ದಾವಣಗೆರೆಯಲ್ಲಿ ರೇಬಿಸ್ ಸೋಂಕಿತ ನಾಯಿಗಳು ಪತ್ತೆ ವದಂತಿ: ಇಲ್ಲಿದೆ ಸ್ಪಷ್ಟನೆ
ದಾವಣಗೆರೆ, ಆಗಸ್ಟ್ 05: ದಾವಣಗೆರೆ ನಗರದಲ್ಲಿ 20ಕ್ಕೂ ಹೆಚ್ಚು ರೇಬಿಸ್ ಸೋಂಕಿತ ನಾಯಿಗಳು ಪತ್ತೆ, ತುರ್ತು ಸಾರ್ವಜನಿಕ ಎಚ್ಚರಿಕೆ. ಈ ನ್ಯೂಸ್ ವ್ಯಾಟ್ಸಪ್, ಫೇಸ್ಬುಕ್ ಸೇರಿದಂತೆ ಎಲ್ಲೆಡೆ ಕಾಡ್ಗಿಚ್ಚಿನಂತೆ ಹಬ್ಬಿದೆ.
ಜನರಲ್ಲಿಯೂ ಆತಂಕಕ್ಕೆ ಕಾರಣವಾಗಿದೆ. ಮನೆಯಿಂದ ಹೊರ ಬರಲು ಹೆದರುವಂಥ ಸ್ಥಿತಿ ನಿರ್ಮಾಣವಾಗಿದೆ. ಫೇಸ್ಬುಕ್ ಗ್ರೂಪ್ ಗಳಲ್ಲಿಯೂ ಬಿಸಿ ಬಿಸಿ ದೋಸೆಯಂತೆ ಎಲ್ಲೆಡೆ ಶೇರ್ ಆಗುತ್ತಿದೆ. ನಾಯಿಗಳನ್ನು ನೋಡಿದಾಕ್ಷಣ ಜನರೂ ಭಯ ಬೀಳುವಂಥ ಸ್ಥಿತಿ ನಿರ್ಮಾಣವಾಗಿತ್ತು.

ಆದರೆ, ಸುದ್ದಿಕ್ಷಣ ಮೀಡಿಯಾಕ್ಕೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ್ ಅವರು ಕೊಟ್ಟ ಸ್ಪಷ್ಟನೆ ನೆಮ್ಮದಿ ಮೂಡಿಸಿದೆ. ಯಾರೂ ಹೆದರುವಂಥ ಸ್ಥಿತಿ. ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ವಾಟ್ಸಪ್ನಲ್ಲಿ ಬಂದ ತಪ್ಪು ಸಂದೇಶ ಏನು...?
ದಾವಣಗೆರೆ ನಗರದಲ್ಲಿ ಆಗಸ್ಟ್ ಒಂದರಂದು ಹರಿಬಿಟ್ಟಿರುವ ಸುಳ್ಳು ಸುದ್ದಿ. ದಾವಣಗೆರೆ ನಗರದಲ್ಲಿ 20 ಕ್ಕೂ ಹೆಚ್ಚು ನಾಯಿಗಳು ರೇಬಿಸ್ ಸೋಂಕಿಗೆ ಒಳಗಾಗಿದ್ದು, ಅಧಿಕಾರಿಗಳು ಗಂಭೀರ ಪರಿಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ಅಪಾಯಕಾರಿ ವೈರಸ್ ಗೆ ಒಡ್ಡಿಕೊಳ್ಳುವುದನ್ನು ತಡೆಯಲು ಬೀದಿ ಅಥವಾ ಅಪರಿಚಿತ ನಾಯಿಗಳನ್ನು ಎದುರಿಸುವಾಗ ತೀವ್ರ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ ಎಂಬ ಸುಳ್ಳು ಸುದ್ದಿಯೊಂದು ಎಲ್ಲೆಡೆ ವೈರಲ್ ಆಗುತ್ತಿದೆ.

ಗ್ರೂಪ್ಗಳಲ್ಲಿಯೂ ಚರ್ಚೆ
ಇನ್ನು ವಾಟ್ಸಪ್ ಗ್ರೂಪ್ಗಳಲ್ಲಿಯೂ ಇದೇ ಚರ್ಚೆ. ಯಾವ ವಾರ್ಡ್, ಯಾವ ಏರಿಯಾ, ಎಲ್ಲಿ ರೇಬಿಸ್ ಸೋಂಕಿಗೆ ಒಳಗಾದ ನಾಯಿಗಳಿವೆ ಎಂಬ ಬಗ್ಗೆಯೇ ಚರ್ಚೆ ನಡೆಸಲಾಗುತ್ತಿದೆ. ಆದರೆ ಇಂಥ ಸುಳ್ಳು ಸುದ್ದಿ ಹರಿಬಿಟ್ಟವರು ಯಾರು ಎಂಬುದು ಮಾತ್ರ ಗೊತ್ತಾಗುತ್ತಿಲ್ಲ. ನಾಯಿಗಳ ಉಪಟಳ ನಿನ್ನೆ, ಮೊನ್ನೆಯ ಸಮಸ್ಯೆ ಅಲ್ಲ. ಇದು ತುಂಬಾ ದಿನಗಳಿಂದ ಇದೆ. ಈ ಬಗ್ಗೆ ಮಹಾನಗರ ಪಾಲಿಕೆ ಸೇರಿದಂತೆ ಸಂಬಂಧಪಟ್ಟ ಇಲಾಖೆಯವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಮಾತ್ರ ಶೂನ್ಯ. ಪ್ರಾಣಿ ದಯಾ ಸಂಘದವರು ಕೋರ್ಟ್ಗೆ ಹೋಗಿದ್ದಾರೆ. ಇನ್ನೂ ಕೇಸ್ಗಳು ನಡೆಯುತ್ತಿವೆ. ಪಾಲಿಕೆ ವಿರುದ್ಧವೇ ದೂರು ದಾಖಲಿಸಿದ್ದಾರೆ ಎಂಬ ಸಿದ್ಧ ಉತ್ತರ ಮೊದಲಿನಿಂದಲೂ ಬರುತ್ತಲೇ ಇದೆ.
ಎಷ್ಟು ನಾಯಿಗಳು ಇವೆ..?
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 12,500 ಸಾವಿರಕ್ಕೂ ಹೆಚ್ಚು ನಾಯಿಗಳಿವೆ. ಈ ಪೈಕಿ 7,500 ನಾಯಿಗಳಿಗೆ ಪಾಲಿಕೆ ವತಿಯಿಂದ ಸಂತಾನಹರಣ ಶಸ್ತ್ರಚಿಕಿತ್ಸೆ ನೀಡಲಾಗಿದೆ. ಇನ್ನೂ 5 ಸಾವಿರಕ್ಕೂ ಹೆಚ್ಚು ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಆಗಬೇಕಿದೆ. ಪಾಲಿಕೆ ವತಿಯಿಂದ ಟೆಂಡರ್ ಕರೆಯಲಾಗಿದ್ದು, ಈ ಪ್ರಕ್ರಿಯೆ ಇನ್ನೂ ಆಗಬೇಕಿದೆ.
ಉಪನಿರ್ದೇಶಕರು ಹೇಳಿದ್ದೇನು..?
ರೇಬಿಸ್ ಸೋಂಕಿತ ನಾಯಿಗಳಿವೆ ಎಂಬ ವಿಚಾರ ಎಲ್ಲೆಡೆ ಹಬ್ಬಿದೆ. ಆದರೆ, ಮಹಾನಗರ ಪಾಲಿಕೆಯವರಾಗಲೀ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ್ ಅವರು ನಾವು ವಾಟ್ಸಪ್ ಗ್ರೂಪ್ಗಳಲ್ಲಿ ನೋಡಿದ್ದೇವೆ ಅಷ್ಟೇ. ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ, ದೂರುಗಳು ಬಂದಿಲ್ಲ. ಆದ್ರೆ, ಈ ಸುಳ್ಳು ಸುದ್ದಿ ಹೇಗೆ ಹರಡಿತು ಎಂಬುದು ಗೊತ್ತಾಗುತ್ತಿಲ್ಲ. ಶೇಕಡಾ 99 ರಷ್ಟು ಇಂಥ ಯಾವುದೇ ರೇಬಿಸ್ ಸೋಂಕಿತ ಶ್ವಾನಗಳು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾಯಿಗಳು ವ್ಯಾಘ್ರವಾಗುವುದು ಯಾಕೆ..?
ಮಳೆಗಾಲದ ವೇಳೆ ಶ್ವಾನಗಳು ಸೇರುತ್ತವೆ. ಈ ವೇಳೆ ಹೆರಿಗೆಯಾಗುವಾಗ ಹಾಗೂ ಸೇರುವ ವೇಳೆಯಲ್ಲಿ ಯಾರಾದರೂ ತೊದರೆ ಕೊಟ್ಟರೆ ಶ್ವಾನಗಳು ವ್ಯಾಘ್ರಗಳಾಗಿಬಿಡುತ್ತವೆ. ಮರಿಗಳನ್ನು ಸಂರಕ್ಷಿಸಿಕೊಳ್ಳಲು ಹೆಚ್ಚು ಮುತುವರ್ಜಿ ವಹಿಸುತ್ತವೆ. ಈ ವೇಳೆ ಮನುಷ್ಯ ವಾಸನೆ ಬಂದರೆ ಸಾಕು ಕುಪಿತಗೊಳ್ಳುತ್ತವೆ. ಅವುಗಳಿಗೆ ತೊಂದರೆ ಕೊಟ್ಟರೆ ಕೂಡಲೇ ದಾಳಿ ಮಾಡಿಬಿಡುವ ಸಾಧ್ಯತೆಯೇ ಹೆಚ್ಚು. ಈ ಕಾರಣಕ್ಕೆ ಯಾವುದೇ ಕಾರಣಕ್ಕೂ ಶ್ವಾನಗಳಿಗೆ ಉಪಟಳ ಕೊಡಲು ಹೋಗಬಾರದು.
ಪ್ರಾಣಿಗಳು ತನ್ನ ಮರಿಗಳ ಬಗ್ಗೆ ವಿಶೇಷ ಹಾಗೂ ನಿಗಾ ವಹಿಸುತ್ತವೆ. ಬುದ್ಧಿವಂತ ಪ್ರಾಣಿ ನಾಯಿಯು ಸಹ ತನ್ನ ಮರಿಗಳ ರಕ್ಷಣೆಗೋಸ್ಕರ ಕೆಲವೊಮ್ಮೆ ಈ ರೀತಿ ವರ್ತಿಸುತ್ತದೆ. ಮರಿಗಳಿಗೆ ಯಾರಾದರೂ ತೊಂದರೆ ಕೊಟ್ಟರೆ ಅಥವಾ ತೆಗೆದುಕೊಂಡು ಹೋಗುತ್ತಾರೆ ಎಂಬ ಕಾರಣಕ್ಕೆ ಈ ರೀತಿಯ ವರ್ತನೆ ಮಾಡುತ್ತವೆ. ನಾಯಿಗಳಿಗೆ ಕೆಲವರು ಕಲ್ಲು ಹೊಡೆಯುವುದು, ಕಲ್ಲು ಬಿಸಾಡುವುದು, ಅವುಗಳಿಗೆ ತೊಂದರೆ ನೀಡುವಂತ ರೀತಿ ಕಂಡು ಬಂದಾಕ್ಷಣ ನಾಯಿಗಳು ಅಟ್ಯಾಕ್ ಮಾಡಲು ಮುಂದಾಗುತ್ತವೆ.
ರೇಬಿಸ್ ಸೋಂಕಿತ ನಾಯಿಗಳಿಲ್ಲ
ರೇಬಿಸ್ ಸೋಂಕಿತ ನಾಯಿಗಳು ಕಂಡು ಬಂದಿಲ್ಲ. ಹಾಗೇನಾದರೂ ಕಂಡು ಬಂದರೆ ಮಹಾನಗರ ಪಾಲಿಕೆಯ ಸಂಬಂಧಪಟ್ಟವರು ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಗಮನಕ್ಕೆ ತನ್ನಿ. ಜನರಲ್ಲಿ ಆತಂಕ ಉಂಟು ಮಾಡುವಂಥ ಸುಳ್ಳು ಸುದ್ದಿಯನ್ನು ಯಾರೂ ಹರಡಬಾರದು. ಇದರಿಂದ ಪೋಷಕರು ಹಾಗೂ ಜನರು ಭಯಬೀಳುತ್ತಾರೆ.
ಪ್ರತಿಯೊಬ್ಬರಿಗೂ ಹೇಳಲು ಸಾಧ್ಯವಾಗದು. ಹಾಗಾಗಿ, ಜನರು ಮಾಹಿತಿ ಪಡೆಯಬೇಕು. ಸುಳ್ಳು ಸುದ್ದಿ ಹರಡುವುದರಿಂದ ನಾಯಿಗಳನ್ನು ಕಂಡರೆ ಹಾಗೂ ಬೊಗಳಿದರೆ ಹೊಡೆಯಬೇಕು ಎಂದೆನಿಸುವುದು ಸಹಜ. ಜನರು ನಾಯಿಗಳಿಗೆ ತೊಂದರೆ ಕೊಡಲು ಹೋಗಬಾರದು ಎಂದು ಉಪನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ್ ಮನವಿ ಮಾಡಿದ್ದಾರೆ.
ರೇಬಿಸ್ ಸೋಂಕಿತ ನಾಯಿಗಳು ಕಂಡು ಬಂದರೆ ಮಾಹಿತಿ ನೀಡಿ. ಪಾಲಿಕೆಯವರು ಅಂಥ ನಾಯಿಗಳನ್ನು ಹಿಡಿದು ತರುತ್ತಾರೆ. ಅವುಗಳ ಸ್ಯಾಂಪಲ್ ತೆಗೆದು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಅಲ್ಲಿಂದ ವರದಿ ಬಂದ ಬಳಿಕವಷ್ಟೇ ಸ್ಪಷ್ಟವಾಗಲಿದೆ. ಹದಿನಾಲ್ಕು ದಿನಗಳ ಅಂಥ ನಾಯಿಗಳನ್ನು ಕಣ್ಗಾವಲು ಇರಿಸಲಾಗುತ್ತದೆ. ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇಂಥ ಸುದ್ದಿ ಹರಡಿದೆ. ಯಾರೂ ಆತಂಕ, ಭಯಕ್ಕೆ ಒಳಗಾಗಬೇಕಿಲ್ಲ. ನಾಯಿಗಳು ವಿಚಿತ್ರ ರೀತಿ ವರ್ತಿಸುತ್ತಿದ್ದರೆ ಮಾಹಿತಿ ನೀಡಿ. ಅವುಗಳನ್ನು ಹಿಡಿದು ಚಿಕಿತ್ಸೆ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications