Get Updates
Get notified of breaking news, exclusive insights, and must-see stories!

Karnataka Rain: ಬರಕ್ಕೆ ತತ್ತರಿಸಿದ್ದ ರೈತರಿಗೆ ಬಿರುಗಾಳಿ ಸಹಿತ ಬಂದ ಮಳೆಯ ಬರೆ

ಹುಬ್ಬಳ್ಳಿ, ಏಪ್ರಿಲ್ 14: ರಾಜ್ಯದಲ್ಲಿ ಅಲ್ಲಲ್ಲಿ ಬಿರುಗಾಳಿ ಸಹಿತ ಜೋರು ಮಳೆ ಆಗುತ್ತಿದೆ. ಸಿಡಿಲಿಗೆ ಒಂದೆರಡು ಸಾವುಗಳು ಸಂಭವಿಸಿವೆ. ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಶನಿವಾರ ಸಂಜೆ 5 ಗಂಟೆಗೆ ವಿವಿಧೆಡೆ ಧಾರಾಕಾರವಾಗಿ ಜೋರು ಮಳೆ ಸುರಿಯಿತು.

ಜಿಲ್ಲೆಯ ಕಲಘಟಗಿ ತಾಲೂಕು ಸೇರಿದಂತೆ ಹಲವು ಗ್ರಾಮಗಳಲ್ಲಿ ರಾತ್ರಿಯಿಡಿ ಮಳೆ ಮುಂದುವರೆಯಿತು. ಜೋರು ಗಾಳಿ ಮತ್ತು ಮಳೆ ರಭಸಕ್ಕೆ ತೋಟಗಾರಿಕೆ ಬೆಳಯಾದ ಮಾವು, ಬಾಳೆಗೆ ಹಾನಿ ಯಾಗಿದೆ. ಕೆಲವೆಡೆ ವಿದ್ಯುತ್ ಕಂಬಗಳು ನೆಲಕಚ್ಚಿವೆ. ಈ ಮಳೆ ಬರಗಾಲದಿಂದ ಕಂಗೆಟ್ಟ ರೈತರಿಗೆ ಮತ್ತೆ ಬರೆ ಎಳೆದಿದೆ.

Karnataka Rain Mango and Banana Crop Loss Due to Heavy Rain in Kalghatgi in Dharwad

ಪ್ರತಿ ಹಂತದಲ್ಲೂ ರೈತರ ಬೆಳೆದ ಮಾವು ಬಾಳೆಗಿಡ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗಿದೆ. ಸತತ ನಾಲ್ಕು ವರ್ಷದಿಂದ ತಾಲೂಕಿನ ರೈತ ವರ್ಗ ನಿರಾಶೆ ಭಾವನೆ ಕಾಡುತ್ತಿದೆ. ಇದರಿಂದ ಎಷ್ಟೋ ರೈತ ವರ್ಗಕ್ಕೆ ಸಮಯಕ್ಕೆ ಸರಿಯಾಗಿ ಬರಗಾಲದಿಂದ ಯಾವುದೇ ರೀತಿಯ ಪರಿಹಾರವನ್ನು ಸರ್ಕಾರ ನೀಡಿಲ್ಲ.

ಪ್ರತಿ ಹಂತದಲ್ಲಿ ರೈತರಿಗೆ ನಷ್ಟ, ಸರ್ಕಾರದಿಂದ ಅನ್ಯಾಯ

ಕೇಂದ್ರ ಹಾಗೂ ರಾಜ್ಯ ಸರ್ಕಾರ ಧೋರಣೆಯ ನೀತಿಯಿಂದ ಪ್ರತಿ ಹಂತದಲ್ಲೂ ರೈತರಿಗೆ ಅನ್ಯಾಯವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ತಾಲೂಕಿನ ರೈತ ವರ್ಗದವರ ಏಳಿಗೆಗೆ ಸರ್ಕಾರ ಮುಂದಾಗ ಬೇಕಾಗಿದೆ. ರೈತರ ಬೆಳೆದ ಬೆಳಗೆ ಮಾರುಕಟ್ಟೆಯಲೆ ನಿಗದಿತ ದರವು ಇಲ್ಲದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಬರ ಪರಿಹಾರ ನೀಡಲು ರೈತರು ಆಗ್ರಹ

ಮಾರುಕಟ್ಟೆಯ ಏಜೆಂಟರ ಹಾವಳಿಯು ಹೆಚ್ಚಾಗಿದ್ದು ರಣಬಿಸಿಲಿಗೆ ಕೊಳವೆಬಾವಿ ನೀರು ಇಲ್ಲದೆ ಬೆಳೆಯು ಇಲ್ಲದೆ ಹಾಗೂ ಅತಿವೃಷ್ಟಿ ಹೀಗೆ ಹತ್ತು ಹಲವು ಸಮಸ್ಯೆಗಳು ರೈತ ವರ್ಗದವರಿಗೆ ಕಾಡುತ್ತಿದೆ. ಆದರೂ ರೈತ ವರ್ಗದವರು ಧೃತಿಗೆಡಬಾರದು ಧಾರವಾಡ ಜಿಲ್ಲೆಯಾದ್ಯಂತ ರೈತರಿಗೋಸ್ಕರ ಬರಗಾಲದ ಪ್ಯಾಕೇಜ್ ಗಳ ವರದಿಯನ್ನು ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಲು ಮುಂದಾಗಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ಈ ಭಾರಿ ಉತ್ತಮ ಮಳೆ ಬರದೆ, ಬಿತ್ತಿದ್ದ ಅಲ್ಪಸ್ವಲ್ಪ ಬೆಳೆಯೂ ಬಾರದೇ ಬರಗಾಲ ಎದುರಿಸಿದ್ದ ರೈತ ಸಾಲದ ಶೂಲಕ್ಕೆ ಸಿಲುಕಿದ್ದಾನೆ. ಜಿಲ್ಲೆಯಾದ್ಯಂತ ಎಷ್ಟು ರೈತರು ಆತ್ಮಹತ್ಯೆಗೆ ಮುಂದಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈಗ ಬರುತ್ತಿರುವ ಮಳೆಯಿಂದ ತೋಟಗಾರಿಕೆ ಬೆಳೆಗೆ ಸಂಕಷ್ಟ ಎದುರಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.

ಕಾನೂನು ಜಾರಿಗೆ ಸರ್ಕಾರ ಮನಸ್ಸು ಮಾಡಲಿ

ರೈತರಿಗಾಗಿ ಸ್ವಾಮಿನಾಥನ್ ವರದಿ, ಎಂಎಸ್ ಪಿ ಗ್ಯಾರಂಟಿ ಕಾನೂನು ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಧರಿಸುತ್ತವಾ ಎಂದು ಕಾದು ನೋಡಬೇಕಾಗಿದೆ. ರೈತರ ಸಂಕಷ್ಟಕ್ಕೆ ವಿಶೇಷ ಒತ್ತು ನೀಡಬೇಕು ಕಲಘಟಗಿ ತಾಲೂಕು ಮಲೆನಾಡಿನ ಅಂಚಿನಲ್ಲಿ ಇದ್ದರೂ ರಣಬಿಸಲಿನ ಬರಗಾಲದ ತಾಪ ಒಂದು ಕಡೆಯಾದರೆ ಮತ್ತೊಂದೆಡೆ ರಬಸದ ಗಾಳಿ ಮಳೆಗೆ ಮಾವು, ಬಾಳೆ ಗಿಡಗಳಿಗೆ ಹಾನಿ ಯಾಗಿದೆ.

Karnataka Rain Mango and Banana Crop Loss Due to Heavy Rain in Kalghatgi in Dharwad

ಮಾವು, ಬಾಳೆ ಸೀಸನ್ ಆಗಿರುವ ಕಾರಣ ಈಗಷ್ಟೇ ಈ ಬೆಳೆಗಳಿಗೆ ಬೆಲೆ ಇದೆ. ಹೀಗೆ ಮಳೆ ಬಂದು ಅದು ಕೈಗೆ ಸಿಗದೇ ಹೋದರೆ ರೈತರು ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.

ತಾಲೂಕಿನ ಮಾವಿನ ತೋಟಗಳಲ್ಲಿ ಕಡಿಮೆ ಮಾವಿನ ಫಸಲು ಬಂದಿದ್ದು. ಬೆಳಗಿನ ಜಾವದ ಇಬ್ಬನಿಗೆ ಮಾವಿನ ಗಿಡದ ಹೂಗಳೆಲ್ಲ ಉದುರಿದವು ಮತ್ತೆ ನಿನ್ನೆ ಸುರಿದ ರಭಸದ ಗಾಳಿ ಮಳೆಗೆ ಮಾವಿನ ಗಿಡದಲ್ಲಿ ಇರುವಂತ ಮಾವುಗಳು ಗಾಳಿಯ ಹೊಡುತಕ್ಕೆ ಸಂಪೂರ್ಣ ನೆಲಕ್ಕೆ ಬಿದ್ದಿವೆ.

ಬೆಳವಣಿಗೆ ಹಂತದ ಬಾಳೆ ಬೆಳೆಗೆ ಹಾನಿ

ಜಿಲ್ಲೆಯ ಮಾವು ಬೆಳೆಗಾರರಾದ (ರೈತ) ಪರಶುರಾಮ ಎತ್ತಿನಗುಡ್ ಅವರು ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ಅಡಿಕೆ ಮತ್ತು ಬಾಳೆ ಗಿಡಗಳನ್ನು ಬೆಳೆದದ್ದು ಒಳ್ಳೆಯ ಬೆಳವಣಿಗೆ ಹಂತದಲ್ಲಿತ್ತು. ನಿನ್ನೆ ಸುರಿದ ಧಾರಾಕಾರ ಗಾಳಿ ಮಳೆಯಿಂದ ಬಾಳೆ ಬೆಳೆ ಸಂಪೂರ್ಣ ಹಾಳಾಗಿದೆ.

ಈ ಬಾಳೆಯನ್ನೇ ನೆಚ್ಚಿಕುಂತಿದ್ದ ರೈತರಿಗೆ ಸಂಕಷ್ಟಕ್ಕೆ ಸಿಲುಕಿ ದಿಕ್ಕು ತೋಚದಂತಾಗಿದೆ. ಪರಿಹಾರ ಒದಗಿಸಲು ತಾಲೂಕಿನ ಅಧಿಕಾರಿ ವರ್ಗ ಮುಂದಾಗ ಬೇಕಾಗಿದೆ ಎಂದುಅವರು ಆಗ್ರಹಿಸಿದರು.

ಗಿಡ ಮರ ಬೆಳೆಸಲು ಕರೆ

ಈ ಭಾಗದಲ್ಲಿ ಬರಗಾಲದ ಬೇಸಿಗೆ ಹೆಚ್ಚಾಗಿತ್ತು. ಬೆಳೆಯಿಲ್ಲದೆ ರೈತರಿಗೆ ಜಾನುವಾರುಗಳಿಗೆ ವನ್ಯ ಜೀವಿಗಳಿಗೆ ನೀರಿನ ಬಿಸಿತಟ್ಟಿದೆ. ಆದರೆ ರಬಸದ ಗಾಳಿ ಮಳೆಯಿಂದ ತಾಲೂಕಿನ ಮಾವಿನ ತೋಟಗಳ ಮಾವುಗಳು ಗಾಳಿಯ ಹೊಡದಕ್ಕೆ ನೆಲಕ್ಕೆ ಉದಿರಿ ಬಿದ್ದಿರುವ ದೃಶ್ಯ ಹಾಗೂ ಬಾಳಿಯ ತೋಟಗಳು ಗಾಳಿಯ ರಭಸಕ್ಕೆ ಹಾನಿಯಾಗಿವೆ. ಬೆಳೆ ನೆಲಕಚ್ಚಿವೆ.

ಮತ್ತೊಂದೆಡೆ ಪ್ರತಿ ವರ್ಷ ಒಂದರಿಂದ ಎರಡು ಎಕ್ಕರೆ ಸರ್ಕಾರದ ರಸ್ತೆ ಉದ್ದಕ್ಕೂ ಮರಗಿಡಗಳು ಪರಿಸರ ನಾಶವಾಗುತ್ತಿದೆ. ಬರಗಾಲ ತಪ್ಪಿಸಲು ಪರಿಸರವನ್ನು ರಕ್ಷಿಸಲು ಹಿರಿಯರು ಯುವಕ ಯುವತಿಯರು ಶಾಲೆಯ ವಿದ್ಯಾರ್ಥಿಗಳ ಮಕ್ಕಳು ಮರ ಗಿಡಗಳನ್ನು ಬೆಳೆಸಲು ಮುಂದಾಗಬೇಕಾಗಿದೆ ಎಂದು ರೈತ ಮಹಿಳೆ ಮಾಲಾಶ್ರೀ ಶಿವಕುಮಾರ್ ಹಿರೇಮಠ್ ಕರೆ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+