ಮಾಜಿ ಸಚಿವೆಯಿಂದಲೇ ಮುಖ್ಯಮಂತ್ರಿ ಸಂಬಂಧಿಕರ ಅಪಹರಣ!
ಹೈದರಾಬಾದ್, ಜನವರಿ 7: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ದೂರದ ಸಂಬಂಧಿಯ ಅಪಹರಣ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಆಂಧ್ರಪ್ರದೇಶದ ಮಾಜಿ ಪ್ರವಾಸೋದ್ಯಮ ಸಚಿವೆ ಮತ್ತು ತೆಲುಗು ದೇಶ ಪಕ್ಷದ ನಾಯಕಿ ಭುಮಾ ಅಖಿಲಾ ಪ್ರಿಯಾ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಭೂ ವಿವಾದವೊಂದಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ ಎನ್ನಲಾಗಿದೆ.
'ಅಖಿಲಾ ಪ್ರಿಯಾ ಅವರನ್ನು ಬೆಳಿಗ್ಗೆ ಅವರ ನಿವಾಸದಿಂದ ವಶಕ್ಕೆ ಪಡೆದುಕೊಂಡಿದ್ದೆವು. ಪ್ರಾಥಮಿಕ ವಿಚಾರಣೆ ಬಳಿಕ ಮಧ್ಯಾಹ್ನ ಔಪಚಾರಿಕವಾಗಿ ಬಂಧಿಸಿದ್ದೆವು. ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಮಂಗಳವಾರ ಸಂಜೆ ಸಿಕಂದರಾಬಾದ್ನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ' ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ತಿಳಿಸಿದ್ದಾರೆ.
ಅಖಿಲಾ ಪ್ರಿಯಾ, ಆಕೆಯ ಪತಿ ಭಾರ್ಗವ್ ರಾಮ್ ಮತ್ತು ಕರ್ನೂಲ್ನ ಮತ್ತೊಬ್ಬ ಹಿರಿಯ ಟಿಡಿಪಿ ಮುಖಂಡ ಎವಿ ಸುಬ್ಬಾ ರೆಡ್ಡಿ ಹಾಗೂ ಇತರರು ಈ ಅಪಹರಣ ಯೋಜನೆ ರೂಪಿಸುವಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ. ಮುಂದೆ ಓದಿ.

ಕೆಸಿಆರ್ ದೂರದ ಸಂಬಂಧಿಕರು
ಅಪಹರಣಕ್ಕೆ ಒಳಗಾದ ಕೆ. ಪ್ರವೀಣ್ ರಾವ್, ಕೆ. ಸುನೀಲ್ ರಾವ್ ಮತ್ತು ಕೆ. ನವೀನ್ ರಾವ್ ಅವರು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ದೂರದ ಸಂಬಂಧಿ ಹಾಗೂ ಅವರ ಆಪ್ತರಾದ ಪಿ. ವೇಣುಗೋಪಾಲ್ ರಾವ್ ಅವರ ಸಮೀಪದ ಸಂಬಂಧಿಕರಾಗಿದ್ದಾರೆ. ಪ್ರವೀಣ್ ರಾವ್ ಅವರು ಮಾಜಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ.

ಐಟಿ ಅಧಿಕಾರಿಗಳ ಸೋಗು
ಸಹೋದರರಾದ ಸುನೀಲ್ ರಾವ್ ಮತ್ತು ನವೀನ್ ರಾವ್ ಅವರೊಂದಿಗೆ ಪ್ರವೀಣ್ ರಾವ್ ನೆಲೆಸಿದ್ದ ಬೊವೆನ್ಪಲ್ಲಿಯ ಮನೋವಿಕಾಸ ನಗರದಲ್ಲಿ ಇರುವ ಕೃಷ್ಣ ರೆಸಿಡೆನ್ಸಿ ಅಪಾರ್ಟ್ಮೆಂಟ್ನ ಮನೆಗೆ ರಾತ್ರಿ 7.30ರ ಸುಮಾರಿಗೆ ನುಗ್ಗಿದ್ದ ಹತ್ತು ಮಂದಿ, ಅವರನ್ನು ಅಪಹರಿಸಿದ್ದರು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಂದು ತಮ್ಮ ಗುರುತಿನ ಚೀಟಿ ಕೂಡ ಅಪಹರಣಕಾರರು ತೋರಿಸಿದ್ದರು.

ಬೆಡ್ರೂಂನಲ್ಲಿ ಕೂಡಿಹಾಕಿದರು
ಕುಟುಂಬದ ಇತರರನ್ನು ಬೆಡ್ರೂಂನಲ್ಲಿ ಕೂರುವಂತೆ ಸೂಚಿಸಿ, ಈ ಮೂವರನ್ನು ಹಾಲ್ಗೆ ಕರೆದೊಯ್ದಿದ್ದರು. ಅಲ್ಲಿಂದ ವಾಹನದಲ್ಲಿ ಬಲವಂತವಾಗಿ ಎಳೆದುಕೊಂಡು ಹೋಗಿದ್ದರು. ಸುಮಾರು ಒಂದು ಗಂಟೆ ಒಳಗೆ ಕುಳಿತಿದ್ದ ಕುಟುಂಬದವರು ಹೊರಗೆ ಬಂದು ನೋಡಿದಾಗ ಅಲ್ಲಿ ಯಾರೂ ಇರಲಿಲ್ಲ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
Recommended Video

ದಾಖಲೆಗಳಿಗೆ ಸಹಿ ಹಾಕಿಸಿ ಬಿಟ್ಟರು
ಅಪಹರಣಕಾರರು ಫಾರ್ಮ್ಹೌಸ್ ಒಂದರಲ್ಲಿ ಮೂವರು ಸಹೋದರರಿಂದ ಕೆಲವು ದಾಖಲೆಗಳಿಗೆ ಸಹಿ ಹಾಕಿಸಿಕೊಂಡು, ನಸುಕಿನ 3.30ರ ಸುಮಾರಿಗೆ ಕೋಕಪೇಟ್-ನರಸಿಂಗಿ ಪ್ರದೇಶದಲ್ಲಿ ಬಿಟ್ಟು ತೆರಳಿದ್ದರು. ಹಫೀಜ್ಪೇಟೆಯಲ್ಲಿ 50 ಎಕರೆ ಭೂಮಿಗೆ ಸಂಬಂಧಿಸಿದಂತೆ ಆರೋಪಿಗಳು ಮತ್ತು ತಮ್ಮ ಕುಟುಂಬದ ನಡುವೆ ವಿವಾದ ಉಂಟಾಗಿತ್ತು ಎಂದು ಪ್ರವೀಣ್ ರಾವ್ ಅವರ ಮತ್ತೊಬ್ಬ ಸಹೋದರ ಪ್ರತಾಪ್ ರಾವ್ ತಿಳಿಸಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications