ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಮ್ಮಪ್ಪನಿಂದಲೂ ಬಾಬರ್ ಮಸೀದಿ ಕಟ್ಟಲು ಸಾಧ್ಯವಿಲ್ಲ: ರಶೀದ್‌ಗೆ ಎಚ್ಚರಿಕೆ ಕೊಟ್ಟ ಮುತಾಲಿಕ್

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಧಾರವಾಡ, ಡಿಸೆಂಬರ್‌ 31: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರವನ್ನು ಕೆಡವಿ ಮುಂದೊಂದು ದಿನ ಮತ್ತೆ ಬಾಬರ್ ಮಸೀದಿ ಕಟ್ಟುತ್ತೇವೆ ಎಂದು ಹೇಳಿಕೆ ಕೊಟ್ಟಿರುವ ಇಮಾಮ್ ಅಸೋಸಿಯೇಶನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದ್ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು 50-100 ವರ್ಷ ಆದ ಮೇಲೆ ನಮ್ಮ ದೊರೆ ಬರುತ್ತಾನೆ. ಆಗ ರಾಮ ಮಂದಿರ ಕೆಡವಿ ಮತ್ತೆ ಬಾಬರ್ ಮಸೀದಿ ಕಟ್ಟುತ್ತೇವೆ ಎಂದು ರಶೀದ್ ಹೇಳಿಕೆ ನೀಡಿದ್ದಾನೆ. ಇನ್ನು 100 ವರ್ಷ, ಸಾವಿರ ವರ್ಷವಾದರೂ ರಾಮ ಮಂದಿರ ಕೆಡವಿ ಬಾಬರ್ ಮಸೀದಿ ಕಟ್ಟಲು ನಿಮ್ಮಪ್ಪನಿಂದಲೂ ಸಾಧ್ಯವಿಲ್ಲ ಎಂದು ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.

ಶ್ರೀರಾಮ-ಸೀತೆ ನೆಲೆಸಿದ್ದ ರಾಮದೇವರ ಬೆಟ್ಟದ ಅಭಿವೃದ್ಧಿಗೆ ಆಗ್ರಹಿಸಿ ಸಿಎಂಗೆ ಅಶ್ವಥ್ ನಾರಾಯಣ ಪತ್ರಶ್ರೀರಾಮ-ಸೀತೆ ನೆಲೆಸಿದ್ದ ರಾಮದೇವರ ಬೆಟ್ಟದ ಅಭಿವೃದ್ಧಿಗೆ ಆಗ್ರಹಿಸಿ ಸಿಎಂಗೆ ಅಶ್ವಥ್ ನಾರಾಯಣ ಪತ್ರ

ಸೊಕ್ಕಿನ ಮಾತನ್ನು ರಶೀದ್ ಹೇಳಿದ್ದಾನೆ. ಇಂತವರು ಈ ದೇಶದ ಅನ್ನ ತಿಂದವರು. ಈ ದೇಶದ ಮುಸ್ಲಿಂರಿಗೆ ಬಾಬರ್ ಯಾವುದೇ ಸಂಬಂಧ ಇಲ್ಲದಿದ್ದರೂ ಇಸ್ಲಾಂ ಪ್ರತಿಷ್ಠಾಪನೆಯ ಮೂಲ ಉದ್ದೇಶ ಹೊಂದಿದ್ದಾರೆ. ಇದು ಮೌಲಾನಾ ರಶೀದ್ ಬಾಯಿಂದ ಹೊರ ಬಂದಿದೆ ಎಂದಿದ್ದಾರೆ.

Pramod Muthalik Warns Imam Association President Maulana Sajid Rashid

ಮಾತು ಮುಂದುವರಿಸಿದ ಪ್ರಮೋದ್ ಮುತಾಲಿಕ್, ಈ ದೇಶದ ಹಿಂದೂಗಳು ಜಾಗೃತಗೊಂಡಿದ್ದಾರೆ. ರಶೀದ್‌ನಂತಹ ಮಾನಸಿಕತೆ ಇರುವ ಮುಸ್ಲಿಂರಿಗೆ ಎಚ್ಚರಿಕೆ ಕೊಡುವ ಉದ್ದೇಶದಿಂದಲೇ ನೂರು ವರ್ಷಗಳಿಂದ ಆರ್‌ಎಸ್‌ಎಸ್ ಕೆಲಸ ಮಾಡುತ್ತಿದೆ. ಬಜರಂಗದಳ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಶ್ರೀರಾಮ ಸೇನೆ ಕೆಲಸ ಮಾಡುತ್ತಿವೆ. ನಿಮ್ಮ ಸೊಕ್ಕು ಅಡಗಿಸಲು ನಾವು ಸಿದ್ಧರಿದ್ದೇವೆ. ಅಯೋಧ್ಯೆಯಲ್ಲಿ ರಾಮನ ಮೂರ್ತಿಯೇ ಇರುತ್ತದೆ ಹೊರತು, ಬಾಬರ್, ಔರಂಗಜೇಬನ ಮೂರ್ತಿಯಲ್ಲಿ. ಅಲ್ಲಿ ಯಾವುದೇ ಇಸ್ಲಾಂ ಧರ್ಮ ಗುರು ಇರಲು ಬಿಡುವುದಿಲ್ಲ ಎಂದಿದ್ದಾರೆ.

English summary
Pramod Muthalik Warns Imam Association President Maulana Sajid Rashid
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X