ಮೈಮೇಲೇ ಹರಿದ ಬಸ್ಸು: ಹೈದರಾಬಾದಿನ ವಿದ್ಯಾರ್ಥಿನಿ ಸಾವು
ಹೈದರಾಬಾದ್, ಜನವರಿ 20: ಶಾಲೆಯ ಬಸ್ಸಿನಿಂದ ಇಳಿದ ಮಗುವಿನ ಮೇಲೆ ಬಸ್ಸು ಹಾಯ್ದ ಪರಿಣಾಮ ಮಗು ಮೃತಳಾದ ಘಟನೆ ಹಅಯದರಾಬಾದಿನಲ್ಲಿ ಇಂದು(ಜ.20) ನಡೆದಿದೆ.
ಶಾಲೆಯ ಬಸ್ಸಿನಿಂದ ಮಗು ಇಳಿಯುತ್ತದ್ದ ಸಂದರ್ಭದಲ್ಲಿ ಬಸ್ಸಿನ ಚಾಲಕ ಜೋರಾಗಿ ಬ್ರೇಕ್ ಹಾಕಿದ್ದರಿಂದ ಆಯತಪ್ಪಿ ಮಗು ಬಸ್ಸಿನಿಂದ ಕೆಳಕ್ಕೆ ಬಿದ್ದಿತ್ತು. ಬಿದ್ದ ಮಗುವಿನ ಮೇಲೆ ಬಸ್ ಹಾಯಿಸಿದ್ದರಿಂದ ಮಗು ಸ್ಥಳದಲ್ಲೇ ಮೃತಪಟ್ಟಿದೆ.
ಹೈದರಾಬಾದಿನ ಪ್ರಶಾಂತಿ ವಿದ್ಯಾನಿಕೇತನ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದ ಅಂಜಲಿ ಮೃತ ನತದೃಷ್ಟೆ.

ಘಟನೆಗೆ ಸಂಬಂಧಿಸಿದಂತೆ ಬಸ್ಸಿನ ಚಾಲಕನ ಮೇಲೆ ಪ್ರಕರಣ ಸಾಖಲಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಮಕ್ಕಳ ಹಕ್ಕು ಹೋರಾಟಗಾರ ಅಚ್ಯುತ್ ರಾವ್, ಇದು ಚಾಲಕನ ಬೇಜವಾಬ್ದಾರಿಯಿಂದ ಸಂಭವಿಸಿದೆ. ಪ್ರತಿ ಬಸ್ಸಿನಲ್ಲಿಯೂ ಬಾಗಿಲ ಬಳಿ ಒಬ್ಬ ಅಟೆಂಡರ್ ಇರಬೇಕು. ಆದರೆ ಶಾಲೆಯು ಅಟೆಂಡರ್ ಅನ್ನು ಇಟ್ಟಿಲ್ಲ. ಇದರಲ್ಲಿ ಶಾಲೆಯದೂ ತಪ್ಪಿದೆ ಎಂದು ದೂರಿದ್ದಾರೆ.












Click it and Unblock the Notifications