ಕಳಸಾ -ಬಂಡೂರಿ ಯೋಜನೆ : ನವಲಗುಂದ ಉದ್ವಿಗ್ನ
ಹುಬ್ಬಳ್ಳಿ, ಆಗಸ್ಟ್ 25 : ಕಳಸಾ-ಬಂಡೂರಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಬೇಕೆಂಬ ಬೇಡಿಕೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂಬ ಸುದ್ದಿ ತಿಳಿದ ಜನರು ರಸ್ತೆಗೆ ಇಳಿದು ಪ್ರತಿಭಟನೆ ಆರಂಭಿಸಿದ್ದಾರೆ. ಗದಗ, ನವಲಗುಂದ, ನರಗುಂದಲ್ಲಿ ರಾತ್ರಿಯಿಂದ ಪ್ರತಿಭಟನೆ ನಡೆಯುತ್ತಿದೆ.
ಸೋಮವಾರ
ರಾತ್ರಿ
ನವಲಗುಂದದಲ್ಲಿ
2
ಬಸ್ಸುಗಳಿಗೆ
ಬೆಂಕಿ
ಹಚ್ಚಿ,
10
ಬಸ್ಸುಗಳಿಗೆ
ಕಲ್ಲು
ತೂರಿ
ಜನರು
ತಮ್ಮ
ಆಕ್ರೋಶ
ವ್ಯಕ್ತಪಡಿಸಿದ್ದಾರೆ.
ನರಗುಂದದಲ್ಲಿ
ಬಂದ್
ಆಚರಣೆ
ಮಾಡಲಾಗಿದೆ.
ಪ್ರತಿಭಟನಾಕಾರರು
ರಾಷ್ಟ್ರೀಯ
ಹೆದ್ದಾರಿಯಲ್ಲಿ
ಟೈರ್ಗಳಿಗೆ
ಬೆಂಕಿ
ಹಚ್ಚಿದ್ದರಿಂದ
ಸಂಚಾರ
ಅಸ್ತವ್ಯಸ್ತವಾಗಿತ್ತು.
[ಮೋದಿ
ಭೇಟಿ
ಮಾಡಿದ
ಸರ್ವಪಕ್ಷ
ನಿಯೋಗ]
ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷ ನಿಯೋಗಕ್ಕೆ ಪ್ರಧಾನಿ ಮೋದಿ ಸಕಾರಾತ್ಮಕ ಸ್ಪಂದನೆ ನೀಡಿಲ್ಲ ಎಂಬ ಸುದ್ದಿ ತಿಳಿದ ನಂತರ ನವಲಗುಂದ ತಾಲೂಕಿನ ಯಮನೂರ ಗ್ರಾಮದ ರೈತರು ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಗಳನ್ನು ತಡೆದರು, 10ಕ್ಕೂ ಹೆಚ್ಚು ಬಸ್ಸುಗಳಿಗೆ ಕಲ್ಲು ತೂರಿದರು.[ಕೇಳುವವರೇ ಗತಿಯಿಲ್ಲದ ಕಳಸ ಭಂಡೂರಿ!]
ಗದಗ ಬಂದ್ಗೆ ಕರೆ : ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಇಂದು ವಿವಿಧ ಸಂಘಟನೆಗಳು ಗದಗ ಬಂದ್ಗೆ ಕರೆ ನೀಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಗದಗ, ನವಲಗುಂದ, ನರಗುಂದದಲ್ಲಿ ಬಸ್ ಸಂಚಾರ ವ್ಯತ್ಯಯವಾಗುವ ಸಾಧ್ಯತೆ ಇದೆ.
ಧಾರವಾಡದಲ್ಲಿ ಭಜನೆ ಮಾಡಿದ ರೈತರು : ಸೋಮವಾರ ರಾತ್ರಿ ಹೆಬ್ಬಳ್ಳಿ ಗ್ರಾಮದ ರೈತರು ಸುಮಾರು 6 ತಾಸು ಧಾರವಾಡ ಹಾಗೂ ನವಲಗುಂದ ಹೆದ್ದಾರಿ ರಸ್ತೆ ಬಂದ್ ಮಾಡಿ, ಭಜನೆ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಇಂದು ಧಾರವಾಡದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.
ಏನಿದು
ಯೋಜನೆ
:
ಹುಬ್ಬಳ್ಳಿ-ಧಾರವಾಡ,
ಗದಗ
ಮತ್ತು
ಬೆಳಗಾವಿ
ಜಿಲ್ಲೆಗಳಿಗೆ
ಕುಡಿಯುವ
ನೀರಿನ
ಅಭಾವ
ನೀಗಿಸಲು
ಕಳಸಾ-ಬಂಡೂರಿ
ನಾಲೆಗಳನ್ನು
ಮಲಪ್ರಭೆಗೆ
ಜೋಡಿಸುವ
ಯೋಜನೆ
ಇದಾಗಿದೆ.
ಗೋವಾ
ಸರ್ಕಾರ
ಯೋಜನೆಗೆ
ವಿರೋಧ
ವ್ಯಕ್ತಪಡಿಸಿದ್ದು,
ವಿವಾದ
ನ್ಯಾಯಾಧೀಕರಣದ
ಮುಂದಿದೆ.
ಯೋಜನೆ
ಜಾರಿಯಾಗಲೇಬೇಕು
ಎಂದು
ಒತ್ತಾಯಿಸಿ
ಸುಮಾರು
ಒಂದು
ತಿಂಗಳಿನಿಂದ
ನಿರಂತರವಾಗಿ
ಪ್ರತಿಭಟನೆ
ನಡೆಯುತ್ತಿದೆ.