ಧಾರವಾಡ : ಶಾಸಕರಿಂದ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ
ಧಾರವಾಡ, ಜುಲೈ 06 : ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಲು ಮತ್ತು ಪರಿಹಾರ ಒದಗಿಸಲು ಅನುಕೂಲ ಆಗುವಂತೆ ಶಾಸಕ ಅರವಿಂದ ಬೆಲ್ಲದ ಅವರು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದಾರೆ. 'ನಮ್ಮ ಬೆಲ್ಲದ' ಹೆಸರಿನ ಅಪ್ಲಿಕೇಷನ್ಗೆ ಭಾನುವಾರ ಚಾಲನೆ ಸಿಕ್ಕಿದೆ.
ಭಾನುವಾರ
ಕೇಂದ್ರ
ಸಚಿವ
ಅನಂತ
ಕುಮಾರ್,
ಬಿಜೆಪಿ
ರಾಜ್ಯಾಧ್ಯಕ್ಷ
ಪ್ರಹ್ಲಾದ್
ಜೋಶಿ,
ಪ್ರತಿಪಕ್ಷ
ನಾಯಕ
ಜಗದೀಶ್
ಶೆಟ್ಟರ್
ಮುಂತಾದವರು
ಹುಬ್ಬಳ್ಳಿ-ಧಾರವಾಡ
ಪಶ್ಚಿಮ
ಕ್ಷೇತ್ರದ
ಶಾಸಕ
ಅರವಿಂದ
ಬೆಲ್ಲದ
ಅವರ
ಮೊಬೈಲ್
ಅಪ್ಲಿಕೇಶನ್ಗೆ
ಚಾಲನೆ
ನೀಡಿದರು.
[ಡಿಜಿಟಲ್
ಇಂಡಿಯಾ
ಎಂದರೇನು?
ಉದ್ದೇಶಗಳೇನು?]
ಕ್ಷೇತ್ರದ ಜನರು ತಮ್ಮ ಸ್ಮಾರ್ಟ್ಪೋನ್ನಲ್ಲಿ ಈ ಅಪ್ಲಿಕೇಶನ್ಅನ್ನು ಡೌಲ್ಲೋಡ್ ಮಾಡಿಕೊಳ್ಳಬಹುದು. ಕ್ಷೇತ್ರದ ವ್ಯಾಪ್ತಿಯಲ್ಲಿನ ಸಮಸ್ಯೆ, ದೂರುಗಳನ್ನು ನೇರವಾಗಿ ಇದಕ್ಕೆ ಆಪ್ಲೋಡ್ ಮಾಡಬಹುದು. ಶಾಸಕರು ಅದನ್ನು ಖುದ್ದಾಗಿ ಗಮನಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ, ಪರಿಹರಿಸುವಂತೆ ಸೂಚನೆ ನೀಡಲಿದ್ದಾರೆ. [ಅರವಿಂದ್ ಬೆಲ್ಲದ ಫೇಸ್ ಬುಕ್ ಪುಟ]
ಅಪ್ಲಿಕೇಶನ್ಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಚಿವ ಅನಂತ ಕುಮಾರ್ 'ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾ ಯೋಜನೆಗೆ ಚಾಲನೆ ನೀಡಿದ್ದಾರೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ಜನಸಾಮಾನ್ಯರನ್ನು ಸುಲಭವಾಗಿ ತಲುಪುವುದು ಇದರ ಉದ್ದೇಶ. ಈಗ ಶಾಸಕರನ್ನು ಜನರು ಮೊಬೈಲ್ ಅಪ್ಲಿಕೇಶನ್ ಮೂಲಕ ತಲುಪಬಹುದಾಗಿದೆ' ಎಂದರು. [ಅರವಿಂದ ಬೆಲ್ಲದ ವೆಬ್ ಸೈಟ್]