Get Updates
Get notified of breaking news, exclusive insights, and must-see stories!

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಪಾಲಿಕೆ ಅನುಮತಿ: ಕಾಂಗ್ರೆಸ್‌ ಸದಸ್ಯರ ವಿರೋಧ

ಹುಬ್ಬಳ್ಳಿ, ಸೆಪ್ಟಂಬರ್‌ 01: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅನುಮತಿ ನೀಡಿದೆ. ಗಣೇಶೋತ್ಸವ ಆಚರಣೆಗೆ ಪಾಲಿಕೆ ಮೇಯರ್‌ ವೀಣಾ ಬರದ್ವಾಡ ಅನುಮತಿ ನೀಡಿದ್ದು, ವಿರೋಧ ಪಕ್ಷವಾದ ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರೆ, ಬಿಜೆಪಿ ಸದಸ್ಯರು ಬೆಂಬಲ ಸೂಚಿಸಿದ್ದಾರೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 'ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವ ಕುರಿತು' ವಿಷಯ ಮಂಡಿಸಲಾಯಿತು. ಪರ-ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಮೇಯರ್‌ ಗಣೇಶೋತ್ಸವಕ್ಕೆ ಅನುಮತಿ ನೀಡಿ, ಸಭೆ ಮುಕ್ತಾಯಗೊಳಿಸಿ ಹೊರನಡೆದರು.

Hubballi Dharwad Municipal Corporation Has Given Permission To Celebrate Ganeshotsav At Idgah Maidan

ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್‌ ಸದಸ್ಯರು ಸದನದ ಮುಂಭಾಗಕ್ಕೆ ತೆರಳಿ ಪ್ರತಿಭಟಿಸಿದರು. ಪ್ರತಿಪಕ್ಷದ ಮಾತು ಕೇಳದೆ, ಏಕಪಕ್ಷೀಯ ನಿರ್ಣಯ ಕೈಗೊಂಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 'ಸಭೆಯಲ್ಲಿ ವಿಷಯ ಚರ್ಚಿಸದೇ ಠರಾವು ಪಾಸು ಮಾಡಲಾಗಿದೆ' ಎಂದು ಆರೋಪಿಸಿದರು.

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಕುರಿತು ಸಾಮಾನ್ಯ ಸಭೆಯಲ್ಲಿ ವಿಷಯ ಮಂಡನೆಯಾಗಿದೆ. ಕೊನೆಯಲ್ಲಿ ಅನುಮತಿ ನೀಡಬೇಕೋ ಬೇಡವೋ ಎಂಬುದು ಮೇಯರ್‌ ವಿವೇಚನೆಗೆ ಬಿಟ್ಟ ವಿಚಾರ ಎನ್ನಲಾಗಿದೆ ಎಂಬ ಅಭಿಪ್ರಾಯ ಆಯುಕ್ತರಿಂದ ಕೇಳಿ ಬಂದಿತು‌.

ತ್ಯಾಜ್ಯ ವಿಲೇವಾರಿಯಲ್ಲಿ ನಿರ್ಲಕ್ಷ್ಯ ತೋರಿದರೆ ಅಮಾನತು

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಮಾನ್ಯ ಸಭೆಯಲ್ಲಿ 'ಘನತ್ಯಾಜ್ಯ ವಿಲೇವಾರಿ ವಿಭಾಗದ ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳು ತಮಗೆ ವಹಿಸಿದ್ದ ಕೆಲಸವನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ವಾರ್ಡ್‌ ಪರಿಶೀಲನೆ ವೇಳೆ ಸಮಸ್ಯೆ ಕಂಡು ಬಂದರೆ ಅಥವಾ ಸದಸ್ಯರಿಂದ ಆರೋಪ ಕೇಳಿಬಂದರೆ ಸಂಬಂಧಿಸಿದ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಿ ಅಮಾನತು ಮಾಡಲಾಗುವುದು' ಎಂದು ಆಯುಕ್ತ ಈಶ್ವರ ಉಳ್ಳಾಗಡ್ಡಿ ಎಚ್ಚರಿಕೆ ನೀಡಿದರು.

Hubballi Dharwad Municipal Corporation Has Given Permission To Celebrate Ganeshotsav At Idgah Maidan

ಮನೆ ಮನೆಯಿಂದ ಕಸ ಸಂಗ್ರಹಿಸುವಲ್ಲಿ ಕೆಲವು ವಾರ್ಡ್‌ಗಳಲ್ಲಿ ವ್ಯತ್ಯಾಸವಾಗುತ್ತಿದ್ದು ,ಅದನ್ನು ಸರಿಪಡಿಸಲು ಹೆಚ್ಚುವರಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಕಸ ಸಂಗ್ರಹದ ಕೆಲವು ಘಟಕದಲ್ಲಿರುವ ಯಂತ್ರಗಳು ಹಾಳಾಗಿದ್ದು ಅದನ್ನು ದುರಸ್ತಿ ಮಾಡಲಾಗುತ್ತಿದೆ. ಹಸಿರು ನ್ಯಾಯಾಧೀಕರಣದ ನಿಯಮಾವಳಿ ಪ್ರಕಾರ ತುರ್ತು ಸಂದರ್ಭದಲ್ಲಿ ಟೆಂಡರ್‌ ಕರೆದು ಯಂತ್ರಗಳನ್ನು ಖರೀದಿಸಲಾಗುತ್ತದೆ. ಇನ್ನುಮುಂದೆ ಮೇಯರ್‌ ಅಧ್ಯಕ್ಷತೆಯಲ್ಲಿ ಸದಸ್ಯರ ಗಮನಕ್ಕೆ ತಂದು ಕ್ರಿಯಾಯೋಜನೆ ಸಿದ್ಧಪಡಿಸಲಾಗುವುದು' ಎಂದರು.

ಪಾಲಿಕೆಯ ಹುಬ್ಬಳ್ಳಿ ಕಚೇರಿಯ ಕಟ್ಟಡದ ಸಭಾಭವನ ನವೀಕರಣ ವಿಷಯ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಸುವರ್ಣ ಕಲ್ಲಕುಂಟ್ಲ ಮಾತನಾಡಿ 'ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಪಾಲಿಕೆಯ ಸಭಾಭವನ ನವೀಕರಣಕ್ಕೆ ₹3 ಕೋಟಿ ಖರ್ಚು ಮಾಡಲಾಗಿದೆ. ಇದರ ಬದಲು ಹೊಸ ಕಟ್ಟಡ ನಿರ್ಮಿಸಬಹುದಿತ್ತು. ಇದಕ್ಕಾಗಿ ಸುಧೀರ ಸರಾಫ್‌ ಅವರು ಮೇಯರ್ ಆಗಿದ್ದ ವೇಳೆ ₹5 ಕೋಟಿ ಮೀಸಲಿಡಲಾಗಿದೆ. ಸಭಾಭವನದ ಕಟ್ಟಡ ಭದ್ರವಾಗಿಲ್ಲ ಎಂದು ಹೇಳಲಾಗಿತ್ತು. ಈಗ ಹೇಗೆ ಸಭೆ ನಡೆಸಲಾಗಿದೆ' ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ವಿಜಯಕುಮಾರ್‌ 'ಸಭಾಂಗಣ ಸ್ಥಿರವಾಗಿಲ್ಲ ಎಂದು ಈ ಹಿಂದೆ ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ತಜ್ಞರ ತಂಡವು 2021ರ ಸೆಪ್ಟೆಂಬರ್‌ 27ರಂದು ವರದಿ ನೀಡಿತ್ತು. ಅದರ ಅನ್ವಯ ₹ 49.50 ಲಕ್ಷ ವೆಚ್ಚದಲ್ಲಿ ಸಭಾಭವನ ನವೀಕರದಿಸಲಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ₹45 ಕೋಟಿ ವೆಚ್ಚದಲ್ಲಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ವಾರದಲ್ಲಿ ಟೆಂಡರ್‌ ಕರೆಯಲಾಗುವುದು' ಎಂದರು.

ಸದಸ್ಯ ಇಮ್ರಾನ್ ಎಲಿಗಾರ ಮಾತನಾಡಿ 'ಧಾರವಾಡದಲ್ಲೇ ಸಮಾನ್ಯ ಸಭೆ ನಡೆಸಬೇಕು ಎಂದು ಹಿಂದಿನ ಮೇಯರ್ ಅವರ ಒತ್ತಡಕ್ಕೆ ಮಣಿದು ಕಟ್ಟಡ ಭದ್ರವಾಗಿಲ್ಲ ಎಂದು ವರದಿ ಪಡೆಯಲಾಗಿದೆಯೇ ಎಂದು ಆರೋಪಿಸಿದರು. ಬಿಜೆಪಿಯ ವೀರಣ್ಣ ಸವಡಿ ತಿಪ್ಪಣ್ಣ ಮಜ್ಜಗಿಮಾ ಅವರು 'ಈ ಬಗ್ಗೆ ಆರೋಪಿಸುವುದು ಸರಿಯಲ್ಲ. ಕಟ್ಟಡ ಪರಿಶೀಲನೆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಇರಲಿಲ್ಲವೇ?' ಎಂದು ಪ್ರಶ್ನಿಸಿದರು.

ಆದಾಯ ಹೆಚ್ಚಳಕ್ಕೆ ಟಾಸ್ಕ್‌ ಫೋರ್ಸ್

'ಪಾಲಿಕೆಗೆ ವಿವಿಧ ಮೂಲಗಳಿಂದ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬರುತ್ತಿಲ್ಲ. ಸಮರ್ಪಕವಾಗಿ ತೆರಿಗೆ ಸಂಗ್ರಹವಾಗುತ್ತಿಲ್ಲ. ಈಗ ಬಗ್ಗೆ ಟಾಸ್ಕ್‌ಫೋರ್ಸ್‌ ಸಮಿತಿ ರಚಿಸಿ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು. ವೀರಣ್ಣ ಸವಡಿ ಮಾತನಾಡಿ 'ಪಾಲಿಕೆ ಬಜೆಟ್‌ ಗಾತ್ರ ₹1100 ಕೋಟಿ. ಪಾಲಿಕೆ ವ್ಯಾಪ್ತಿಯಲ್ಲಿ 2700 ಗುತ್ತಿಗೆ ಆಧಾರದಲ್ಲಿ ನೀಡುವ ಆಸ್ತಿಗಳಿದ್ದು ಅವುಗಳಿಂದ ಸಮರ್ಪಕವಾಗಿ ತೆರಿಗೆ ಸಂಗ್ರಹ ಆಗುತ್ತಿಲ್ಲ. ತೆರಿಗೆ ಸಂಗ್ರಹವಾದರೆ ಸರ್ಕಾರದಿಂದ ಅನುದಾನ ಪಡೆಯುವ ಅಗತ್ಯವಿಲ್ಲ' ಎಂದರು.

ಆಗ ಮೌನ ಈಗ ಯಾಕೆ ಜೋರು

ವಿಷಯ ಮಂಡನೆಯಾಗಿ ಚರ್ಚೆಯಾದ ಬಳಿಕ ಮೇಯರ್‌ ಠರಾವು ಪಾಸು ಮಾಡಿ ಗಂಟೆ ಬಾರಿಸಿಲ್ಲ ಎಂದು ವಿರೋಧ ಪಕ್ಷದ ನಾಯಕಿ ಸುವರ್ಣಾ ಕಲಕುಂಟ್ಲ 'ಪೂಜ್ಯ ಮಹಾಪೌರರು ಗಂಟೆ ಬಾರಿಸುತ್ತಿಲ್ಲ. ಗಂಟೆ ಬಾರಿಸಿ ಗಂಟೆ ಬಾರಿಸಿ' ಎಂದರು. ಕಾಂಗ್ರೆಸ್‌ನ ದೊರೆರಾಜ ಮಣಿಕುಂಟ್ಲಾ ಅವರ ಆವೇಷಭರಿತ ಮಾತುಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿಯ ತಿಪ್ಪಣ್ಣ ಮಜ್ಜಗಿ 'ನೀವು ವಿರೋಧ ಪಕ್ಷದ ನಾಯಕರಾಗಿದ್ದಾಗ ತೆಪ್ಪಗೆ ಇರುತ್ತಿದ್ದೀರಿ. ಈಗ ಯಾಕೆ ಇಷ್ಟೊಂದು ಕ್ರಿಯಾಶೀಲ' ಎಂದು ಮಾತಿನಲ್ಲಿ ತಿವಿದರು. 'ಆರೋಗ್ಯಕರ ಚರ್ಚೆಯಲ್ಲಿ ಭಾಗವಹಿಸದ ಕಾಂಗ್ರೆಸ್‌ ಸದಸ್ಯರು ಉದ್ದೇಶಪೂರ್ವಕವಾಗಿ ವಿರೋಧಿಸುತ್ತಾರೆ. ಇದು ಕಾಂಗ್ರೆಸ್‌ ಪರಂಪರೆ' ಎಂದು ಬಿಜೆಪಿಯ ವೀರಣ್ಣ ಸವಡಿ ಆರೋಪಿಸಿದರು.

'ವರ್ಷಕ್ಕೆ ಎರಡು ಬಾರಿ ಸಭಾಭವನವನ್ನು ಕೋಟಿ ಕೋಟಿ ವೆಚ್ಚದಲ್ಲಿ ನವೀಕರಿಸಲಾಗುತ್ತದೆ. ಆದರೆ ಮಾತನಾಡಲು ಇಲ್ಲಿ ಮೈಕ್‌ಗಳೇ ಸರಿ ಇಲ್ಲ' ಎಂದು ಸುವರ್ಣಾ ಕಲಕುಂಟ್ಲ ವ್ಯಂಗ್ಯವಾಡಿದರು. 2022ರ ಅಕ್ಟೋಬರ್‌ನಲ್ಲಿ ಹುಬ್ಬಳ್ಳಿಯ ಪಾಲಿಕೆ ಸಭಾಭವನದಲ್ಲಿ ಸಾಮಾನ್ಯಸಭೆ ನಡೆದಿತ್ತು. ಕಟ್ಟಡ ನವೀಕರಣ ಹಿನ್ನೆಲೆಯಲ್ಲಿ ನಂತರದ ಒಂದು ವರ್ಷ ಧಾರವಾಡದ ಪಾಲಿಕೆ ಸಭಾಭವನದಲ್ಲಿ ನಡೆದಿತ್ತು. ವರ್ಷದ ಬಳಿಕ ಹುಬ್ಬಳ್ಳಿಯ ನವೀಕೃತ ಸಭಾಭವನದಲ್ಲಿ ಸಾಮಾನ್ಯ ಸಭೆ ನಡೆಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+