ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದತ್ತಮಾಲಾ ಭಕ್ತರಿಂದ ವಾಹನದ ಮೇಲೆ ಕಲ್ಲು ತೂರಾಟ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಡಿಸೆಂಬರ್ 12: ದತ್ತಜಯಂತಿ ಮುಗಿಸಿ ಹಿಂದುರುಗುತ್ತಿದ್ದ ಭಕ್ತಾದಿಗಳು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ದತ್ತಮಾಲಾ ಯಾತ್ರೆ ಮುಗಿಸಿಕೊಂಡು ಕೆಲವು ಭಕ್ತಾಧಿಗಳು ಪಿಕ್‌ಅಪ್ ವಾಹನದಲ್ಲಿ ಬರುವಾಗ ಮೂಡಿಗೆರೆ ತಾಲೂಕಿನ ಭೂತನಕಾಡು ಗುಲ್ಲನ್ ಪೇಟೆ ಬಳಿ ಮನೆಯ ಮುಂದೆ ನಿಂತಿದ್ದ ಮುಸ್ಲೀಮರಿಗೆ ಸೇರಿದ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ದತ್ತಮಾಲಾ ಭಕ್ತರು ಅಲ್ಲಿಯೇ ಇದ್ದ ಮಸೀದಿಗೆ ಕಲ್ಲು ತೂರಲು ಯತ್ನಿಸಿದ್ದು ಆ ಕಲ್ಲುಗಳು ವಾಹನದ ಮೇಲೆ ಬಿದ್ದಿವೆ ಎನ್ನಲಾಗಿದೆ.

Stone Pelted By Dattamala Pilgrims In Chikkamangaluru

ಬಾಬಾಬುಡನ್ ಗಿರಿಯಲ್ಲಿ ಮೂರು ದಿನಗಳ ದತ್ತ ಜಯಂತಿಗೆ ಶಾಂತಿಯುತ ತೆರೆಬಾಬಾಬುಡನ್ ಗಿರಿಯಲ್ಲಿ ಮೂರು ದಿನಗಳ ದತ್ತ ಜಯಂತಿಗೆ ಶಾಂತಿಯುತ ತೆರೆ

ಪಿಕ್‌ಅಪ್ ವಾಹನದಲ್ಲಿದ್ದ ಕಿಡಿಗೇಡಿ ದತ್ತಮಾಲಾ ಭಕ್ತರು ಕೇಸರಿ ವಸ್ತ್ರದಲ್ಲಿ ಕಲ್ಲು ಸುತ್ತಿಕೊಂಡು ಕಾರುಗಳ ಮೇಲೆ ಎಸೆದಿದ್ದಾರೆ. ಕಲ್ಲು ತೂರಾಟ ನಡೆಸಿ ಸ್ಥಳದಲ್ಲಿ ಪೇರಿ ಕಿತ್ತಿದ್ದಾರೆ.

Stone Pelted By Dattamala Pilgrims In Chikkamangaluru

ಕಲ್ಲೆಸೆತದಿಂದ ಕಾರಿನ ಗಾಜು ಪುಡಿ ಆಗಿವೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಆಲ್ದೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಥಳಕ್ಕೆ ಆಲ್ದೂರು ಪೊಲೀಸ್ ಠಾಣಾ ಪಿ.ಎಸ್.ಐ ಸುನೀತಾ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

English summary
Stone pelted By Dattamala piligrims in Chikkamagaluru's Mudigere. Police registered Case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X