ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಂಗ್ರೆಸ್ ಮುಖಂಡ ಯಾದಗಿರಿ ಮೇಲೆ ಗುಂಡಿನ ದಾಳಿ
ಹೈದರಾಬಾದ್, ಆಗಸ್ಟ್ 13: ತೆಲಂಗಾಣದ ಕಾಂಗ್ರೆಸ್ ನಾಯಕ, ಉದ್ಯಮಿ ಯಾದಗಿರಿ ಅವರ ಮೇಲೆ ದುಷ್ಕರ್ಮಿಗಳು ಶನಿವಾರ ಗುಂಡಿನ ದಾಳಿ ನಡೆಸಿ, ಪರಾರಿಯಾಗಿರುವ ಘಟನೆ ನಡೆದಿದೆ.
ಸಿಕಂದರಾಬಾದಿನ ಬೌವಿಪಲ್ಲಿ ಎಂಬಲ್ಲಿ ಎರಡು ಬೈಕ್ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಐದರಿಂದ ಆರು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡಿಗೆ ದಾಳಿಗೆ ತುತ್ತಾದ ಯಾದಗಿರಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಾದಗಿರಿ ಅವರ ಮೇಲಿನ ದಾಳಿಗೆ ರಿಯಲ್ ಎಸ್ಟೇಟ್ ವ್ಯವಹಾರವೇ ಕಾರಣ ಎನ್ನಲಾಗಿದೆ. ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ಡೆಕ್ಕನ್ ಬಾಬು ಮತ್ತು ಆತನ ಸಹಚರರು ಕೃತ್ಯ ಈ ಹಿಂದೆ ಕೂಡಾ ಯಾದಗಿರಿಗೆ ಧಮಕಿ ಹಾಕಿದ್ದರು.
ಈಗ ಯಾದಗಿರಿ ಮೇಲೆ ಹಲ್ಲೆ ಮಾಡಿದ್ದಾರೆ. ಗುಂಡು ಸೊಂಟದ ಭಾಗಕ್ಕೆ ಬಿದ್ದಿರುವುದರಿಂದ ದಾಳಿಕೋರರಿಗೆ ಕೊಲ್ಲುವ ಉದ್ದೇಶ ಇರಲಿಲ್ಲ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸಿಕಂದರಾಬಾದಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments
English summary
Congress leader Yadagiri shot at in Secunderabad. The incident took place in Bowenpally in Secunderabad when two unidentified miscreants came on a bike and fired two rounds on Congress leader Yadagiri and fled.
Story first published: Saturday, August 13, 2016, 17:44 [IST]