ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ ಜಿಲ್ಲಾ ಅರೋಗ್ಯ ಅಧಿಕಾರಿಗೆ ಗದರಿದ ಸಚಿವ ಮಾಧುಸ್ವಾಮಿ

|
Google Oneindia Kannada News

ಹಾಸನ, ಜನವರಿ 24: ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಆಸ್ಪತ್ರೆಯಲ್ಲಿ ಸರಿಯಾದ ಸ್ತ್ರೀರೋಗ ತಜ್ಞರು ಇಲ್ಲ ಎಂದು ಹಾಸನ ಡಿಎಚ್ಓ ವಿರುದ್ಧ ಸಚಿವ ಜೆ.ಮಾಧುಸ್ವಾಮಿ ಕಿಡಿಕಾರಿದರು.

ಇಂದು ಹಾಸನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ಅರಸೀಕೆರೆ ಶಾಸಕ ಶಿವಿಂಗೇಗೌಡ, ತಮ್ಮ ಕ್ಷೇತ್ರದ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞ, ಅನಸ್ತೇಷಿಯ ತಜ್ಞ ವೈದ್ಯರಿಲ್ಲ ಎಂಬುದರ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು.

ನನ್ನ ಆರೋಗ್ಯ ಚೆನ್ನಾಗಿದೆ, ನಿವೃತ್ತಿಯ ವಯಸ್ಸಾಗಿಲ್ಲ: ಕುಮಾರಸ್ವಾಮಿನನ್ನ ಆರೋಗ್ಯ ಚೆನ್ನಾಗಿದೆ, ನಿವೃತ್ತಿಯ ವಯಸ್ಸಾಗಿಲ್ಲ: ಕುಮಾರಸ್ವಾಮಿ

ಈ ವೇಳೆ ಕೋಪಗೊಂಡ ಸಚಿವ ಮಾಧುಸ್ವಾಮಿ, ನೀವು ಒಬ್ಬ ಡಿಎಚ್ಓ ಆಗಿ ಬಡವರ ಹೆಣ್ಣು ಸಾಯಲಿ ಅಂತಿದ್ದೀರಾ, ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಗರಂ ಆದರು. ಈ ಸಂಬಂಧ ನೀವು ಯಾರಿಗೆ ಪತ್ರ ಬರೆದಿದ್ದೀರಿ, ಅದನ್ನು ತೆಗೆದುಕೊಂಡು ಬಾ ಇಲ್ಲಿ. ನನಗೆ ಉತ್ತರ ಕೊಡಿ ಎಂದು ಗದರಿದರು.

Minister Madhuswamy Blamed To Hassan District Health Officer

ಹಾಸನದಲ್ಲಿ 2 ಸಾವಿರ ಸಾಲ ನೀಡದ್ದಕ್ಕೆ ಮಾಲೀಕನನ್ನೇ ಕೊಂದ ಚಾಲಕ ಹಾಸನದಲ್ಲಿ 2 ಸಾವಿರ ಸಾಲ ನೀಡದ್ದಕ್ಕೆ ಮಾಲೀಕನನ್ನೇ ಕೊಂದ ಚಾಲಕ

ಈ ವೇಳೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಒಂದು ಕಡೆ ಸರಿಯಾಗಿ ವೈದ್ಯರಿಲ್ಲ, ಮತ್ತೊಂದೆಡೆ ಇರುವ ವೈದ್ಯರು ಖಾಸಗಿ ಆಸ್ಪತ್ರೆಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ತಪ್ಪಿಸುವ ಕಾನೂನು ತರಬೇಕು ಎಂದು ಒತ್ತಾಯಿಸಿದರು.

English summary
Minister J.Madhuswamy blamed On Hassans DHO that there were no proper gynecologists at Arasikere constituency hospital in Hassan district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X