ಹೊಸ 200 ರುಪಾಯಿಯ ವಿಶೇಷಗಳೇನು ಗೊತ್ತೆ? ಇಲ್ಲಿವೆ 10 ಅಂಶ
ನವದೆಹಲಿ, ಆಗಸ್ಟ್ 24: ಇನ್ನೂರು ರುಪಾಯಿಯ ಹೊಸ ನೋಟು ಗಣೇಶ ಚತುರ್ಥಿಯಿಂದ ಅಂದರೆ ಅಗಸ್ಟ್ ಇಪ್ಪತ್ತೈದರಿಂದ ಚಾಲ್ತಿಗೆ ಬರಲಿದೆ ಅನ್ನೋದನ್ನು ರಿಸರ್ವ್ ಬ್ಯಾಂಕ್ ಇಂಡಿಯಾ ಘೋಷಿಸಿದೆ. ಐವತ್ತು ರುಪಾಯಿಯ ಹೊಸ ನೋಟು ಪರಿಚಯಿಸುವ ಘೋಷಣೆ ನಂತರ ಪತ್ರಿಕಾ ಹೇಳಿಕೆ ಮೂಲಕ ಇನ್ನೂರು ರುಪಾಯಿ ನೋಟು ಬಿಡುಗಡೆ ದಿನಾಂಕವನ್ನು ಬಹಿರಂಗ ಪಡಿಸಲಾಗಿದೆ.
ಕಳೆದ ವರ್ಷದ ನವೆಂಬರ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಪನಗದೀಕರಣದ ಘೋಷಣೆ ಮಾಡಿದ ನಂತರ ಪರಿಚಯಿಸುತ್ತಿರುವ ನಾಲ್ಕನೇ ಹೊಸ ನೋಟು ಇದು. ತೆರಿಗೆ ಕದಿಯುವವರಿಗೆ ಹೊಡೆತ ನೀಡುವ ಉದ್ದೇಶದಿಂದಲೇ ರಾತ್ರೋರಾತ್ರಿ ಹಳೆಯ ಸಾವಿರ ಹಾಗೂ ಐನೂರು ರುಪಾಯಿ ನೋಟುಗಳನ್ನು ನಿಷೇಧಿಸಿ, ಆದೇಶ ಹೊರಡಿಸಲಾಗಿತ್ತು.
ಎರಡು ಸಾವಿರ ಹಾಗೂ ಐನೂರು ರುಪಾಯಿ ನೋಟುಗಳನ್ನು ಆರ್ಥಿಕ ವ್ಯವಸ್ಥೆಯೊಳಗೆ ತಂದಿದ್ದರಿಂದ ಚಿಲ್ಲರೆ ದೊರೆಯದೆ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ದೇಶದಾದ್ಯಂತ ವಿವಿಧ ವಲಯದಿಂದ ಆಕ್ಷೇಪ ಕೂಡ ಕೇಳಿಬಂದಿತ್ತು. ಆದ್ದರಿಂದ ಇದೀಗ ಇನ್ನೂರು ರುಪಾಯಿ ನೋಟುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪರಿಚಯಿಸಲಾಗುತ್ತದೆ. ಈ ನೋಟಿನ ವಿಶೇಷತೆಗಳೇನು ಎಂದು ತಿಳಿಸುವ ಪ್ರಯತ್ನವಿದು.

ನೋಟಿನ ಅಳತೆ
ಆಗಸ್ಟ್ ಇಪ್ಪತ್ತೈದರಿಂದ ಜನರ ಕಿಸೆ ಸೇರಲಿರುವ ಹೊಸ ಇನ್ನೂರು ರುಪಾಯಿ ನೋಟಿನ ಅಳತೆ 66 ಮಿ.ಮೀ X 146 ಮಿ.ಮೀ

ಢಾಳಾದ ಹಳದಿ ಬಣ್ಣ
ಹೊಸದಾಗಿ ಚಲಾವಣೆಗೆ ಬರಲಿರುವ ಇನ್ನೂರು ರುಪಾಯಿ ನೋಟಿನ ಬಣ್ಣ ಢಾಳಾದ ಹಳದಿ.

ಸಾಂಸ್ಕೃತಿಕ ಪರಂಪರೆಯ ದ್ಯೋತಕ
ಭಾರತದ ಸಾಂಸ್ಕೃತಿಕ ಪರಂಪರೆಯ ದ್ಯೋತಕವಾದ ಸಾಂಚಿ ಸ್ತೂಪವು ಈ ನೋಟಿನಲ್ಲಿ ಮುದ್ರಿಸಲಾಗಿದ್ದು, ಇದರ ಜತೆಗೆ ಅಶೋಕ ಸ್ತಂಭವೂ ಇರಲಿದೆ.

ಗಾಂಧಿ ಚಿತ್ರ, ಬಣ್ಣ ಬದಲಾಯಿಸುವ ಶಾಯಿ
ನೋಟಿನ ಮಧ್ಯಭಾಗದಲ್ಲಿ ಗಾಂಧೀಜಿ ಚಿತ್ರವಿದ್ದು, ಅದರ ಪಕ್ಕದಲ್ಲೇ ಇನ್ನೂರು ಎಂಬ ಸಂಖ್ಯೆಯನ್ನು ಬಣ್ಣ ಬದಲಾಗುವ ಶಾಯಿ ಬಳಸಿ, ಹಾಕಲಾಗಿದೆ.

'ಭಾರತ್' ಮತ್ತು ಆರ್ ಬಿಐ
ಭದ್ರತಾ ಗೆರೆಯ ಮೇಲೆ 'ಭಾರತ್' ಮತ್ತು ಆರ್ ಬಿಐ ಎಂದಿದೆ. ಈ ಗೆರೆಯ ಬಣ್ಣ ಹಸಿರಿನಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ.

ವಿಶೇಷ ಗುರುತು
ಅಂಧರು ನೋಟು ಗುರುತಿಸಲು ಅನುಕೂಲವಾಗುವಂತೆ ಮಹಾತ್ಮ ಗಾಂಧಿ ಚಿತ್ರ ಹಾಗು ಆಶೋಕ ಸ್ತಂಭದ ಗುರುತು ಸ್ವಲ್ಪ ಉಬ್ಬಿದೆ. ಜತೆಗೆ ಅದರ ಪಕ್ಕ ಕೆಲವು ವಿಶೇಷ ಗುರುತುಗಳಿವೆ.

ಸ್ವಚ್ಛ ಭಾರತ ಅಭಿಯಾನ
ಪ್ರಧಾನಿ ಮಂತ್ರಿಗಳ ಸ್ವಚ್ಛತಾ ಅಭಿಯಾನದ ಉದ್ದೇಶವನ್ನು ಪ್ರತಿನಿಧಿಸುವ ಸ್ವಚ್ಛ ಭಾರತ ಅಭಿಯಾನದ ಗುರುತನ್ನು ಈ ನೋಟು ಒಳಗೊಂಡಿದೆ.

ಪ್ರಧಾನಿ ಕಚೇರಿಯಿಂದ ಒಪ್ಪಿಗೆ
ಇನ್ನೂರು ರುಪಾಯಿ ನೋಟನ್ನು ಹೊರತರುವ ಯೋಜನೆಯನ್ನು ಆರ್ಥಿಕ ಸಚಿವಾಲಯ ಅನುಮೋದಿಸಿ, ಒಪ್ಪಿಗೆ ನೀಡಿದೆ. ಅಂದಹಾಗೆ ಈ ನೋಟಿನ ರೂಪರೇಖೆಗೆ ಪ್ರಧಾನಮಂತ್ರಿಗಳ ಕಚೇರಿಯಿಂದಲೇ ಒಪ್ಪಿಗೆ ಸೂಚಿಸಲಾಗಿದೆ.

ಚಿಲ್ಲರೆಗೆ ಸಮಸ್ಯೆ
ಈ ಹಿಂದೆ ಎರಡು ಸಾವಿರ ಹಾಗೂ ಐನೂರು ರುಪಾಯಿ ನೋಟುಗಳನ್ನು ಬಿಡುಗಡೆ ಮಾಡಿದಾಗ ಚಿಲ್ಲರೆಗೆ ಸಮಸ್ಯೆ ಉದ್ಭವಿಸಿ ದೇಶದ ಲಕ್ಷಾಂತರ ಮಂದಿ ಸಮಸ್ಯೆ ಎದುರಿಸುವಂತಾಗಿತ್ತು.

ಸಮಸ್ಯೆ ನಿವಾರಣೆ
ಎರಡು ಸಾವಿರ ರುಪಾಯಿ ನೋಟಿನ ಬಿಡುಗಡೆಯಿಂದ ಎದುರಾಗಿದ್ದ ಸಮಸ್ಯೆಗಳು ಇದೀಗ ಇನ್ನೂರು ರುಪಾಯಿ ನೋಟು ಬಿಡುಗಡೆ ಆಗುವ ಮೂಲಕ ನಿವಾರಣೆ ಆಗಲಿದೆ ಎಂಬುದು ಸರಕಾರದ ಭರವಸೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications