ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾರ ಹುಡುಕಿ ಬಂದು ವಿದ್ಯುತ್ ಕಂಬ ಏರಿದ ಚಿರತೆ ಅಲ್ಲೇ ಸಾವು

|
Google Oneindia Kannada News

ಹೈದರಾಬಾದ್, ಜುಲೈ 4: ಇದು ತೆಲಂಗಾಣದಲ್ಲಿ ನಡೆದ ಘಟನೆ. ವಿದ್ಯುತ್ ಕಂಬ ಏರಿದ ಚಿರತೆ ವಿದ್ಯುತ್ ಸ್ಪರ್ಶದಿಂದ ಸೋಮವಾರ ಮೃತಪಟ್ಟಿದೆ. ನಿಜಾಂಬಾದ್ ಜಿಲ್ಲೆಯ ಮಲ್ಲರಾಮ್ ಅರಣ್ಯ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.

ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಜನರು ವಾಸಿಸುವ ಪ್ರದೇಶದೊಳಕ್ಕೆ ಚಿರತೆ ಬಂದಿದೆ. ಸ್ಥಳೀಯರು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಲುಪಿಸಿದ್ದಾರೆ. ಈ ಮಧ್ಯೆ ವಿದ್ಯುತ್ ಕಂಬ ಏರಿದ ಚಿರತೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದೆ.

Leopard Climbs Electric Pole, Dies In Telangana

ಹೈ ಟೆನ್ಷನ್ ತಂತಿಯ ಮೇಲೆ ಚಿರತೆ ಕಳೇಬರ ನೇತಾಡುತ್ತಿರುವುದು ಕಂಡುಬಂದಿದೆ. ತಕ್ಷಣವೇ ವಿದ್ಯುತ್ ಪೂರೈಕೆ ನಿಲ್ಲಿಸಿ, ಕೆಳಕ್ಕೆ ಇಳಿಸಲಾಗಿದೆ. ವಿದ್ಯುತ್ ತಂತಿಯ ಮೇಲೆ ನೇತಾಡುತ್ತಿದ್ದ ಚಿರತೆ ಕಳೇಬರವನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು.

ತೀರ್ಥಹಳ್ಳಿಯಲ್ಲೀಗ ಚಿರತೆ ದಾಳಿಯದೇ ಸುದ್ದಿತೀರ್ಥಹಳ್ಳಿಯಲ್ಲೀಗ ಚಿರತೆ ದಾಳಿಯದೇ ಸುದ್ದಿ

ಆಹಾರ ಹುಡುಕಿಕೊಂಡು ಕಾಡಿನಿಂದ ಚಿರತೆ ಹೊರಬಂದಿದೆ. ಬಲಿ ಪ್ರಾಣಿಯನ್ನು ಬೇಟೆ ಆಡುವ ಉದ್ದೇಶದಿಂದಲೇ ವಿದ್ಯುತ್ ಕಂಬ ಏರಿರಬೇಕು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ವನ್ಯಜೀವಿಯೊಂದು ಹೀಗೆ ವಿದ್ಯುತ್ ಸ್ಪರ್ಶಕ್ಕೆ ತುತ್ತಾಗಿ ಮೃತಪಟ್ಟಿರುವುದು ಬೇಸರದ ಸಂಗತಿ. ಅದರಲ್ಲೂ ಕಾಡಿನಲ್ಲಿ ಬೇಟೆ ಪ್ರಾಣಿಗಳು ಸಿಗದೆ ಜನ ವಸತಿ ಪ್ರದೇಶದಲ್ಲಿ ಬರುತ್ತಿರುವುದು ಆತಂಕದ ವಿಚಾರ.

English summary
A leopard died of electrocution after it climbed an electricity pole in Telangana, police said on Monday. The incident occurred in Mallaram forest area in Nizamabad district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X