Get Updates
Get notified of breaking news, exclusive insights, and must-see stories!

ಕೊರೊನಾ ಬರದಂತೆ ಟಿಪ್ಸ್ ನೀಡಿದ ಬಾಬಾ ರಾಮ್ ದೇವ್

ದಾವಣಗೆರೆ, ಮಾರ್ಚ್ 6: ದೇಶದಾದ್ಯಂತ ಕೊರೊನಾ ಭೀತಿ ಆವರಿಸಿದೆ. ಆದರೆ ಗ್ರಾಮೀಣ ಭಾಗಕ್ಕೆ ಕೊರೊನಾ ಬರಲು ಸಾಧ್ಯವಿಲ್ಲ ಎಂದಿದ್ದಾರೆ ಯೋಗ ಗುರು ಬಾಬಾ ರಾಮ್ ದೇವ್.

Recommended Video

      Baba Ramdev gave tips to prevent corona virus | Baba Ramdev | Oneindia kannada

      ದಾವಣಗೆರೆ ಹೊನ್ನಾಳಿಯ ಹಿರೇಕಲ್ಮಠದಲ್ಲಿ ನಡೆದ ರಾಜ್ಯ ಮಟ್ಟದ ಕೃಷಿ ಮೇಳವನ್ನು ಉದ್ಘಾಟಿಸಿ ಕನ್ನಡದಲ್ಲೇ ಮಾತನಾಡಲು ಆರಂಭಿಸಿದರು. ಕರ್ನಾಟಕದ ಜನ ಬಹಳ ರಾಷ್ಟ್ರ ಭಕ್ತಿ ಹಾಗೂ ಆಧ್ಯಾತ್ಮದ ಬಗ್ಗೆ ಅಪಾರ ಗೌರವ ಹೊಂದಿದವರೆಂದು ಹೊಗಳಿದರು.

      ದೇಶಾದ್ಯಂತ ಕೊರೊನಾ ಭೀತಿ ಎದುರಾಗಿರುವ ಬಗ್ಗೆ ಮಾತನಾಡಿ, "ಗ್ರಾಮೀಣ ಭಾಗಕ್ಕೆ ಕೊರೊನಾ ಯಾವುದೇ ಕಾರಣಕ್ಕೂ ಬರಲು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಗಿಡಮೂಲಿಕೆಗಳನ್ನು ಹೆಚ್ಚು ಬಳಸುತ್ತಾರೆ. ಅಮೃತ ಬಳ್ಳಿ, ತುಳಸಿ, ಶುಂಠಿ, ಅರಿಶಿಣ, ಕಾಳು ಮೆಣಸು ಸೇವಿಸುವುದರಿಂದ ಕೊರೊನಾ ರೋಗ ಬರುವುದಿಲ್ಲ. ಅಲ್ಲದೆ ಕಪಾಲಬಾತಿ, ಅನುಲೋಮಾ, ವಿಲೋಮಾ, ಭ್ರವರಿ, ನವಲಿ ಕ್ರಿಯೆ ಹೀಗೆ ಯೋಗವನ್ನು ಪ್ರತಿನಿತ್ಯ ಮಾಡಿದರೆ ಕೊರೊನಾ ಬರುವುದಿಲ್ಲ ಎಂದು ತಿಳಿಸಿದರು.

      Baba Ram Dev Give Tips To CoronaVirus

      ನಾನು ರಾಜಕುಮಾರ್ ಅಭಿಮಾನಿ. ಅವರ ಯೋಗ ನೋಡಿ ನಾನು ಯೋಗ ಆರಂಭಿಸಿದೆ. ಈಗ ಅವರ ಮಗ ನನ್ನ ಜೊತೆ ಇರೋದು ಸಂತೋಷ ತಂದಿದೆ ಎಂದರು ವೇದಿಕೆ‌ ಮೇಲೆ ಬಾಬಾ ರಾಮ್ ದೇವ್ ಯೋಗ ಮಾಡಲು ಶುರು ಮಾಡಿದ್ದು, ಯೋಗ ಗುರುಗಳ ಜೊತೆ ಶಾಸಕ ರೇಣುಕಾಚಾರ್ಯ, ಸಂಸದ ಬಿ.ವೈ. ರಾಘವೇಂದ್ರ ಹಾಗೂ ನಟ ಶಿವರಾಜ್ ಕುಮಾರ್ ಯೋಗ ಮಾಡಿ‌ ಬಾಬಾ ರಾಮ್ ದೇವ್ ರವರಿಗೆ ಸಾಥ್ ನೀಡಿದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+