Get Updates
Get notified of breaking news, exclusive insights, and must-see stories!

ಮೂಡಿಗೆರೆ: ರಣ ಬಿಸಿಲಿಗೆ ಬೆಂದ ಕಾಫಿಗಿಡಗಳು, ಮಳೆಗಾಗಿ ದೇವರ ಮೊರೆ ಹೋದ ಜನ

ಚಿಕ್ಕಮಗಳೂರು, ಏಪ್ರಿಲ್‌, 02: ಈಗಾಗಲೇ 2023ರಲ್ಲಿ ಮಳೆಯಿಲ್ಲದೆ ರಾಜ್ಯದಲ್ಲಿನ ಅನ್ನದಾತ, ಜನರು ಕಂಗಾಲಾಗಿದ್ದಾರೆ. ಇನ್ನು 2024ರ ಏಪ್ರಿಲ್‌ ಕಳೆದರೂ ಯಾವುದೇ ಮಳೆಯ ಮುನ್ಸೂಚನೆ ಇಲ್ಲದೆ, ಬಿಸಿಲಿನ ವಾತಾವರಣ ಮುಂದುವರೆದಿದೆ. ಇದರಿಂದ ರಾಜ್ಯದ ಜನರು ಕಂಗೆಟ್ಟು ಹೋಗಿದ್ದಾರೆ. ಇದ್ದ ಬೋರ್‌ವೆಲ್‌ಗಳು ಕೂಡ ನಿಂತುಹೋಗುವ ಹಂತವನ್ನು ತಲುಪಿದ್ದು, ಹಲವೆಡೆ ಜನರು ಮಳೆಗಾಗಿ ದೇವರವ ಮೊರೆ ಹೋಗುತ್ತಿರುವ ಘಟನೆಗಳನ್ನು ನಡೆಯುತ್ತಿದೆ. ಇಂತಹದ್ದೇ ಘಟನೆ ಇದೀಗ ಕಾಫಿನಾಡು ಚಿಕ್ಕಮಗಳೂರಿಗೂ ಬಂದೊದಗಿದೆ.

ಹಿಂದೆಲ್ಲ ಮಲೆನಾಡು ಮಳೆನಾಡು ಆಗಿರುತ್ತಿತ್ತು. ಆದರೆ ಇದೀಗ ಬಿಸಿಲಿನ ನಾಡಾಗಿದ್ದು, ಕಾಫಿನಾಡಿನ ಜನರು ಬೆಳೆ ಕಳೆದುಕೊಳ್ಳವ ಆತಂಕಲ್ಲಿದ್ದಾರೆ. ಇನ್ನು ಮಲೆನಾಡಿನಲ್ಲಿ ಹತ್ತಾರು ಗ್ರಾಮಸ್ಥರು ಸೇರಿ ಮಳೆಗಾಗಿ ಮೂಡಿಗೆರೆ ತಾಲೂಕಿನ ಕೊಲ್ಲಿ ಬೈಲ್, ಹೆಸಗಲ್ ಗ್ರಾಮದ ಬಸವೇಶ್ವರ ದೇವರ ಮೊರೆ ಹೋಗಿದ್ದು, ಈ ವೇಳೆ ಜನಪ್ರತಿನಿಧಿಗಳು ಹಾಗೂ ಸ್ವಾಮೀಜಿಗಳು ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ.

Lack of rain Special Pooja to God for rain

ಮೂಡಿಗೆರೆ ತಾಲೂಕಿನ ಹೆಸಗಲ್ ಗ್ರಾಮದ ಕಣಿವೆ ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರೆ ಮಳೆ ಆಗುವ ನಂಬಿಕೆ ಇಲ್ಲಿನ ಜನರದ್ದಾಗಿದೆ. ಈ ಬಸವೇಶ್ವರ ವಿಗ್ರಹ ಕಾಡಿನಲ್ಲಿದ್ದು, ಬರಗಾಲ ಬಂತೆಂದರೆ ಸಾಕು ಮಲೆನಾಡಿಗರು ಈ ಜಾಗಕ್ಕೆ ಬಂದು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.

ಈಗಾಗಲೇ ಜಿಲ್ಲೆಯ ಬಹುತೇಕ ಭಾಗಗಲ್ಲಿ ಮಳೆ ಇಲ್ಲದೆ ನದಿ, ತೊರೆಗಳು ಬತ್ತಿ ಹೋಗುವ ಹಂತವನ್ನು ತಲುಪಿವೆ. ಮತ್ತೊಂದೆಡೆ ಕಾಫಿ ತೋಟಗಳು ಕೂಡ ಸೂರ್ಯನ ಶಾಖಕ್ಕೆ ಒಣಗುತ್ತಿದ್ದು, ಇದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಕಳೆದ 15 ವರ್ಷಗಳ ಬಳಿಕ ತೀವ್ರ ಮಳೆಯ ಕೊರತೆ ಎದುರಾಗಿದ್ದರಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನೂರಾರು ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+