Get Updates
Get notified of breaking news, exclusive insights, and must-see stories!

ಹಿರಿಯೂರಿನ ಪರಮೇಶ್ವರಪ್ಪಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಹಿರಿಯೂರು, ಸೆಪ್ಟೆಂಬರ್, 04: ಶಾಲಾ ಶಿಕ್ಷಣ ಇಲಾಖೆಯಿಂದ 2024-25ನೇ ಸಾಲಿನ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನೀಡಲಾಗುವ ಉತ್ತಮ ಶಿಕ್ಷಕ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು, ಚಿತ್ರದುರ್ಗ ಜಿಲ್ಲೆಯಿಂದ ಹಿರಿಯೂರು ತಾಲ್ಲೂಕಿನ ಪರಮೇಶ್ವರಪ್ಪ ಎಂಬ ಶಿಕ್ಷಕರು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಾಲೂಕಿನ ಮ್ಯಾಕ್ಲೂರಹಳ್ಳಿ ಹೊಸಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಪರಮೇಶ್ವರಪ್ಪಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

State level best teacher award to Hiriyur Parameshwarappa

ಮೂಲತಃ ಹಿರಿಯೂರು ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಜನಿಸಿದ ಪರಮೇಶ್ವರಪ್ಪ ಅವರು ಪಿಯುಸಿ ಟಿಸಿಎಚ್ ಶಿಕ್ಷಣ ಮುಗಿಸಿ 1998ರಲ್ಲಿ ಶಿಕ್ಷಕ ವೃತ್ತಿಗೆ ಆಯ್ಕೆಯಾದರು. ಮೊದಲ ಬಾರಿಗೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಚಿನ್ನಹಳ್ಳಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದರು.

ನಂತರ ತಾಲೂಕಿಗೆ ವರ್ಗಾವಣೆಗೊಂಡು 2022ರಲ್ಲಿ ಸೂರಪ್ಪನಹಟ್ಟಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಜಡೆಗೊಂಡನಹಳ್ಳಿ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾದರು‌. ಈ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಅರಣ್ಯ ಇಲಾಖೆಯಿಂದ ಪರಿಸರ ಮಿತ್ರ ಎಂಬ ಪ್ರಶಸ್ತಿ ಪಡೆದುಕೊಂಡರು. ಇದೀಗ ಮ್ಯಾಕ್ಲೂರಹಳ್ಳಿಯ ಹೊಸಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಿವೃತ್ತಿಯಾಗಲು ಕೆಲವು ತಿಂಗಳು ಬಾಕಿ ಇದ್ದು, ಮುಂದಿನ ಜೂನ್ ತಿಂಗಳಲ್ಲಿ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.

ಜಿಲ್ಲಾ ಮಟ್ಟದ ಪ್ರಶಸ್ತಿಗೆ ತಾಲೂಕಿನ ಕಾಟನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀನಿವಾಸ್ ಹಾಗೂ ಕಾಟನಾಯಕನಹಳ್ಳಿ ಗೊಲ್ಲರಹಟ್ಟಿ ಶಾಲೆಯ ಸುನೀಲ್ ಕುಮಾರ್ ಆಯ್ಕೆ ಆಗಿದ್ದಾರೆ.

ತಾಲೂಕು ಮಟ್ಟದ ಪ್ರಶಸ್ತಿಗೆ ಆಯ್ಕೆ: 2024- 25ನೇ ಸಾಲಿನ ಶಿಕ್ಷಕರ ದಿನಾಚರಣೆ ಪ್ರಯುಕ್ತ ನೀಡಲಾಗುವ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲ್ಲೂಕಿನಿಂದ 17 ಶಿಕ್ಷಕರು ಆಯ್ಕೆಯಾಗಿದ್ದಾರೆ. ಮಾಳಗೊಂಡನಹಳ್ಳಿಯ ಸಹಿಪ್ರಾ ಶಾಲೆಯ ಸಿ.ಜಯಮ್ಮ, ಯಲ್ಲದಕೆರೆ ಶಾಲೆಯ ಜಯಮಾಲಾ, ಸೂರಪ್ಪನಹಟ್ಟಿ ಶಾಲೆಯ ವೇಣುಗೋಪಾಲಚಾರಿ, ಶಿವಪುರದ ಶಾಲೆಯ ಪಿ.ಎಸ್.ಶಿವಕುಮಾರಿ, ಭೂತಯ್ಯನಹಟ್ಟಿ ಶಾಲೆಯ ಶೇಕ್ ಬಷೀರ್ ಅಹಮದ್, ಗುಯಿಲಾಳು ಶಾಲೆಯ ಹೆಚ್.ಎನ್.ಸುಜಾತಾ, ಹರಿಯಬ್ಬೆ ಪಾಳ್ಯ ಶಾಲೆಯ ವಿ.ನಾಗರತ್ನಮ್ಮ, ಬಿದರಕೆರೆ ಶಾಲೆಯ ಸಿ. ಪವಿತ್ರ ಆಯ್ಕೆಯಾಗಿದ್ದಾರೆ.

ಧರ್ಮಪುರ ಶಾಲೆಯ ಬಿ.ರತ್ನಮ್ಮ, ಮಲ್ಲೇಣು ಶಾಲೆಯ ಸಿ.ಕರಿಯಪ್ಪ, ಕೆಆರ್.ಪುರ ಶಾಲೆಯ ಹೆಚ್.ಕೃಷ್ಣಮೂರ್ತಿ, ನಗರದ ಬಸ್ ನಿಲ್ದಾಣ ಶಾಲೆಯ ಅನುಸೂಯಮ್ಮ ಅವರು ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಣ ವಿಭಾಗದಲ್ಲಿ ಪಾಲವ್ವನಹಳ್ಳಿಯ ಶಾಲೆಯ ಕಮಲಮ್ಮ, ಅಜಾದ್ ನಗರದ ಉರ್ದು ಸಹ ಶಿಕ್ಷಕಿ ಶಾಹೀದಾ ಬಾನು, ಪಾಲವ್ವನಹಳ್ಳಿ ಶಾಲೆಯ ಉರ್ದು ಸಹ ಶಿಕ್ಷಕಿ ನರ್ಗಿಸ್ ಬಾನು ಹಾಗೂ ನೆಹರೂ ಮೈದಾನದ ಶಾಲೆಯ ಕನ್ನಡ ಶಿಕ್ಷಕಿ ಚಂದ್ರಕಲಾ ಅವರಿಗೆ ಉತ್ತಮ ಶಿಕ್ಷಕರ ಪ್ರಶಸ್ತಿ ಲಭಿಸಿವೆ.

ಈ ಕುರಿತು ಮಾತನಾಡಿರುವ ಶಿಕ್ಷಕ ಪರಮೇಶ್ವರಪ್ಪ ಅವರು, ನಾನು ಯಾವ ಪ್ರಶಸ್ತಿಯನ್ನು ನಿರೀಕ್ಷೆ ಮಾಡಿರಲಿಲ್ಲ. ಮುಂದಿನ ವರ್ಷ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದೇನೆ. ನನ್ನ ಶಿಕ್ಷಣ ವೃತ್ತಿಯ ಸೇವೆಯನ್ನು ಗುರುತಿಸಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡುತ್ತಿರುವುದು ಸಂತೋಷ ನೀಡಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+