Get Updates
Get notified of breaking news, exclusive insights, and must-see stories!

ಹಿಮಪಾತದಲ್ಲಿ ವರ್ಷದ ಮಗು ಸೇರಿದಂತೆ 11 ಜನರ ಸಾವು

ಶ್ರೀನಗರ, ಜನವರಿ 6 : ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಬಳಿ ವಾಹನ ಮೇಲೆ ಹಿಮ ಕುಸಿದು ಬಿದ್ದ ಪರಿಣಾಮ ಒಂದು ವರ್ಷದ ಹಸುಳೆ ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕುಪ್ವಾರ ಜಿಲ್ಲೆ ಖೂನಿ ನಲ್ಲಾಹ್ ಎಂಬ ಪ್ರದೇಶದಲ್ಲಿ ಶುಕ್ರವಾರ ಪ್ರಯಾಣಿಕ ವಾಹನದ ಮೇಲೆ ಹಿಮ ಕುಸಿದು ಬಿದ್ದಿತ್ತು. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ, 7 ಮಂದಿ ನಾಪತ್ತೆಯಾಗಿದ್ದರು. ಭೀಕರ ಹಿಮಪಾತದಲ್ಲಿ ನಾಪತ್ತೆಯಾಗಿದ್ದ 6 ಮಂದಿಯ ಮೃತದೇಹಗಳನ್ನು ಭದ್ರತಾ ಸಿಬ್ಬಂದಿ ಶನಿವಾರ ಹೊರತೆಗೆದಿದ್ದಾರೆ.

ಕುಪ್ವಾರಾದಿಂದ ಕಾರ್ನಾಗೆ ಟಾಟಾ ಸುಮೋನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಂಗಧಾರ್ ಪ್ರದೇಶದಲ್ಲಿ ಶುಕ್ರವಾರ 4 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಅದೇ ಪ್ರದೇಶದಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಇಂಜಿನಿಯರ್ ಅವರನ್ನು ರಕ್ಷಿಸಲಾಗಿತ್ತು.

11 Dead After Avalanche In Jammu And Kashmir's Kupwara

ಆದರೆ, ಸ್ಥಳದಲ್ಲಿ ಯಾವುದೇ ವೈದ್ಯರು ಲಭ್ಯವಿಲ್ಲದ ಕಾರಣ ಅವರನ್ನು ಉಳಿಸಿಕೊಳ್ಳಲು ಆಗಿಲ್ಲವೆಂದು ಮೂಲಗಳು ತಿಳಿಸಿವೆ.

ಮೃತಪಟ್ಟವರ ಪೈಕಿ ಇಂಜಿನಿಯರ್ ಮಂಗಳ ಪ್ರಸಾದ್ ಸಿಂಗ್ ಎನ್ನುವರ ದೇಹ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನುಳಿದವರಿಗಾಗಿ ಪೋಲೀಸ್, ಸೈನ್ಯ ಹಾಗೂ ರಾಜ್ಯ ವಿಪತ್ತು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+