ಉತ್ತರ ಕರ್ನಾಟಕದ 6 ಬರಪೀಡಿತ ಜಿಲ್ಲೆಗಳಿಗೆ ಸಿಎಂ ಪ್ರವಾಸ
ಹುಬ್ಬಳ್ಳಿ, ಏಪ್ರಿಲ್ 22 : ಬಿಸಿಲಿನ ತಾಪಕ್ಕೆ ಬಸವಳಿದಿರುವ ಮತ್ತು ನೀರಿಲ್ಲದೆ ಭೀಕರ ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ಆರು ಜಿಲ್ಲೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏಪ್ರಿಲ್ 25, ಸೋಮವಾರದಿಂದ ಮೂರು ದಿನಗಳ ಕಾಲ ಭೇಟಿ ನೀಡಲಿದ್ದಾರೆ.
ಬರಪೀಡಿತ ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಹಾವೇರಿ, ಧಾರವಾಡ ಮತ್ತು ಗದಗ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸಿದ್ಧರಾಮಯ್ಯ ಏಪ್ರಿಲ್ 25ರಿಂದ ಆರಂಭವಾಗಲಿದೆ. ಧೂಳಿನ ಊರುಗಳೆಂದೇ ಖ್ಯಾತವಾಗಿರುವ ಈ ಊರುಗಳಿಗೆ ಸಿದ್ದರಾಮಯ್ಯ ಕಾಲಿಡುವ ಮುನ್ನ ಮತ್ತೆಷ್ಟು ಟ್ಯಾಂಕರುಗಳಿಂದ ರಸ್ತೆಗಳಿಗೆ ನೀರು ಹೊಡೆಸಲಿದ್ದಾರೋ?
ಕಲಬುರಗಿಯಲ್ಲಿ ಅತ್ಯಧಿಕ ತಾಪಮಾನ 43.4 ಡಿಗ್ರಿ ದಾಖಲಾಗಿದ್ದರೆ, ಮೇಲಿನ ಈ ಆರು ಜಿಲ್ಲೆಗಳಲ್ಲಿ ತಾಪಮಾನ ನಲವತ್ತರ ಗಡಿ ದಾಟಿದೆ. ಮಳೆಯ ಕಿಂಚಿತ್ ಸುಳಿವೂ ಇಲ್ಲದಿದ್ದರಿಂದ ಈ ಜಿಲ್ಲೆಗಳೆಲ್ಲ ಕಾದ ಕೆಂಡದಂತಾಗಿವೆ. ರೈತರಿಗೆ, ಹಸುಕರುಗಳಿಗೆ ನೀರು ಮೇವು, ಜನರಿಗೆ ಕುಡಿಯುವ ನೀರು ದೊರಕಿಸಿಕೊಡುತ್ತಾರಾ ಸಿದ್ದರಾಮಯ್ಯ? [ಕುಡಿಯಾಕ್ ತೊಟ್ ನೀರಿಲ್ಲ, ಮುಂದ್ ಕತಿ ಹೆಂಗ್ರೀಪಾ..!]
ಮುಖ್ಯಮಂತ್ರಿಗಳ ಪ್ರವಾಸದ ವಿವರ ಈ ರೀತಿ ಇದೆ
ಏ.25, ಸೋಮವಾರ
*
ಬೆಳಗ್ಗೆ
8.30ಕ್ಕೆ
ಬೆಂಗಳೂರು
ಎಚ್ಎಎಲ್
ವಿಮಾನ
ನಿಲ್ದಾಣದಿಂದ
ವಿಶೇಷ
ವಿಮಾನದ
ಮೂಲಕ
ಬೆಳಗಾವಿಗೆ
ತೆರಳುವರು.
*
10
ಗಂಟೆಯಿಂದ
11ರವರೆಗೆ
ಬೆಳಗಾವಿ
ಜಿಲ್ಲಾ
ಪರಿಶೀಲನಾ
ಸಭೆ,
ಮಧ್ಯಾಹ್ನ
2-30ರಿಂದ
ಸಂಜೆ
6-30ರವರೆಗೆ
ಬೆಳಗಾವಿ
ಜಿಲ್ಲೆಯ
ಬರಪೀಡಿತ
ಪ್ರದೇಶಗಳಿಗೆ
ಭೇಟಿ.
[ಕತ್ತಲಲ್ಲಿ
ಕೆಆರ್
ಎಸ್
ವೀಕ್ಷಿಸಿದ
ಬರ
ಅಧ್ಯಯನ
ತಂಡ!]
ರಾತ್ರಿ ಧಾರವಾಡದಲ್ಲಿ ವಾಸ್ತವ್ಯ.
ಏ.26, ಮಂಗಳವಾರ
*
ಬೆಳಗ್ಗೆ
9-30ರಿಂದ
11
ಗಂಟೆಯವರೆಗೆ
ಧಾರವಾಡ
ಜಿಲ್ಲಾ
ಪರಿಶೀಲನಾ
ಸಭೆ,
11ರಿಂದ
ಧಾರವಾಡ
ಜಿಲ್ಲಾ
ಬರಪೀಡಿತ
ಪ್ರದೇಶಗಳಿಗೆ
ಭೇಟಿ.
*
ಮಧ್ಯಾಹ್ನ
1-30ರಿಂದ
ಹಾವೇರಿ
ಜಿಲ್ಲೆಗೆ
ಪ್ರಯಾಣ.
2.30ರಿಂದ
4ರವರೆಗೆ
ಹಾವೇರಿ
ಜಿಲ್ಲಾ
ಪರಿಶೀಲನಾ
ಸಭೆ.
*
ಸಂಜೆ
4ರಿಂದ
6-30ರವರೆಗೆ
ಹಾವೇರಿ
ಜಿಲ್ಲಾ
ಬರಪೀಡಿತ
ಪ್ರದೇಶಗಳಿಗೆ
ಭೇಟಿ.
ನಂತರ
ಹುಬ್ಬಳ್ಳಿಯ
ಪ್ರವಾಸಿ
ಮಂದಿರದಲ್ಲಿ
ವಾಸ್ತವ್ಯ.
[ನೀಲಕಂಠರಾಯನಗಡ್ಡಿ
ವಾಸಿಗಳಿಗೆ
ನೀರು
ಎಂದೂ
ಶಾಪ!]
ಏ.27 ರಂದು ಬುಧವಾರ
*
ಬೆಳಗ್ಗೆ
9.30ರಿಂದ
11ರವರೆಗೆ
ಗದಗ
ಜಿಲ್ಲಾ
ಪರಿಶೀಲನಾ
ಸಭೆ.
11ರಿಂದ
ಗದಗ
ಜಿಲ್ಲೆಯ
ಬರಪೀಡಿತ
ಪ್ರದೇಶಗಳಿಗೆ
ಭೇಟಿ.
*
ಮಧ್ಯಾಹ್ನ
1ಕ್ಕೆ
ಕೊಪ್ಪಳಕ್ಕೆ
ಆಗಮನ.
ಮಧ್ಯಾಹ್ನ
2-30ರಿಂದ
4
ಗಂಟೆಯವರೆಗೆ
ಕೊಪ್ಪಳ
ಜಿಲ್ಲಾ
ಪರಿಶೀಲನಾ
ಸಭೆ.
*
ಸಂಜೆ
4ರಿಂದ
ಕೊಪ್ಪಳ
ಜಿಲ್ಲಾ
ಬರಪೀಡಿತ
ಪ್ರದೇಶಗಳಿಗೆ
ಭೇಟಿ.
ಸಂಜೆ
6-30ಕ್ಕೆ
ತೋರಣಗಲ್ಲು
ಜಿಂದಾಲ್
ವಿಮಾನ
ನಿಲ್ದಾಣದಿಂದ
ಬೆಂಗಳೂರಿಗೆ
ಪ್ರಯಾಣ
ಬೆಳೆಸಲಿದ್ದಾರೆ.
[ಮಳೆಯಿಲ್ಲ,
ಬೆಳೆಯಿಲ್ಲ,
ಉತ್ತರದ
ಮಂದಿ
ಹೊಂಟರು
ಗುಳೆ]