ಹಾಸನ ಜಿಲ್ಲಾ ಅರೋಗ್ಯ ಅಧಿಕಾರಿಗೆ ಗದರಿದ ಸಚಿವ ಮಾಧುಸ್ವಾಮಿ
ಹಾಸನ, ಜನವರಿ 24: ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಆಸ್ಪತ್ರೆಯಲ್ಲಿ ಸರಿಯಾದ ಸ್ತ್ರೀರೋಗ ತಜ್ಞರು ಇಲ್ಲ ಎಂದು ಹಾಸನ ಡಿಎಚ್ಓ ವಿರುದ್ಧ ಸಚಿವ ಜೆ.ಮಾಧುಸ್ವಾಮಿ ಕಿಡಿಕಾರಿದರು.
ಇಂದು ಹಾಸನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ಅರಸೀಕೆರೆ ಶಾಸಕ ಶಿವಿಂಗೇಗೌಡ, ತಮ್ಮ ಕ್ಷೇತ್ರದ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞ, ಅನಸ್ತೇಷಿಯ ತಜ್ಞ ವೈದ್ಯರಿಲ್ಲ ಎಂಬುದರ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು.
ನನ್ನ ಆರೋಗ್ಯ ಚೆನ್ನಾಗಿದೆ, ನಿವೃತ್ತಿಯ ವಯಸ್ಸಾಗಿಲ್ಲ: ಕುಮಾರಸ್ವಾಮಿ
ಈ ವೇಳೆ ಕೋಪಗೊಂಡ ಸಚಿವ ಮಾಧುಸ್ವಾಮಿ, ನೀವು ಒಬ್ಬ ಡಿಎಚ್ಓ ಆಗಿ ಬಡವರ ಹೆಣ್ಣು ಸಾಯಲಿ ಅಂತಿದ್ದೀರಾ, ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಗರಂ ಆದರು. ಈ ಸಂಬಂಧ ನೀವು ಯಾರಿಗೆ ಪತ್ರ ಬರೆದಿದ್ದೀರಿ, ಅದನ್ನು ತೆಗೆದುಕೊಂಡು ಬಾ ಇಲ್ಲಿ. ನನಗೆ ಉತ್ತರ ಕೊಡಿ ಎಂದು ಗದರಿದರು.
ಹಾಸನದಲ್ಲಿ 2 ಸಾವಿರ ಸಾಲ ನೀಡದ್ದಕ್ಕೆ ಮಾಲೀಕನನ್ನೇ ಕೊಂದ ಚಾಲಕ
ಈ ವೇಳೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಒಂದು ಕಡೆ ಸರಿಯಾಗಿ ವೈದ್ಯರಿಲ್ಲ, ಮತ್ತೊಂದೆಡೆ ಇರುವ ವೈದ್ಯರು ಖಾಸಗಿ ಆಸ್ಪತ್ರೆಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ತಪ್ಪಿಸುವ ಕಾನೂನು ತರಬೇಕು ಎಂದು ಒತ್ತಾಯಿಸಿದರು.