ಚಿತ್ರದುರ್ಗ: ಪುಂಡ ಯುವಕರ ಕಿರುಕುಳಕ್ಕೆ ಬೇಸತ್ತು ಜೀವತೆತ್ತ ಕಾಲೇಜು ವಿದ್ಯಾರ್ಥಿನಿ
ಚಿತ್ರದುರ್ಗ, ಡಿಸೆಂಬರ್ 21: ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಕಾಲೇಜಿಗೆ ಹೋಗುವಾಗ ಮತ್ತು ಬರುವಾಗ ಪುಂಡರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಶೀರನಕಟ್ಟೆಯ ಕೋಡಿಹಳ್ಳಿಹಟ್ಟಿ ಗ್ರಾಮದ ಪ್ರಥಮ ಪಿಯುಸಿ ಓದುತ್ತಿದ್ದ ರಾಧಿಕಾ (17) ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆ ಯುವತಿಯಾಗಿದ್ದಾಳೆ.
ಹೊಸದುರ್ಗ ತಾಲೂಕಿನ ಶೀರನಕಟ್ಟೆಯ ಮುದ್ದಪ್ಪ, ಸುದೀಪ, ಕೋಟಿದುರ್ಗಪ್ಪ, ತಿಪ್ಪೇಸ್ವಾಮಿ ವಿರುದ್ಧ ಕಿರುಕುಳದ ಆರೋಪ ಮಾಡಲಾಗಿದೆ. ರಾಧಿಕಾ ಕಾಲೇಜಿಗೆ ಹೋಗುವಾಗ, ಬರುವಾಗ ಜಡೆ ಹಿಡಿದು ಎಳೆದು, ಅಶ್ಲೀಲವಾಗಿ ಮಾತನಾಡಿ ಆರೋಪಿಗಳು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ತನ್ನ ಪೋಷಕರ ಬಳಿಯೂ ರಾಧಿಕಾ ಹೇಳಿಕೊಂಡಿದ್ದಾಳೆ. ಈ ಬಗ್ಗೆ ಆರೋಪಿಗಳ ವಿರುದ್ಧ ಮೃತ ವಿದ್ಯಾರ್ಥಿನಿ ರಾಧಿಕಾ ಪೋಷಕರು ಹೊಸದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪೋಷಕರು ಪ್ರತಿಭಟನೆ ನಡೆಸಿದರು.
ಮುಗಿಲು
ಮುಟ್ಟಿದ
ಆಕ್ರಂದನ
ಮಗಳ
ಸಾವಿನಿಂದ
ಕುಟುಂಬದ
ಪೋಷಕರಲ್ಲಿ
ಆಕ್ರಂದನ
ಮುಗಿಲು
ಮುಟ್ಟಿದೆ.
ತನ್ನ
ಮಗಳ
ಭವಿಷ್ಯಕ್ಕೆ
ತುಂಬಾ
ಕಷ್ಟ
ಪಡುತ್ತಿದ್ದೆ.
ಕೂಲಿನಾಲಿ
ಮಾಡಿ
ಮಗಳಿಗೆ
ಉನ್ನತ
ಶಿಕ್ಷಣ
ಕೊಡಿಸುವ
ಆಸೆ
ಇತ್ತು.
ನನ್ನ
ಮಕ್ಕಳನ್ನು
ತುಂಬಾ
ಭಯದಿಂದ
ಸಾಕಿದ್ದೆ.
ಪುಂಡರ
ಕಿರುಕುಳಕ್ಕೆ
ಮಗಳು
ಇಂತಹ
ನಿರ್ಧಾರ
ಕೈಗೊಂಡಿದ್ದಾಳೆ
ಎಂದು
ತಂದೆ
ದುಃಖಿಸಿದರು.
ಪ್ರತಿಭಟನೆ
ಮಗಳ
ಸಾವಿಗೆ
ಕಾರಣವಾದ
ಆರೋಪಿಗಳನ್ನು
ಬಂಧಿಸುವಂತೆ
ಮೃತಳ
ಸಂಬಂಧಿಕರು
ಆರೋಪಿಸಿ
ಪ್ರತಿಭಟನೆ
ನಡೆಸಿದರು.
ವಿಷಯ
ತಿಳಿದ
ತಕ್ಷಣ
ಸ್ಥಳಕ್ಕೆ
ಎಸ್ಪಿ
ಜಿ.
ರಾಧಿಕಾ
ಭೇಟಿ
ನೀಡಿ
ಪರಿಶೀಲನೆ
ನಡೆಸಿದರು.
ಆರೋಪಿಗಳ
ವಿರುದ್ಧ
ಶಿಸ್ತು
ಕ್ರಮ
ಕೈಗೊಳ್ಳಲಾಗುವುದು
ಎಂದು
ಭರವಸೆ
ನೀಡಿದ್ದಾರೆ
ಎನ್ನಲಾಗಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777
for
India
COOJ
Mental
Health
Foundation
(COOJ)-
0832-2252525,
ಪರಿವರ್ತನ್-
+91
7676
602
602,
Connecting
Trust-
+91
992
200
1122/+91-992
200
4305
or
Sahai-
080-25497777/
[email protected]