Breaking; ಹುಬ್ಬಳ್ಳಿ BRTS ಸ್ಮಾರ್ಟ್ಕಾರ್ಡ್ನಲ್ಲಿ ಭಾರೀ ರಿಯಾಯಿತಿ
ಹುಬ್ಬಳ್ಳಿ, ಡಿಸೆಂಬರ್ 13; ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾಕರಸಾಸಂ) ಬಸ್ ಪಾಸುಗಳಲ್ಲಿ ಭಾರೀ ರಿಯಾಯಿತಿ ಘೋಷಣೆ ಮಾಡಿದೆ. ಡಿಸೆಂಬರ್ 15ರಿಂದ ಈ ನಿಯಮಗಳು ಜಾರಿಗೆ ಬರಲಿವೆ ಎಂದು ಹೇಳಿದೆ.
ವಾಕರಸಾಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಹುಬ್ಬಳ್ಳಿ-ಧಾರವಾಡ ನಡುವೆ ಸಂಚಾರ ನಡೆಸುವ ಬಸ್ಗಳ BRTS ಸ್ಮಾರ್ಟ್ಕಾರ್ಡ್ಗಳಲ್ಲಿ ಭಾರೀ ರಿಯಾಯಿತಿ ಘೋಷಣೆ ಮಾಡಲಾಗಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಬಿ. ಆರ್. ಟಿ. ಎಸ್. ಸ್ಮಾರ್ಟ್ಕಾರ್ಡ್/ ನಗರ ಮಾಸಿಕ ಪಾಸ್ಗಳಲ್ಲಿ ಭಾರೀ ರಿಯಾಯಿತಿ ಘೋಷಣೆ ಮಾಡಲಾಗಿದೆ. ಕಡಿಮೆ ದಿನಗಳಿಗೆ ಪಾವತಿಸಿ, ಹೆಚ್ಚಿಗೆ ದಿನಗಳಿಗೆ ಪ್ರಯಾಣಿಸಿ ಎಂದು ಪ್ರಯಾಣಿಕರಿಗೆ ಕರೆ ನೀಡಲಾಗಿದೆ.

ಏನಿದು ಯೋಜನೆ?; ಬಿ. ಆರ್. ಟಿ. ಎಸ್ ಯೋಜನೆಯು ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಅನುಷ್ಠಾನಗೊಂಡ ತ್ವರಿತ ನಗರ ಸಾರಿಗೆಯ ಹೆಚ್. ಡಿ. ಬಿ. ಆರ್. ಟಿ. ಎಸ್ ಯೋಜನೆ. ಚಿಗರಿ ಬಸ್ಸುಗಳ ಮೂಲಕ ಸಾರ್ವಜನಿಕ ಸಾರಿಗೆ ಸೇವೆಯನ್ನು ಅವಳಿ ನಗರದಲ್ಲಿ ನೀಡಲಾಗುತ್ತಿದೆ.

2018ರಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿತ್ತು. 2020ರಲ್ಲಿ ಎರಡು ವರ್ಷದ ಅವಧಿಯಲ್ಲಿ ಸುಮಾರು 3.35 ಕೋಟಿ ಜನ ಚಿಗರಿ ಬಸ್ನಲ್ಲಿ ಪ್ರಯಾಣಿಸಿ ಯೋಜನೆಯ ಯಶಸ್ಸಿಗೆ ಸಾಕ್ಷಿಯಾದರು. ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ನಿತ್ಯ ಪ್ರಯಾಣಕ್ಕಾಗಿ ಈ ಬಸ್ಗಳನ್ನು ಅವಲಂಬಿಸಿದ್ದಾರೆ.
ಕಳೆದ ವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಜತ ಮಹೋತ್ಸವದ ಅಂಗವಾಗಿ ಆಕರ್ಷಕ ದರದಲ್ಲಿ ಬಸ್ ಪಾಸ್ ಘೋಷಣೆ ಮಾಡಿತ್ತು. ಈ ಪಾಸ್ ಮೂಲಕ ಜನರು 20 ದಿನಗಳ ಪ್ರಯಾಣ ವೆಚ್ಚದಲ್ಲಿ 32 ದಿನಗಳ ಕಾಲ ಸಂಚಾರ ನಡೆಸಲು ಅವಕಾಶವಿದೆ. ಈ ಪಾಸ್ ಸಹ ಡಿಸೆಂಬರ್ 15ರಿಂದ ಸಿಗಲಿದೆ.
ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವಾಕರಸಾಸಂ ಸಂಸ್ಥೆಯ ವ್ಯಾಪ್ತಿಯಲ್ಲಿ ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಬಾಗಲಕೋಟೆ, ಗದಗ ಮತ್ತು ಹಾವೇರಿ ಜಿಲ್ಲೆಗಳಿವೆ.












Click it and Unblock the Notifications