ನಿರೋಶಾ ಭಾವಿ ಪತಿ ಜತೆ ಚಾಟ್ ಕಾಲ್ ಮಾಡುತ್ತಾ ನೇಣಿಗೆ ಶರಣು
ಹೈದರಾಬಾದ್, ಮಾರ್ಚ್ 16: ಸನ್ ಟಿವಿ ಜಾಲಕ್ಕೆ ಸೇರಿರುವ ಜೆಮಿನಿ ಮ್ಯೂಸಿಕ್ ಚಾನೆಲ್ ನಲ್ಲಿ ನಿರೂಪಕಿಯಾಗಿದ್ದ ನಿರೋಶಾ ಅವರು ಬುಧವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಓದಿರಬಹುದು. ನಿರೋಶಾ ಸಾವಿನ ಕುರಿತ ಇನ್ನಷ್ಟು ಮಾಹಿತಿ ಇದೀಗ ನಮ್ಮ ಒನ್ ಇಂಡಿಯಾ ತೆಲುಗು ಪ್ರತಿನಿಧಿಯಿಂದ ಸಿಕ್ಕಿದೆ. ಭಾವಿ ಪತಿಯೊಂದಿಗೆ ವಿಡಿಯೋ ಚಾಟ್ ಮಾಡುತ್ತಾ ನಿರೋಶಾ ಸಾವಿಗೆ ಶರಣಾಗಿರುವುದು ದೃಢಪಟ್ಟಿದೆ.
ಸಿಕಂದರಾಬಾದಿನ ಸಿಂಧಿ ಕಾಲೋನಿಯ ಮಹಿಳಾ ವಸತಿ ಗೃಹ (ಪಿಜಿ) ದಲ್ಲಿ ವಾಸವಿದ್ದ ನಿರೋಶಾ ವಿಡಿಯೋ ಜಾಕಿಯಾಗುವುದಕ್ಕೂ ಮುನ್ನ ಕೆಲ ಸಮಯ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದರು. ಬುಧವಾರ ಮಧ್ಯರಾತ್ರಿ ನಂತರ ಕೆನಡಾದಲ್ಲಿರುವ ತನ್ನ ಭಾವಿ ಪತಿಯೊಡನೆ ನಿರೋಶಾ ವಿಡಿಯೋ ಚಾಟ್ ಆರಂಭಿಸಿದ್ದಾರೆ.[ಮ್ಯೂಸಿಕ್ ಚಾನೆಲ್ ನಿರೂಪಕಿ ನಿರೋಶಾ ಆತ್ಮಹತ್ಯೆ]
ಈ ವಿಡಿಯೋ ಚಾಟ್ ವೇಳೆ ಇಬ್ಬರಿಗೂ ಮನಸ್ತಾಪವಾಗಿದೆ. ಚಾಟ್ ಜಾರಿಯಲ್ಲಿರುವಾಗಲೇ ನಿರೋಶಾ ತನ್ನ ದುಪ್ಪಟ್ಟಾ ಬಳಸಿಕೊಂಡು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿರೋಶಾ ಈ ಆತುರದ ನಿರ್ಧಾರವನ್ನು ತಡೆಯಲು ಆಗದಂಥ ಪರಿಸ್ಥಿತಿಯಲ್ಲಿದ್ದ ಗೆಳೆಯ ರಿತ್ವಿಕ್ ಅಸಹಾಯಕತೆಯಿಂದ ಪರಿತಪಿಸಿದ್ದಾರೆ. ಇನ್ನಷ್ಟು ಮಾಹಿತಿ ಮುಂದೆ ಓದಿ...

ಆತ್ಮಹತ್ಯೆ ಬಗ್ಗೆ ಸೂಚನೆ ಸಿಕ್ಕಾಗ ಅಲರ್ಟ್ ಆದ ರಿತ್ವಿಕ್
ಆತ್ಮಹತ್ಯೆ ಬಗ್ಗೆ ಸೂಚನೆ ಸಿಕ್ಕಾಗ ಅಲರ್ಟ್ ಆದ ರಿತ್ವಿಕ್, ತಕ್ಷಣವೇ ಜ್ಯೂಬಿಲಿ ಹಿಲ್ಸ್ ನಲ್ಲಿರುವ ಸಂಬಂಧಿಕರಿಗೆ ಕರೆ ಮಾಡಿ ನೆರವು ಕೋರಿದ್ದಾರೆ.ಆದರೆ, ಜ್ಯೂಬಿಲಿ ಹಿಲ್ಸ್ ನಿಂದ ಸಿಕಂದರಾಬಾದಿನ ಸಿಂಧಿ ಕಾಲೋನಿಯ ಮಹಿಳಾ ವಸತಿ ಗೃಹ (ಪಿಜಿ) ದ ಕಡೆಗೆ ಅವರು ಬರುವಷ್ಟರಲ್ಲಿ ನಿರೋಶಾ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ.

ವಿಡಿಯೋ ಚಾಟ್ ಗೂ ಮುನ್ನ ಪೋಷಕರಿಗೆ ಕರೆ
ಕೆನಡಾದಲ್ಲಿರುವ ಗೆಳೆಯ ರಿತ್ವಿಕ್ ಜೊತೆಗೆ ವಿಡಿಯೋ ಚಾಟ್ ಮಾಡುವುದಕ್ಕೂ ಮುನ್ನ ನಿರೋಶಾ ಅವರು ಪೋಷಕರಿಗೆ ಕರೆ ಮಾಡಿದ್ದರು. ಚಿತ್ತೂರು ಜಿಲ್ಲೆಯ ಸೋಮಲ ಮಂಡಲ್ ನಲ್ಲಿರುವ ಆಕೆ ಪೋಷಕರು ಕೂಡಾ ಗಾಬರಿಯಿಂದ ಸಿಕಂದರಾಬಾದಿಗೆ ಬರುವಷ್ಟರಲ್ಲಿ ಅನರ್ಥ ಸಂಭವಿಸಿಬಿಟ್ಟಿದೆ. ನಿರೋಶಾ ಸಂಬಂಧಿಕರು ಹಾಗೂ ಪೋಷಕರು ಯಾರ ಮೇಲೂ ಅನುಮಾನವಿಲ್ಲ ಎಂದಿದ್ದಾರೆ. ಹೆಚ್ಚಿನ ಪ್ರತಿಕ್ರಿಯೆ ನೀಡಿಲ್ಲ

ಮಾನಸಿಕ ಖಿನ್ನತೆ ಸೂಚನೆಯೇ ಇರಲಿಲ್ಲ
ಕಚೇರಿಯಲ್ಲಿ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಡಲ್ ಆಗಿದ್ದು ನಾವು ನೋಡಿಲ್ಲ. ಸದಾ ನಗುನಗುತ್ತಾ ಖುಷಿಯಾಗಿ ಇರುತ್ತಿದ್ದರು. ಸೆಲ್ಫಿ ತೆಗೆದುಕೊಳ್ಳುತ್ತಾ ಎಲ್ಲರೊಡನೆ ಬೆರೆಯುತ್ತಿದ್ದರು ಎಂದು ಜೆಮಿನಿ ಟಿವಿಯ ಸಹದ್ಯೋಗಿ ಪ್ರತಿಕ್ರಿಯಿಸಿದ್ದಾರೆ.

ಪೊಲೀಸರಿಗೆ ಇನ್ನೂ ಸರಿಯಾದ ಸುಳಿವು ಸಿಕ್ಕಿಲ್ಲ
ನಿರೋಶಾ ಅವರ ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಮೇಲ್ನೋಟಕ್ಕೆ ಆಕೆಗೆ ಮದುವೆ ಸದ್ಯಕ್ಕೆ ಇಷ್ಟವಿರಲಿಲ್ಲ. ಭಾವಿ ಪತಿ ಜೊತೆಗೆ ಜಗಳವಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆಕೆ ಬಳಿ ಇದ್ದ ಸೆಲ್ ಫೋನ್, ಲ್ಯಾಪ್ ಟಾಪ್ ವಶಪಡಿಸಿಕೊಂಡಿದ್ದಾರೆ. ಪೋಷಕರು, ಸಹದ್ಯೋಗಿಗಳ ಹೇಳಿಕೆ ಪಡೆಯಲಾಗಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications