ಅಚ್ಚರಿಯ ಮೇಲೊಂದು ಅಚ್ಚರಿ, ಹಾಸನ ಕೆರೆಯಲ್ಲಿ ಬೆಂಕಿ
ಕೆರೆಯ ಪಕ್ಕದಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. ಘಟಕವಿದೆ. ಇಲ್ಲಿ ಟ್ಯಾಂಕರ್ ಗಳಿಗೆ ತೈಲ ಲೋಡ್ ಮಾಡಲಾಗುತ್ತದೆ. ಇಲ್ಲಿ ಸೋರುವ ತೈಲ ಕೆರೆ ಸೇರಿಕೊಂಡು ಕೆರೆಯ ನೀರು ತೈಲ ಮಿಶ್ರವಾಗಿದೆ. ಹೀಗಾಗಿ ಬೆಂಕಿ ಹತ್ತಿಕೊಂಡಿದೆ.
ಹಾಸನ, ಮಾರ್ಚ್ 9: ನೊರೆ ಉಗುಳುವ ಬೆಳ್ಳಂದೂರು ಕೆರೆ, ಬೆಂಕಿಯುಗುಳುವ ಮೈಸೂರಿನ ಭೂಮಿಯ ನಂತರ ಇದೀಗ ಹಾಸನದ ಕೆರೆಯೊಂದು ಹೊತ್ತಿ ಉರಿಯುತ್ತಿದೆ.
ಹಾಸನದ ಹೊರ ವಲಯದ ದೊಡ್ಡ ಬಸವನಹಳ್ಳಿ ಕೆರೆಯಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿಯಾಯಿತು. ಇಲ್ಲಿನ ಕೆರೆಯಲ್ಲಿ ನೀರಿದೆ. ಹೀಗಿದ್ದೂ ಬೆಂಕಿ ಹತ್ತಿಕೊಂಡಿದ್ದು ಹಲವರನ್ನು ಅಚ್ಚರಿಗೆ ಕೆಡವಿದೆ.
#WATCH: Fire rages on a patch of a lake near Dodda Basavanahalli in Hassan, Karnataka. (May 8) pic.twitter.com/u9g45HlcJ9
— ANI (@ANI_news) May 9, 2017
ಕೆರೆಯ ಪಕ್ಕದಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. ಘಟಕವಿದೆ. ಇಲ್ಲಿ ಟ್ಯಾಂಕರ್ ಗಳಿಗೆ ತೈಲ ಲೋಡ್ ಮಾಡಲಾಗುತ್ತದೆ. ಇಲ್ಲಿ ಸೋರುವ ತೈಲ ಕೆರೆ ಸೇರಿಕೊಂಡು ಕೆರೆಯ ನೀರು ತೈಲ ಮಿಶ್ರವಾಗಿದೆ. ಹೀಗಾಗಿ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ.

ಭಾನುವಾರ ರಾತ್ರಿ ಹತ್ತಿಕೊಂಡ ಬೆಂಕಿ ಸೋಮವಾರ ಬೆಳಗ್ಗಿನವರೆಗೆ ಹೊತ್ತಿದ್ದು ನಂತರ ನಂದಿದೆ ಎಂದು ವರದಿಯಾಗಿದೆ.
ಹಲವು ಬಾರಿ ಬೆಂಕಿ
ಈ ಕೆರೆಯಲ್ಲಿ ಹಲವು ಬಾರಿ ಬೆಂಕಿ ಕಾಣಿಸಿಕೊಂಡಿದ್ದು ಈ ಹಿಂದೆಯೂ ವರದಿಯಾಗಿದೆ. ಹೀಗಾದೆಗೆಲ್ಲಾ ಇಲ್ಲಿನ ಹಿಂದೂಸ್ಥಾನ್ ಘಟಕದ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುತ್ತಿದ್ದರು. ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇವೆ ಎಂಬ ಭರವಸೆಯನ್ನೂ ನೀಡುತ್ತಿದ್ದರು. ಆದರೆ ಕೆರಯಲ್ಲಿ ಬೆಂಕಿಯುರಿಯುವ ಪ್ರಕರಣಗಳು ಮಾತ್ರ ಪುನರಾವರ್ತನೆ ಆಗುತ್ತಲೇ ಇವೆ.
ಇನ್ನು 'ಕೆರೆಗೆ ಬೆಂಕಿ ಹತ್ತಿರುವುದು ಇದು ಐದನೇ ಬಾರಿ. ಇದರಿಂದ ಸಮೀಪದಲ್ಲಿರುವ ನಮಗೆ ಆತಂಕವಾಗಿದೆ,' ಎಂದು ಸ್ಥಳೀಯರು ಹೇಳಿದ್ದಾರೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications