ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ಅತಿಥಿ ಶಿಕ್ಷಕನಿಂದ ಹಲ್ಲೆ, ವಿದ್ಯಾರ್ಥಿ ಸಾವು
ಗದಗ, ಡಿಸೆಂಬರ್, 19: ಅತಿಥಿ ಶಿಕ್ಷಕನೊಬ್ಬ 10 ವರ್ಷದ ವಿದ್ಯಾರ್ಥಿಯ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ.
ಹದ್ಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಎಂಬಾತ 10 ವರ್ಷದ ವಿದ್ಯಾರ್ಥಿ ಭರತ್ ಮೇಲೆ ಹಲ್ಲೆ ನಡೆಸಿದ್ದಾನೆ. ಶಿಕ್ಷಕನಿಂದ ಏಟು ತಿಂದ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಭರತ್ ಕೊನೆಯುಸಿರೆಳೆದಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
Breaking; ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಹೃದಯಾಘಾತದಿಂದ ನಿಧನ
ಅತಿಥಿ ಶಿಕ್ಷಕನಿಂದ ಹಲ್ಲೆ, ವಿದ್ಯಾರ್ಥಿ ಸಾವು
ಅಲ್ಲದೇ ಅತಿಥಿ ಶಿಕ್ಷಕ ಮುತ್ತಪ್ಪ ವಿದ್ಯಾರ್ಥಿ ಭರತ್ ಹಾಗೂ ಅತಿಥಿ ಸಹ ಶಿಕ್ಷಕಿ ಗೀತಾ ಬಾರಕೇರಿ ಮೇಲೂ ಹಲ್ಲೆ ನಡೆಸಿದ್ದಾನೆ. ಸಲಾಕೆಯಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಶಿಕ್ಷಕನ ಹುಚ್ಚಾಟಕ್ಕೆ ಇದೀಗ ವಿದ್ಯಾರ್ಥಿಯ ಜೀವವೇ ಹೋಗಿದೆ. ಇನ್ನು ಮಗ ಭರತ್ನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಶಿಕ್ಷಕನ ಹಲ್ಲೆಗೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಈ ಘಟನೆ ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ. ಅತಿಥಿ ಶಿಕ್ಷಕನ ಹುಚ್ಚಾಟ ಕಂಡು ಇನ್ನುಳಿದ ವಿದ್ಯಾರ್ಥಿಗಳು ಕೂಡ ಆತಂಕಕ್ಕೆ ಒಳಗಾಗಿದ್ದಾರೆ.
ಅತಿಥಿ
ಶಿಕ್ಷಕನಿಂದ
ಮಾರಣಾಂತಿಕ
ಹಲ್ಲೆ
ಸಹಶಿಕ್ಷಕರ
ಮೇಲೂ
ಅತಿಥಿ
ಶಿಕ್ಷಕ
ಮುತ್ತಪ್ಪ
ಮಾರಣಾಂತಿಕ
ಹಲ್ಲೆ
ನಡೆಸಿದ್ದು,
ಮುತ್ತಪ್ಪನ
ವಿರುದ್ಧ
ಗ್ರಾಮದಲ್ಲಿ
ಆಕ್ರೋಶಗಳು
ಭುಗಿಲೆದ್ದಿವೆ.
ಸಲಿಕೆಯಿಂದ ಕಂಡ ಕಂಡವರ ಮೇಲೆ ಹಲ್ಲೆ ಮಾಡಿದ ಅತಿಥಿ ಶಿಕ್ಷಕ ಮುತ್ತಪ್ಪನ ವಿರುದ್ಧ ಜನರು ಕೆಂಡಕಾರುತ್ತಿದ್ದಾರೆ. ಸಾಮಾನ್ಯವಾಗಿ ಶಿಕ್ಷಕರು ಅಂದಮೇಲೆ ಮಕ್ಕಳಿಗೆ ಶಿಕ್ಷಣವನ್ನು ಧಾರೆ ಎರೆಯಲು ಒಂದೆರಡು ಬಾರಿ ಕೋಲಿನಿಂದ ಒಡೆಯುವುದು, ಇಲ್ಲ ಬೇರೆ ರೀತಿಯಾಗಿ ಶಿಕ್ಷೆ ಕೊಡುವುದನ್ನು ನೋಡಿದ್ದೇವೆ. ಆದರೆ ಗದಗ ಜಿಲ್ಲೆಯ ಹದ್ಲಿ ಗ್ರಾಮದಲ್ಲಿ ಅತಿಥಿ ಶಿಕ್ಷಕ ಮುತ್ತಪ್ಪ ಎಂಬಾತ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ನೀಚ ಕೃತ್ಯವಾಗಿದೆ.
ಮುತ್ತಪ್ಪನಿಗೆ
ಗಲ್ಲು
ಶಿಕ್ಷೆ
ನೀಡಿ
ಎಂದು
ಒತ್ತಾಯ
ಹಲ್ಲೆ
ಮಾಡಿದ
ಅತಿಥಿ
ಶಿಕ್ಷಕ
ಮುತ್ತಪ್ಪನಿಗೆ
ಗಲ್ಲು
ಶಿಕ್ಷೆ
ನೀಡಿ,
ಇಲ್ಲವಾದರೆ
ನಮಗೆ
ಕೊಡಿ
ಕೊಚ್ವಿ
ಹಾಕುತ್ತೇವೆ
ಅಂತಾ
ಗ್ರಾಮಸ್ಥರು
ಆಕ್ರೋಶ
ವ್ಯಕ್ತಪಡಿಸಿದ್ದಾರೆ.
ಅತಿಥಿ
ಶಿಕ್ಷಕರಾದ
ಮುತ್ತಪ್ಪ
ಹಡಗಲಿ
ಹಾಗೂ
ಗೀತಾ
ಬಾರಕೇರ್
ಒಂದೇ
ಗ್ರಾಮದವರಾಗಿದ್ದಾರೆ.
ಗೀತಾಳ
ಮಗನನ್ನೇ
ಕೊಲೆ
ಮಾಡಿರುವುದು
ಇದೀಗ
ಸಾಕಷ್ಟು
ಅನುಮಾನಗಳಿಗೆ
ಕಾರಣವಾಗಿದೆ.
ಆದರೆ
ಕಿರಾತಕ
ಶಿಕ್ಷಕ
ವಿದ್ಯಾರ್ಥಿಯನ್ನು
ಕೊಲೆ
ಮಾಡಿದ್ದಕ್ಕೆ
ಇಡೀ
ಗ್ರಾಮಸ್ಥರು
ಆಕ್ರೋಶ
ವ್ಯಕ್ತಪಡಿಸಿದ್ದಾರೆ.