ವಿವಿ ಸಾಗರಕ್ಕೆ ಕೇಂದ್ರ ನೀರಾವರಿ ಅಧಿಕಾರಿಗಳ ಭೇಟಿ
ಚಿತ್ರದುರ್ಗ, ಜುಲೈ 11; ಮಧ್ಯ ಕರ್ನಾಟಕದ ಅತಿ ದೊಡ್ಡ ಜಲಾಶಯ ಹಾಗೂ ಬಯಲುಸೀಮೆಯ ಜನರಿಗೆ ನೀರು ಒದಗಿಸುವ ಪ್ರಮುಖ ಅಣೆಕಟ್ಟೆಯಾದ ಹಿರಿಯೂರು ಬಳಿ ಇರುವ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ರಾಷ್ಟ್ರೀಯ ಯೋಜನೆಯ ಜಲ ಆಯೋಗದ ತಂಡ ಭೇಟಿ ನೀಡಿತ್ತು.
ಈ ತಂಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವುದರಿಂದ ಅಣೆಕಟ್ಟು ವೀಕ್ಷಣೆ ಮಾಡಿತು. ಚಿತ್ರದುರ್ಗ ಜಿಲ್ಲೆಯ ಏಕೈಕ ಜಲಾಶವಾದ ವಿವಿ ಸಾಗರ ಅಣೆಕಟ್ಟು ಬರೋಬ್ಬರಿ 25 ವರ್ಷಗಳ ಬಳಿಕ ತುಂಬುವ ಆಸೆ ಚಿಗುರೊಡೆದಿದೆ.
ಹಚ್ಚಹಸಿರಿನ ಗುಡ್ಡಗಾಡಿನ ನಡುವೆ ನಳನಳಿಸುತ್ತಿರೋ ಮಧ್ಯ ಕರ್ನಾಟಕದ ನೀರಿನ ಸೆಲೆಯೇ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯ. ಕಳೆದ 25 ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗಿ ಬರಿದಾಗಿ ಡೆಡ್ ಸ್ಟೋರೆಜ್ ಹಂತಕ್ಕೆ ತಲುಪಿದಾಗ ತುಂಬುವ ಆಸೆ ಮೂಡಿಸಿದ್ದು ಭದ್ರಾ ಮೇಲ್ದಂಡೆ ಯೋಜನೆ ಎಂದರೆ ತಪ್ಪಾಗಲಾರದು.
ಕಳೆದ ವರ್ಷ ಸುಮಾರು 105 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿ ರೈತರಲ್ಲಿ ಹೊಸ ಭರವಸೆ ಮೂಡಿತ್ತು. ಆದರೆ 130 ಅಡಿ ನೀರು ಸಂಗ್ರಹಿಸಲು ವಿಫಲವಾಯಿತು. ಇದೀಗ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಮೂಲಕ ವೇದಾವತಿ ನದಿಯ ಮೂಲಕ ಜಲಾಶಯಕ್ಕೆ ನೀರು ಹರಿಸುತ್ತಿದೆ. ಇದು ಜಿಲ್ಲೆಯ ರೈತರಲ್ಲಿ ಸಂತಸ ಮೂಡಿಸಿದೆ.

ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ
ಇನ್ನು ಸರ್ಕಾರ ಅವಧಿಗೂ ಮೊದಲೇ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿಸುವುದಕ್ಕೆ ಪ್ರಮುಖ ಕಾರಣ ಕರ್ನಾಟಕದ ಏಕೈಕ ರಾಷ್ಟ್ರೀಯ ಯೋಜನೆ ಎಂಬ ಪುರಸ್ಕಾರ ಪಡೆಯಲು ಭದ್ರಾ ಮೇಲ್ದಂಡೆ ಯೋಜನೆ ಸನ್ನಿಹಿತವಾಗಿದೆ. ಇದೀಗ ಕೇಂದ್ರದ ನೀರಾವರಿ ಇಲಾಖೆ ಅಧಿಕಾರಿಗಳು ವಾಣಿವಿಲಾಸ ಜಲಾಶಯ ಸೇರಿದಂತೆ ವೇದಾವತಿ ನದಿ ಪಾತ್ರ, ಚಿಕ್ಕಮಗಳೂರಿನಿಂದ ಹಿಡಿದು ಚಿತ್ರದುರ್ಗ ಜಿಲ್ಲೆಯವರೆಗೂ ನಡೆದಿರುವ ಮೇಲ್ದಂಡೆ ಕಾಮಗಾರಿಯನ್ನು ವೀಕ್ಷಣೆ ಮಾಡಿದ್ದಾರೆ. ಅಧಿಕಾರಿಗಳಿಂದಲೂ ಸೂಕ್ತ ಸ್ಪಂದನೆ ವ್ಯಕ್ತವಾಗಿದೆ. ಕೇಂದ್ರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ.

ಆತ್ಮೀಯವಾಗಿ ಸ್ವಾಗತಿಸಿದ ರೈತರು
ಹಿರಿಯೂರಿನ ವಿವಿ ಸಾಗರ ಜಲಾಶಯಕ್ಕೆ ಭೇಟಿ ನೀಡಿದ ಕೇಂದ್ರ ಜಲ ಆಯೋಗದ ಆಯುಕ್ತರಾದ ಎ. ಎಸ್. ಗೋಯಲ್ ದಂಪತಿಯನ್ನು ಹಿರಿಯೂರು ರೈತರ ತಂಡ ಆತ್ಮೀಯವಾಗಿ ಸ್ವಾಗತಿಸಿದರು. ಕೇಂದ್ರ ತಂಡಕ್ಕೆ ವಿವಿ ಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರರ ಸಮಿತಿಯಿಂದ ಮನವಿ ಸಲ್ಲಿಸಿ, ಚಿತ್ರದುರ್ಗ, ತುಮಕೂರು ಸೇರಿದಂತೆ ಮಧ್ಯಕರ್ನಾಟಕದ ಬಯಲು ಸೀಮೆ ಭಾಗದಲ್ಲಿ ತೀವ್ರ ವಾದ ಬದಗಾಲವಿದ್ದು, ನೂರು ವರ್ಷಗಳಲ್ಲಿ 75 ವರ್ಷ ಬರಗಾಲ ಅನುಭವಿಸಿ, ಕುಡಿಯುವ ನೀರು ವಿಷಪೂರಿತವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಹೆಚ್ಚಿನ ನೀರು ಲಭಿಸಿದಲ್ಲಿ ಕುಡಿಯುವ ನೀರಿಗೆ ಸಹಕಾರಿಯಾಗಲಿದೆ ಎಂದು ತಿಳಿಸಲಾಯಿತು.

ರೈತರ ಬದುಕು ಹಸನಾಗಲಿದೆ
ನೀರು ಹರಿದರೆ ಕೇಂದ್ರ ಸರ್ಕಾರದ ಡಿಆರ್ಡಿಓ, ಐಎಎಸ್ಸಿ, ವಿಆರ್ಸಿ, ಇತರೆ ಸಂಸ್ಥೆಗಳಿಗೆ ಸೇರಿದ 8 ಸಾವಿರ ಎಕರೆ ವಿಸ್ತೀರ್ಣದ ಸಂಸ್ಥೆಗಳಿಗೆ ನೀರು ಸರಬರಾಜು ಸೇರಿದಂತೆ ಅಂತರ್ಜಾಲ ಮತ್ತಷ್ಟು ವಿಷಪೂರಿತ ಆಗುವುದನ್ನು ತಡೆಯಬಹುದು. ಈ ಯೋಜನೆಗೆ ರಾಷ್ಟ್ರೀಯ ಯೋಜನೆ ಎಂದು ಮಾನ್ಯತೆ ಪಡದರೆ ವೇಗ ಯೋಜನೆ ಕಾಮಗಾರಿ ಸಂಪೂರ್ಣಗೊಳಿಸಿ ಎಲ್ಲರಿಗೂ ನೀರು ದೊರಕಿಸಿದರೆ ಬದುಕು ಹಸನಾಗಿಸಬಹು ಎಂದು ಕೇಂದ್ರ ಸಮಿತಿಗೆ ಪತ್ರದ ಮೂಲಕ ಓದಿ ಹೇಳಲಾಯಿತು.
Recommended Video

ಜಲಾಶಯಕ್ಕೆ ನೀರು
ಒಂದು ಕಡೆ ಅವಧಿಗೂ ಮುನ್ನವೇ ಜಲಾಶಯಕ್ಕೆ ನೀರು ಹರಿದ ಸಂತೋಷ, ಮತ್ತೊಂದು ಕಡೆ ಕೇಂದ್ರದ ನೀರಾವರಿ ಇಲಾಖೆ ಅಧಿಕಾರಿಗಳು ರಾಷ್ಟ್ರೀಯ ಯೋಜನೆ ಘೋಷಣೆ ಮಾಡುವುದಕ್ಕೆ ಸೂಕ್ತವಾಗಿ ಸ್ಪಂದಿಸಿರುವುದು ಕೋಟೆ ನಾಡಿಗೆ ರೈತರಿಗೆ ಡಬಲ್ ಧಮಾಕ. ಎಲ್ಲವೂ ಅಂದುಕೊಂಡಂತೆ ಆದರೆ ನಮ್ಮ ಹೆಮ್ಮೆಯ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಪುರಸ್ಕಾರ ಪಡೆದ ನಾಡಿನ ಮೊಟ್ಟಮೊದಲ ಯೋಜನೆ ಎಂಬ ಖ್ಯಾತಿಗೆ ಕಾರಣ ಆಗಲಿದೆ.
-
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಮಾರ್ಚ್ 20ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಇನ್ಮುಂದೆ KPSC ಮೂಲಕ ಪ್ರತಿ ವರ್ಷ ಗ್ರೂಪ್ A, B ಅಧಿಕಾರಿಗಳ ನೇಮಕಾತಿ: ಕೃಷ್ಣ ಬೈರೇಗೌಡ ಸ್ಪಷ್ಟನೆ -
ಮಾರ್ಚ್ 19ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ











Click it and Unblock the Notifications