ಹುಬ್ಬಳ್ಳಿಯಲ್ಲಿ ಮನಸೆಳೆದ ಶ್ರೀನಿವಾಸ ಕಲ್ಯಾಣೋತ್ಸವ
ಹುಬ್ಬಳ್ಳಿ,
ಮೇ.17:
ಸ್ಥಳೀಯ
ದೇಶಪಾಂಡೆ
ನಗರದ
ಜಿಮ್ಖಾನ್
ಮೈದಾನದಲ್ಲಿ
ಸೋಮವಾರ
ಶ್ರೀನಿವಾಸ
ಕಲ್ಯಾಣೋತ್ಸವ
ಸಂಭ್ರಮದಿಂದ
ನಡೆಸಲಾಯಿತು.
ಶ್ರೀವಾರಿ
ಫೌಂಡೇಶನ್
ಆಯೋಜಿಸಿದ್ದ
ಈ
ಕಾರ್ಯಕ್ರಮದಲ್ಲಿ
ಸಾಕಷ್ಟು
ಸಂಖ್ಯೆಯಲ್ಲಿ
ಭಕ್ತರು
ಪಾಲ್ಗೊಂಡು
ಶ್ರೀನಿವಾಸ
ಕಲ್ಯಾಣವನ್ನು
ಕಣ್ತುಂಬಿಕೊಂಡರು.
ತಿರುಮಲದಲ್ಲಿ ತಿಮ್ಮಪ್ಪನ ದೇವಸ್ಥಾನದಂತೆಯೇ ಪ್ರತಿರೂಪ ಮಾಡಲಾಗಿತ್ತು. ಅಲ್ಲಿಯೇ ವಿಶಿಷ್ಠ ಶೈಲಿಯ ಕಲ್ಯಾಣ ಮಂಟಪವನ್ನು ಕೂಡ ನಿರ್ಮಿಸಲಾಗಿತ್ತು. ಶ್ರೀನಿವಾಸ ಮತ್ತು ಪದ್ಮಾವತಿಯವರ ವಿವಾಹವನ್ನು ಪದ್ಧತಿಯಂತೆ ವೈಶಾಖ ಶುದ್ಧ ದಶಮಿಯಂದು ಆಯೋಜಿಸಲಾಗಿತ್ತು.[ಹುಬ್ಬಳ್ಳಿ : ಚರಂಡಿ ಸೇರುತ್ತಿರುವ ಕುಡಿಯುವ ನೀರು!]
ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ವೈವಾಹಿಕ ಆಚರಣೆಗಳಲ್ಲಿ ಪಾಲ್ಗೊಂಡರು. ಮೊದಲು ವಿಜಯನಗರದ ನಂಜನಗೂಡು ರಾಯರಮಠದಿಂದ ವೆಂಕಟೇಶ್ವರ ಮತ್ತು ಪದ್ಮಾವತಿಯವರ ಮೂರ್ತಿಯನ್ನು ವಧು-ವರರಂತೆ ಸಿಂಗರಿಸಿಕೊಂಡು ಮೆರವಣಿಗೆಯಲ್ಲಿ ವಾದ್ಯ ಮೇಳಗಳೊಂದಿಗೆ ಕಲ್ಯಾಣ ಮಂಟಪಕ್ಕೆ ಕರೆತರಲಾಯಿತು.
ನಂತರ ಸಂಸದ ಪ್ರಹ್ಲಾದ ಜೋಶಿಯವರು ವರನ ಕಡೆಯವರಾಗಿ ಮದುವೆಯ ಸಿದ್ಧತೆಯನ್ನು ನಡೆಸಿದ್ದರು. ವಧು ಪದ್ಮಾವತಿ ಬರುತ್ತಿದ್ದಂತೆ ಒಂದು ತಾಸಿಗೂ ಹೆಚ್ಚು ಕಾಲ ಅಲಂಕಾರ ಮಾಡಲಾಯಿತು. ವೈದಿಕ ಪರಂಪರೆಯಂತೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಜನಿವಾರ ಹಾಕಿ ಶ್ರೀನಿವಾಸನ ಕಲ್ಯಾಣೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.[ಹುಬ್ಬಳ್ಳಿ: ವಾಟರ್ ಸಪ್ಲೈ ಅಲರ್ಟ್ ಬಂದ್, ತಪ್ಪು ಯಾರದ್ದು?]
ಹೆಗಡೆ
ಸ್ವಾಗತ
:
ವಿವಾದಿತ
ಸ್ಥಳವಾಗಿರುವ
ಜಿಮ್ಖಾನ್
ಮೈದಾನವನ್ನು
ಶ್ರೀನಿವಾಸ
ಕಲ್ಯಾಣೋತ್ಸವ
ಮಾಡುವುದರೊಂದಿಗೆ
ಸಾರ್ವಜನಿಕರಿಗೆ
ಮುಕ್ತವಾಗಿಸಿದ್ದನ್ನು
ಗ್ರೌಂಡ್
ಬಚಾವೋ
ಸಮಿತಿ
ಅಧ್ಯಕ್ಷ,
ವಕೀಲ
ಸಿಬಿ
ಲಕ್ಷ್ಮೀನಾರಾಯಣ
ಹೆಗಡೆ
ಸ್ವಾಗತಿಸಿದ್ದಾರೆ.
ಇದೇ
ರೀತಿ
ಸಾರ್ವಜನಿಕರಿಗೆ
ಸದುಪಯೋಗವಾಗುವಂತಹ
ಮೈದಾನದಲ್ಲಿ
ಮಾಡುತ್ತಿದ್ದರೆ
ನಮ್ಮ
ಸಮಿತಿಯು
ಸ್ವಾಗತಿಸುತ್ತದೆ
ಎಂದು
ಹೆಗಡೆ
ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮನಸೆಳೆದ ಶ್ರೀನಿವಾಸ ಕಲ್ಯಾಣೋತ್ಸವ