರೀತಿಸುವ ಸಮುದಾಯ ಹೇಗೆ ಬೆಳೆದಿದೆ ಮತ್ತು ನಗರವು ಹೇಗೆ ಪ್ರಮುಖ ಕ್ರೀಡಾ ಕಾರ್ಯಕ್ರಮಗಳ ಕೇಂದ್ರವಾಯಿತು ಎಂಬುದನ್ನು ನೋಡುವುದು ತುಂಬಾ ಸಂತೋಷದ ವಿಷಯ. ಈ ಬೆಳವಣಿಗೆಗೆ ಆದಾನಿ ಗ್ರೂಪ್ ಪ್ರಮುಖ ಪಾತ್ರ ವಹಿಸಿದೆ. ಕ್ರೀಡೆ ಹಾಗೂ ಸಮುದಾಯದ ಇಂತಹ ಅರ್ಥಪೂರ್ಣ ಆಚರಣೆಗಾಗಿ ಜನರನ್ನು ಒಟ್ಟುಗೂಡಿಸುವ ಒಂದು ಉಪಕ್ರಮದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಿದೆ," ಎಂದು ಹೇಳಿದರು.
ಆದಾನಿ ಸ್ಪೋರ್ಟ್ಸ್ಲೈನ್ ಅಹಮದಾಬಾದ್ ಮಹಾನಗರ ಪಾಲಿಕೆ (AMC), ಅಹಮದಾಬಾದ್ ನಗರ ಪೊಲೀಸ್, ಟ್ರಾಫಿಕ್ ಪೊಲೀಸ್, 108 ತುರ್ತು ಸೇವೆಗಳು, ಮತ್ತು ಕೆಡಿ ಆಸ್ಪತ್ರೆಗೆ ತನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತದೆ. ಅವರ ಬೆಂಬಲ ಮತ್ತು ಸಮನ್ವಯದ ಕಾರ್ಯದಿಂದ ಈ ಕಾರ್ಯಕ್ರಮವು ಎಲ್ಲಾ ಭಾಗವಹಿಸುವವರಿಗೂ ಸುರಕ್ಷಿತವಾಗಿ, ಸುಗಮವಾಗಿಯೂ ನಡೆಯುವಂತೆ ಮಾಡಿತು. 9 ನೇ ಅದಾನಿ ಅಹಮದಾಬಾದ್ ಮ್ಯಾರಥಾನ್ ಅಹಮದಾಬಾದ್ನ ಪ್ರತಿಯೊಬ್ಬ ಓಟಗಾರ ಮತ್ತು ನಾಗರಿಕರಿಗೆ ಸುರಕ್ಷಿತ, ಸುಭದ್ರ ಮತ್ತು ಸ್ಮರಣೀಯ ಅನುಭವವಾಗಿಸಲು ಪ್ರಮಖ ಕಾರಣವಾಯಿತು.
ಮಹಿಳಾ ವಿಭಾಗ
* ಅಶ್ವಿನಿ ಜಾಧವ್ - (02:56:49)
* ಭಾರತಿ (03:03:56)
* ಜ್ಯೋತಿ ಗವಾಟೆ (03:09:03)
ಪುರುಷ ವಿಭಾಗ
* ನಿಖಿಲ್ ಸಿಂಗ್ - (02:22:49)
* ಸಚಿನ್ ಪೂಜಾರಿ - (02:29:14)
* ಮೊಹಮ್ಮದ್ ಸಹೀಲ್ ಅಣ್ಣಿಗೇರಿ - (02:30:36)
ಹಾಫ್ ಓಪನ್ ಮ್ಯಾರಥಾನ್ - ಮಹಿಳಾ ವಿಭಾಗ:
* ಫರೀನ್ ಫಿರ್ದೋಸ್ - (01:03:48)
* ರತ್ನಾ ಮೆಹ್ತಾ - (01:39:10)
* ಅದಿತಿ ಪಾಂಡ್ಯಾ - (01:39:30)
ಪುರುಷ ವಿಭಾಗ
* ಧರ್ಮೇಂದರ್ - (01:31:31)
* ಮುಖೇಶ್ ಕುಮಾರ್ - (01:03:57)
* ಶಿವಂ ಸಿಂಗ್ ತೋಮರ್ - (01:06:21)
10 ಕಿ.ಮೀ. ಓಪನ್ ಮ್ಯಾರಥಾನ್ - ಮಹಿಳಾ ವಿಭಾಗ
* ನೀತಾ ರಾಣಿ - (00:35:15)
* ಅಂಜಲಿ ದೇವಿ - (00:36:32)
* ಅನುವಾ ದಾಸ್ - (00:43:56)
ಪುರುಷ ವಿಭಾಗ
* ರಾಜನ್ ಯಾದವ್ - (00:30:05)
* ಮುಕೇಶ್ ಕುಮಾರ್ - (00:30:11)
* ಸುನಿಲ್ ಕುಮಾರ್ - (00:31:02)
ಡಿಫೆನ್ಸ್ ಓಪನ್ ಮ್ಯಾರಥಾನ್ - ಮಹಿಳಾ ವಿಭಾಗ
* ಪೂಜಾ - (03:10:16)
* ನೂಪುರ್ ಜಾನು - (03:35:42)
* ನೇಹಾ ದೇವಿ - (03:42:30)
ಪುರುಷ ವಿಭಾಗ
* ಮೋಹಿತ್ ಕುಮಾರ್ ಶರ್ಮಾ - (02:27:14)
* ದಿನೇಶ್ ಸಿಂಗ್ - (02:28:02)
* ನಜೀಮ್ ಪಿ - (02:28:07)
ಹಾಫ್ ಡಿಫೆನ್ಸ್ ಮ್ಯಾರಥಾನ್ - ಮಹಿಳಾ ವಿಭಾಗ
* ಖುಷ್ಬು ಗುಪ್ತಾ - (01:25:07)
* ಪ್ರೀತಿ ಚೌಧರಿ - (01:29:00)
* ಅನ್ನು ಯಾದವ್ - 01:29:54
ಪುರುಷ ವಿಭಾಗ
* ಲವಪ್ರೀತ್ ಸಿಂಗ್ - (01:05:11)
* ಶಂಕರ್ಲಾಲ್ ಸ್ವಾಮಿ - (01:07:48)
* ಜಾವೇದ್ - (01:12:44)
10 ಕಿ.ಮೀ. ಡಿಫೆನ್ಸ್ ಮ್ಯಾರಥಾನ್ - ಮಹಿಳಾ ವಿಭಾಗ
* ಸೋನಮ್ ಚೌಧರಿ - (00:37:26)
* ಪೂಜಾ - (00:37:36)
* ಆರ್. ವರಲಕ್ಷ್ಮಿ - (00:52:49)
ಪುರುಷ ವಿಭಾಗ
ಕದಮ್ ಗೂವಿಂದ್ - (00:32:31)
ಸಚಿನ್ ಕೆ - (00:32:33)
ಕಿಶೋರ್ ಆರ್ - (00:32:47)
2026ರಲ್ಲಿ ಈ ಮ್ಯಾರಥಾನ್ ತನ್ನ10ನೇ ವರ್ಷದ ಮೈಲಿಗಲ್ಲನ್ನು ಸಮೀಪಿಸುತ್ತಿದ್ದಂತೆ, ಭಾರತದ ಕ್ರೀಡಾ ನಕ್ಷೆಯಲ್ಲಿ ಅಹಮದಾಬಾದ್ನ ಸ್ಥಾನವನ್ನು ಉನ್ನತೀಕರಿಸುವುದನ್ನು ಮುಂದುವರೆಸಿದೆ. ಸಾವಿರಾರು ಜನರನ್ನು ಉದ್ದೇಶಪೂರಿತ ಓಟಕ್ಕೆ ಒಗ್ಗೂಡಿಸುತ್ತಿದೆ.
ಅದಾನಿ ಅಹಮದಾಬಾದ್ ಮ್ಯಾರಥಾನ್
ಓಟದ ವಿಭಾಗಗಳಲ್ಲಿ ಪೂರ್ಣ ಮ್ಯಾರಥಾನ್, ಅರ್ಧ ಮ್ಯಾರಥಾನ್, 10 ಕಿಮೀ ಓಟ ಮತ್ತು 5 ಕಿಮೀ ಓಟ ಸೇರಿವೆ. ಮೊದಲ ಎರಡು ಆವೃತ್ತಿಗಳಲ್ಲಿ ಸುಮಾರು 20,000 ಓಟಗಾರರು ಭಾಗವಹಿಸಿದ್ದರು, ಮೂರನೇ ನಾಲ್ಕನೇ ಆವೃತ್ತಿಯಲ್ಲಿ 17,000 ಕ್ಕೂ ಹೆಚ್ಚು ಜನ ಭಾಗವಹಿಸುವವರು ಭಾಗವಹಿಸಿದ್ದರು.
ಅದಾನಿ ಗ್ರೂಪ್ನ ಮುಂದಾಳುತ್ವದಲ್ಲಿ ನಡೆಯುವ ಈ ಮ್ಯಾರಥಾನ್, ಭಾರತದ ಸಶಸ್ತ್ರ ಪಡೆಗಳ ಧೈರ್ಯಶಾಲಿ ಹೃದಯಗಳಿಗೆ ಒಗ್ಗಟ್ಟಿನ ಮಂತ್ರವಾಗಿದೆ. ಮ್ಯಾರಥಾನ್ ನವೆಂಬರ್ 2017ರಲ್ಲಿ ತನ್ನ ಉದ್ಘಾಟನಾ ಹೆಜ್ಜೆಯನ್ನು ಇಟ್ಟಿತು ಮತ್ತು ನವೆಂಬರ್ 2021ರಲ್ಲಿ ಅದರ ಐದನೇ ಆವೃತ್ತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಈ ಮ್ಯಾರಥಾನ್ ಓಟಗಾರರ ಮೆಚ್ಚುಗೆಗೆ ಪಾತ್ರವಾಗಿದೆ.
"#Run4OurSoldiers" ಅಭಿಯಾನವು ಈ ಮ್ಯಾರಥಾನ್ನ ಪ್ರಮುಖ ವೈಶಿಷ್ಟ್ಯವಾಗಿದೆ. ಇದು ಭಾಗವಹಿಸುವವರಿಗೆ ನಮ್ಮ ಸೈನಿಕರಿಗೆ ಗೌರವ ಸಲ್ಲಿಸುವ ಅವಕಾಶವನ್ನು ನೀಡುತ್ತದೆ. ಹಿನ್ನೆಲೆ ವರ್ಷದಲ್ಲಿ 3,000 ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಈ ಓಟದಲ್ಲಿ ಭಾಗವಹಿಸಿದ್ದರು. ಬಹುಮಾನ ಮೊತ್ತದ ಬಹುಪಾಲು ಭಾಗವನ್ನು ಸಶಸ್ತ್ರ ಪಡೆಗಳಿಗೆ ಹಂಚಲಾಗುತ್ತದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications