Get Updates
Get notified of breaking news, exclusive insights, and must-see stories!

ಪಶ್ಚಿಮಘಟ್ಟದ ಕಸ್ತೂರಿ ರಂಗನ್ ವರದಿಯಿಂದ ಚಿಕ್ಕಮಗಳೂರಿನ ಯಾವ ಹಳ್ಳಿಗಳಿಗೆ ಅಪಾಯ!

ಬೆಂಗಳೂರು, ಜುಲೈ19: ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸುವ ಕೇಂದ್ರ ಪರಿಸರ ಇಲಾಖೆಯ ಐದನೇ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಗೆ ರಾಜ್ಯ ಸರ್ಕಾರ ಮತ್ತು ಶಾಸಕರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನವನ್ನು ಮಾಡಿದರೆ ಸಾವಿರಾರು ಹಳ್ಳಿಗಳ ಜನರ ಜೀವನ ಹಾಳಾಗುತ್ತದೆ. ಚಾಮರಾಜನಗರ ಜಿಲ್ಲೆಯ ಯಾವ ಹಳ್ಳಿ ಈ ವ್ಯಾಪ್ತಿಗೆ ಬರಲಿದೆ ಎಂಬುದರ ವಿವರಣೆ ಇಲ್ಲಿದೆ.

ಕೇಂದ್ರ ಪರಿಸರ ಇಲಾಖೆ ಜುಲೈ 4ರಂದು ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶವನ್ನು ನೀಡಿದೆ. ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಆದೇಶವನ್ನು ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನವೇ ಅಸ್ತವ್ಯಸ್ತವಾಗಿಬಿಡುತ್ತದೆ.

ಕೇಂದ್ರ ಸರ್ಕಾರಕ್ಕೆ ಗಾಡ್ಗೀಳ್ ವರದಿಯು 2010ರಲ್ಲಿ ಸಲ್ಲಿಕೆಯಾಗಿತ್ತು. ಗಾಡ್ಗೀಳ್ ವರದಿಯಲ್ಲಿ ಅವೈಜ್ಞಾನಿಕವಾಗಿದೆ ಎಂದು ಇಸ್ರೋ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ರಚನೆಯನ್ನು ಮಾಡಲಾಗಿತ್ತು. ಕಸ್ತೂರಿ ರಂಗನ್ ಸಮಿತಿಯ ಅಧ್ಯಯನವನ್ನು ಮಾಡಿ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲು ವರದಿಯನ್ನು ನೀಡಿತ್ತು. ಅದರಂತೆ ಗುಜರಾತ್ ತಮಿಳುನಾಡಿ, ಮಹಾರಾಷ್ಟ್ರ, ಗೋವಾ, ಕರ್ನಾಟಕದ ವ್ಯಾಪ್ತಿಯನ್ನು ಹೇಳಿತ್ತು. ಅದರಂತೆ ರಾಜ್ಯದ 20,668 ಚದರ ಕಿ.ಮೀ ಒಳಗೊಂಡಿದೆ. ಅಂದರೆ ಕರುನಾಡಿನ ಸಾವಿರಾರು ಹಳ್ಳಿಯ ಜನರ ಬದುಕು ಬೀದಿಗೆ ಬೀಳುವಂತಾಗುತ್ತದೆ.

ಚಿಕ್ಕಮಗಳೂರು ತಾಲೂಕಿನ ಹಳ್ಳಿಗಳಿವು

ಚಿಕ್ಕಮಗಳೂರು ತಾಲೂಕಿನ ಹಳ್ಳಿಗಳಿವು

ಮೆಲಗಿರಿ, ಕೆಸವಿನ ಮನೆ, ಹಿಪ್ಲ, ಹಿಗ್ಗರ್ ಮಾತಾವಾಣಿ, ಮಡ್ಲಾ, ಅತಿಗಿರಿ, ಮೇಲಿನಹುಲುವತಿ, ಕೆಸವೆ, ಸುಗುಡುವಾಣಿ, ಸಿರಗೊಳ, ಕೊಲಗಾವೆ, ಜಗರ, ಶಿರವಾಸೆ, ಬಿದರೆ, ಮಾಳಗರು, ದತ್ತಾತ್ರೇಯ ಪೀಠ, ಚುರ್‍ಚುಗುಡ್ಡೆ ಕಾವಲ್, ಬೊಗ್ಗಾಸೆ, ಬಸಪುರ, ಕದಾವಂತಿ, ಬೇರನಗೋಡು, ಹೈಗೆರೆ, ಬಸರವಳ್ಳಿ, ಸರಗೊಡು, ಮನಬೂರ್, ಅರೇನೂರ್, ಬಿಕ್ಕರಾಣೆ ಎಂಬ ಹಳ್ಳಿಗಳು ಪರಿಸರ ಸೂಕ್ಷ್ಮ ವಲಯದಲ್ಲಿ ಗುರುತಿಸಲಾಗಿದೆ.

ಕೊಪ್ಪ ತಾಲೂಕಿನಲ್ಲಿರುವ ಹಳ್ಳಿಗಳಿವು

ಕೊಪ್ಪ ತಾಲೂಕಿನಲ್ಲಿರುವ ಹಳ್ಳಿಗಳಿವು

ಕೆಲಕುಳಿ, ಗುಣವಂತೆ, ಹಿರೇಕೊಡಿಗೆ, ಬೊಲಾಪುರ, ಬಂಡೀಗಾಡಿ, ಕೆಸವೆ, ಕುಂಬಾರ್ ಕೊಪ್ಪ, ದೇವರಹಳ್ಳಿ, ಕಗ್ಗ, ಹೊನಗರು, ತಾಳಮಕ್ಕಿ ಎಸ್ಟೇಟ್, ಅಡ್ಡಾದ, ನುಗ್ಗಿ, ಶಂಕರಪುರ, ಹೆಗ್ಗಾರು, ಕುಂಚೂರ್, ಮರಿತೊಟ್ಲು, ಬಿಳಗಡ್ಡೆ, ಹೊಸೂರು, ಉಡನ, ಮಚಿಕೊಪ್ಪ, ಕರಿಮನೆ, ಬೆಳವಾಡಿ, ಲೋಕನಾಥಪುರ, ದಯಂಬಳ್ಳಿ, ಅಡಿಗೆಬೈಲು, ಹೆಗ್ಗಾರು, ಹುಲುಗರಡಿ, ದೇವಗೊಡು, ಹರಳಾಣೆ, ಮೇಗೂರು, ಕಲ್ಲುಗುಪ್ಪೆ, ಎಂಬ ಹಳ್ಳಿಗಳು ಕಸ್ತೂರಿರಂಗನ್ ವರದಿಯಲ್ಲಿವೆ.

ಮೂಡಿಗೆರೆ ತಾಲೂಕಿನಲ್ಲಿರುವ ಹಳ್ಳಿಗಳಿವು

ಮೂಡಿಗೆರೆ ತಾಲೂಕಿನಲ್ಲಿರುವ ಹಳ್ಳಿಗಳಿವು

ತಾನುಡಿ, ಹೊರನಾಡು, ಕಲಕೊಡು, ಸಮ್ಸೆ, ಇಡ್ಕಾಣಿ, ಕೆಳಗೂರ್, ಕುಂದೂರ್, ದರ್‍ಶನ, ಅರಮನೆ ತಲಗೂರ್, ಹೆಗ್ಗೊಡ್ಲು, ಕೆಂಜಿಗೆ ಎಸ್ಟೇಟ್, ದುರ್‍ಗದ ಹಳ್ಳಿ, ಮಡುಗುಂಡಿ, ಬಾಲೂರ್, ಅಟ್ಟಿಗೆರೆ, ತರುವೆ, ಬರಿಮನೆ ಎಸ್ಟೇಟ್, ಕೋಗಿಲೆ, ಗುಟ್ಟಿ, ಮುಲರಹಳ್ಳಿ, ಊರುಬಗೆ, ಹೊಸಕೆರೆ, ಬೈರಾಪುರ, ಮೇಕನಗಡ್ಡೆ, ಬೈರಾಪುರ ಎಸ್ಟೇಟ್ ಎಂಬ ಹಳ್ಳಿಗಳು ಪರಿಸರ ಸೂಕ್ಷ್ಮ ವಲಯದಲ್ಲಿ ಗುರುತಿಸಲಾಗಿದೆ.

ನರಸಿಂಹರಾಜಪುರ ತಾಲೂಕಿನಲ್ಲಿರುವ ಹಳ್ಳಿಗಳಿವು

ನರಸಿಂಹರಾಜಪುರ ತಾಲೂಕಿನಲ್ಲಿರುವ ಹಳ್ಳಿಗಳಿವು

ಬೈರಾಪುರ, ಕುಸಬೂರ್, ಕೊನಕೆರೆ, ಮಡಬೂರ್, ಅರಮ್ಬಳ್ಳಿ, ಮಲ್ಲಂದರು, ವಿಠಲ, ಕಡಹಿನಬೈಲು, ಹಾಥ್ಬೂರ್, ಬೆಲ್ಲೂರ್, ದಂಡುಬಿಟ್ಟಹರ, ಕೊನೊಡಿ, ನಂದಿಗಾವೆ, ಗುಬ್ಬಿಗ, ಅರಳಿಕೊಪ್ಪ, ವಾರ್‍ಕಟ್ಟೆ, ಸನ್ಕಸೇ, ಬಾಲೆ, ಸಾಲೂರ್, ಹೆಬ್ಬೆ, ಸರ್‍ಯಾ, ಕಾನೂರ್, ವಗ್ಗಡೆ, ಹರಾವರಿ, ಅಲೇಹಳ್ಳಿ, ದೇವನ, ಕರೆಕೇಶವರ, ಹೊಸೂರು, ಮೇಗರಮಕ್ಕಿ, ಮುಡುಗುಣಿ, ಹಲಸೂರ್, ಎಂಬ ಹಳ್ಳಿಗಳು ಕಸ್ತೂರಿರಂಗನ್ ವರದಿಯಲ್ಲಿವೆ.

ಶೃಂಗೇರಿ ತಾಲೂಕಿನಲ್ಲಿರುವ ಹಳ್ಳಿಗಳಿವು

ಶೃಂಗೇರಿ ತಾಲೂಕಿನಲ್ಲಿರುವ ಹಳ್ಳಿಗಳಿವು

ನೀಲಂದೂರು, ಹಸನಬಾಳು, ಕುಂಬಾರಗೊಡು, ಮಸಿಗೆ, ಮೀಗ, ಋಷ್ಯಾದ್ರಿಂಗಪುರ(ಮಾರ್‍ಕಲ್), ಮಸಿಗೆ, ಯಡದಳ್ಳಿ, ಯಡದಾಳು, ಬಾಳೆಕಡಿ, ನೆಮ್ಮಾರು, ಗಿಣಿಕಲ್, ಕುತಗೊಡು, ಕೆರೆ, ಸುಂಕದಮಕ್ಕಿ, ಮಲನಾಡು, ಮುಡುಬ, ಮಲನಾಡು, ಕೆರೆ, ನೆಮ್ಮಾರ್ ಎಸ್ಟೇಟ್, ಗುಲಗಂಜಿ ಮನೆ, ಹಡಿ, ಮಾತುವಳ್ಳಿ ಎಸ್ಟೇಟ್, ಬಲಗೆರೆ, ಬಲಗೆರೆ, ಶೀರ್‍ಲು, ಎಂಬ ಹಳ್ಳಿಗಳು ಪರಿಸರ ಸೂಕ್ಷ್ಮ ವಲಯದಲ್ಲಿ ಗುರುತಿಸಲಾಗಿದ್ದೂ ಈ ಹಳ್ಳಿಗೆ ಕಸ್ತೂರಿ ರಂಗನ್ ವರದಿ ಜಾರಿಯಾದರೇ ಅಪಾಯ ಎದುರಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+