ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ಅಣ್ಣಾ ಹಜಾರೆ ಬಹಿರಂಗ ಸಭೆ
ಹುಬ್ಬಳ್ಳಿ, ಡಿಸೆಂಬರ್ 29 : ಹುಬ್ಬಳ್ಳಿ ಗೆ ಜನವರಿ 4 ರಂದು ಅಣ್ಣಾ ಹಜಾರೆ ಆಗಮಿಸಲಿದ್ದಾರೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ .
ಹುಬ್ಬಳ್ಳಿಯಲ್ಲಿ ಖಾಸಗಿ ಹೋಟಲ್ ಒಂದರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಕೂಡಲ ಸಂಗಮ ಪಂಚಮಸಾಲಿ ಪೀಠಾಧ್ಯಕ್ಷರಾದ ಜಯಮೃತ್ಯುಂಜಯ ಸ್ವಾಮೀಜಿ ಜ.4 ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದ್ದು ಸಭೆಗೆ ಅಣ್ಣಾ ಹಚಾರೆ ಆಗಿಸಲಿದ್ದಾರೆ ಎಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಜನ ಲೋಕಪಾಲ, ರೈತರ ಸಮಸ್ಯೆ ಸೇರಿದಂತೆ ಹಾಗೂ ಚುನಾವಣಾ ನೀತಿ ಬದಲಾವಣೆ ಕುರಿತು ಈ ಬಹಿರಂಗೆ ಸಭೆಯಲ್ಲಿ ಚರ್ಚೆ ಮಾಡಲಾಗುವದು ಎಂದಿದ್ದಾರೆ. ಇನ್ನು ಇದೇ ವೇಳೆಯಲ್ಲಿ ಉತ್ತರ ಕರ್ಣಾಟಕದ ಜ್ವಲಂತ ಸಮಸ್ಯೆಯಾದ ಮಹದಾಯಿ ಮತ್ತು ಕಳಸಾ ಬಂಡೂರಿ ವಿಷಯದಬಗ್ಗೆ ಅವರ ಗಮನಕ್ಕೆ ತಂದು ಆ ಮೂಲಕ ಪ್ರಧಾನಿಗಳ ಗಮನ ಸೆಳೆಯೋದಾಗಿ ಹೇಳಿದ್ದಾರೆ .
ಇನ್ನು ಇದೆ ವೇಳೆಯಲ್ಲಿ ಮಾತನಾಡಿದ ಅವರು ದೇಸದ ಪ್ರಧಾನ ಮಂತ್ರಿಗಳೂ ಮಹದಾಯಿ ವಿಷಯದಲ್ಲಿ ಪ್ರವೇಶ ಮಾಡ ಬೇಕು , ಕೇವಲ ರಡು ರಾಜ್ಯದ ರಾಜಕಾಣಿಗಳ ಕಚ್ಚಾಟದಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ ಬದಲಾಗಿ ಅವರ ಮಧ್ಯ ಪ್ರವೇಶದಿಂದ ಮಾತ್ರ ಈ ಸಮಸ್ಯೆ ಬಗೆಹರಿಯಲು ಸಾದ್ಯ ಎಂದಿದ್ದಾರೆ .