ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರ ಬಳಿ ಬಾಗಿಲೇ ಇಲ್ಲ: ಪ್ರಹ್ಲಾದ್ ಜೋಶಿ ಲೇವಡಿ

|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್ 24: ದಕ್ಷಿಣಿ ಭಾರತದಲ್ಲಿ ಬಿಜೆಪಿ ಬಾಗಿಲು ಬಂದ್ ಮಾಡುವುದಾಗಿ ಹೇಳಿಕೆ ನೀಡಿರುವ ದೇವೇಗೌಡರ ವಿರುದ್ಧ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಬಾಗಿಲು ಮುಚ್ಚುವ ಮೊದಲು ಬಾಗಿಲಿನ ಕೀ ಯಾರ ಬಳಿ ಇದೆ, ಬಾಗಿಲು ಯಾರ ಹತ್ತಿರ ಇದೆ ಎಂಬುದನ್ನು ದೇವೇಗೌಡರು ತಿಳಿದುಕೊಳ್ಳಲಿ ಎಂದು ಅವರು ಲೇವಡಿ ಮಾಡಿದ್ದಾರೆ.

ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಹಿಂದಿದೆ ದೇವೇಗೌಡರ ತಂತ್ರ! ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಹಿಂದಿದೆ ದೇವೇಗೌಡರ ತಂತ್ರ!

ದೇವೇಗೌಡರು ಬಿಜೆಪಿಯ ಬಾಗಿಲು ಮುಚ್ಚುತ್ತಾರಂತೆ. ಆದರೆ ಅವರ ಬಳಿ ಬಾಗಿಲೇ ಇಲ್ಲ ಎಂದು ಹೇಳಿದರು.

Hubli Prahlad Joshi criticized Devegowda on BJP door close remark

ನಾವು ಅನಿವಾರ್ಯತೆಯಿಂದ ಒಟ್ಟಾಗಿ ಇದ್ದೇವೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‌ನವರಿಬ್ಬರೂ ಹೇಳುತ್ತಾರೆ. ಅಂದರೆ ಅವರು ಪ್ರೀತಿ ಪ್ರೇಮದಿಂದ ಒಟ್ಟಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ನಮ್ಮ ಭಯದಿಂದಲೇ ಒಟ್ಟಾಗಿದ್ದಾರೆ ಎನ್ನುವುದನ್ನು ತೋರಿಸುತ್ತದೆ.

'ಕುಮಾರಸ್ವಾಮಿ ಸಿಎಂ ಆಗಬೇಕೆಂಬ ಬಂಗಾರಪ್ಪ ಆಸೆ ಈಡೇರಿಸಿದ ಕಾಂಗ್ರೆಸ್''ಕುಮಾರಸ್ವಾಮಿ ಸಿಎಂ ಆಗಬೇಕೆಂಬ ಬಂಗಾರಪ್ಪ ಆಸೆ ಈಡೇರಿಸಿದ ಕಾಂಗ್ರೆಸ್'

ಇಬ್ಬರಲ್ಲಿಯೂ ಪರಸ್ಪರ ವಿಶ್ವಾಸವಿದೆ. ಬೇರೆ ಕಾರಣಗಳಿಂದ ಎರಡು ಪಕ್ಷಗಳು ಪ್ರತ್ಯೇಕವಾಗಿವೆ ಎಂದು ಹೇಳುವುದರಲ್ಲಿ ಅರ್ಥವಿದೆ. ಆದರೆ, ಅವರು ಹೇಳುವುದು ನಮಗೆ ಈಗ ಕಾಂಗ್ರೆಸ್ ಜತೆ ಕೈಜೋಡಿಸುವುದು ಅನಿವಾರ್ಯವಾಗಿದೆ ಎಂದು.

ಕಾಂಗ್ರೆಸ್‌ ಅನ್ನು ಕೇಳಿಯೇ ಅಭ್ಯರ್ಥಿ ಹಾಕಿದ್ದೇವೆ: ದೇವೇಗೌಡಕಾಂಗ್ರೆಸ್‌ ಅನ್ನು ಕೇಳಿಯೇ ಅಭ್ಯರ್ಥಿ ಹಾಕಿದ್ದೇವೆ: ದೇವೇಗೌಡ

ಕಾಂಗ್ರೆಸ್ ಪರಿಸ್ಥಿತಿ ದಿಕ್ಕಿಲ್ಲದೇ ದೇವರನ್ನು ತಬ್ಬಿಕೊಂಡ ಹಾಗಿದೆ. ಜೆಡಿಎಸ್‌ನವರು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸರ್ವನಾಶ ಮಾಡುತ್ತಾರೆ ಎಂದರು.

English summary
BJP MP Prahlad Joshi criticized JDS leader HD Deve Gowda for his remark of the door of BJP in South India will be closed soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X