ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮೂರು ದಿನದ ಕಂದಮ್ಮ ಸಾವು-ಆರೋಪ
ಚಿತ್ರದುರ್ಗ, ಮಾರ್ಚ್, 08: ವೈದ್ಯರ ನಿರ್ಲಕ್ಷ್ಯದಿಂದ ಹುಟ್ಟಿ ಮೂರು ದಿನದ ಕಂದಮ್ಮ ಅಸುನಿಗಿದ ಘಟನೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹೀಗೆ ಆರೋಪ ಮಾಡಿ ಮಗುವಿನ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಸಾಮಾನ್ಯವಾಗಿ ಬಡವರೇ ಹೆಚ್ಚಾಗಿ ಉಚಿತ ಚಿಕಿತ್ಸೆ ಸಿಗುತ್ತದೆ ಎಂದು ಸರ್ಕಾರಿ ಆಸ್ಪತ್ರೆಗೆ ಕಡೆಗೆ ಮುಖ ಮಾಡುತ್ತಾರೆ. ಆದರೆ ಇಲ್ಲಿನ ವೈದ್ಯರು ಸೇರಿದಂತೆ ಸಿಬ್ಬಂದಿಯ ಲೆಕ್ಕಾಚಾರವೇ ಬೇರೆ ಆಗಿರುತ್ತದೆ. ಬೇಗ ಚಿಕಿತ್ಸೆ ಬೇಕೆಂದರೆ ಹೆಚ್ಚು ಹಣ ಪಡೆದು ಬಡರೋಗಿಗಳ ಜೇಬಿಗೆ ಕತ್ತರಿ ಹಾಕುವ ಕೆಲಸವನ್ನು ಮಾಡುತ್ತಾರೆ. ಅಷ್ಟೇ ಅಲ್ಲದೆ ಉಚಿತ ಚಿಕಿತ್ಸೆ, ಔಷಧಿ ಇದ್ದರೂ ಹೊರಗಡೆ ಔಷಧಿಗಳನ್ನು ಬರೆಯುತ್ತಾರೆ ಎನ್ನುವ ಆರೋಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿವೆ.

ಇದೀಗ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮೂರು ದಿನದ ಮಗು ಸಾವನ್ನಪ್ಪಿದ್ದು, ಇದಕ್ಕೆ ಕಾರಣ ವೈದ್ಯರ ನಿರ್ಲಕ್ಷ ಎಂದು ಮಗುವಿನ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
ಕಡ್ಲೇಗುದ್ದು ಗ್ರಾಮದ ನಾಗರಾಜ್ ಹಾಗೂ ಕವಿತಾ ಎಂಬುವರ 3 ದಿನದ ಮಗು ಸಾವನ್ನಪ್ಪಿದೆ. ಚೊಚ್ಚಲ ಹೆರಿಗೆಗೆ ಅಂತಾ ಕವಿತಾ ಅವರು ತವರು ಮನೆಗೆ ಬಂದಿದ್ದರು. ಬಳಿಕ ಹೆರಿಗೆಗೆಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಒಂದು ಕಡೆ ತಾಯಿಗೆ ಸಿಜೇರಿನ್, ಇನ್ನೊಂದೆಡೆ ಮಗು ಸಾವನ್ನಪ್ಪಿದೆ. ಇದರಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
"ಮಗು ಹುಟ್ಟಿ ಮೂರು ದಿನ ಆದ್ರೂ ಯಾವೊಬ್ಬ ವೈದ್ಯರೂ ಚಿಕಿತ್ಸೆ ನೀಡಿಲ್ಲ. ಡ್ಯೂಟಿ ಡಾಕ್ಟರ್, ಮಕ್ಕಳ ಡಾಕ್ಟರ್ ಯಾರೂ ಕೂಡ ಬಂದು ಮಗುವನ್ನು ಪರೀಕ್ಷೆ ಮಾಡಿಲ್ಲ. ನಾರ್ಮಲ್ ಡೆಲಿವರಿ ಆಗುವಂತಿದ್ರೂ ಸಿಜೆರಿನ್ ಮಾಡಿದರು. ನೀರು ಕಡಿಮೆ ಇದೆ ಮಗುವಿನ ಜೀವಕ್ಕೆ ಅಪಾಯ ಎಂದು ಡಾ.ಪವಿತ್ರಾ ಅವರು ನಾಲ್ಕು ಸಾವಿರ ಹಣ ಪಡೆದು ಸಿಜೇರಿನ್ ಮಾಡಿದರು ಅಂತಾ ಆರೋಪ," ಮಾಡಿ ಕುಟುಂಬಸ್ಥರು ಆಕ್ರೊಶ ಹೊರಹಾಕುತ್ತಿದ್ಧಾರೆ.
"ಡಾ.ಕವಿತಾ ಅವರು ಮಧ್ಯವರ್ತಿಯ ಮೂಲಕ 4,000 ರೂಪಾಯಿ ಹಣ ಪಡೆದರು. ಆದರೂ ಕೂಡ ಮಗುವನ್ನು ಉಳಿಸಲು ಆಗಲಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ದುಡ್ಡು ಕೊಡದಿದ್ರೆ ಯಾವ ಕೆಲಸವೂ ಆಗುವುದಿಲ್ಲ. ಕ್ಲೀನರ್ರಿಂದ ಹಿಡಿದು, ವೈದ್ಯರವರೆಗೆ ಎಲ್ಲರಿಗೂ ದುಡ್ಡು ಕೊಡಬೇಕು. ಆಪರೇಶನ್ಗೆ ಬೇಕಾದ ವಸ್ತುಗಳನ್ನು ತರೋಕೂ ದುಡ್ಡು ಕೊಡಬೇಕು," ಎಂದು ಆರೋಪಿಸಿದರು.
ಇನ್ನು ರಾತ್ರಿ 8 ಗಂಟೆಗೆ ಮಗು ಸಾವನ್ನಪ್ಪಿದ್ದು, ಬೆಳಗ್ಗೆ ಡಾಕ್ಟರ್ ಬರೋವರೆಗೆ ಕಾಯಿರಿ ಎಂದು ಜಿಲ್ಲಾ ಸರ್ಜನ್ ಹೇಳಿದರು. ಮಗು ಸಾವಿಗೆ ಹೊಣೆ ಯಾರು ಅಂತಾ ಪ್ರಶ್ನಿಸುವ ಮೂಲಕ ಜಿಲ್ಲಾ ಸರ್ಜನ್ ಡಾ.ರವೀಂದ್ರ ನಡೆಗೆ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
-
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications