ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆನಾಡಲ್ಲೀಗ ಏಡಿ ಶಿಕಾರಿ ಸಮಯ; ಏಡಿಗಳಿಗಂತೂ ಫುಲ್ ಡಿಮ್ಯಾಂಡ್

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಸೆಪ್ಟೆಂಬರ್ 3: ಕಾಫಿನಾಡಿನಲ್ಲಿ ಈಗ ಚಿಕನ್, ಮೀನಿಗಿಂತ ಏಡಿಗೆ ಇನ್ನಿಲ್ಲದ ಡಿಮ್ಯಾಂಡ್ ಶುರುವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗದಲ್ಲಿ ಮಳೆರಾಯ ಬಿಡುವು ಕೊಟ್ಟಿದ್ದಾನೆ. ಇದರ ಪರಿಣಾಮ ಬಿಸಿಲ ಬೇಗೆಯಿಂದ ಗದ್ದೆಗಳಲ್ಲಿ ಏಡಿಗಳು ಪ್ರತ್ಯಕ್ಷವಾಗುತ್ತಿವೆ.

Recommended Video

Narendra Modiಯವರ Twitter ಹಾಗು Website hacked | Oneindia Kannada

ಜೊತೆಗೆ ಮಲೆನಾಡಿಗರಿಗೆ ಏಡಿಗಳು ಅಂದ್ರೆ ಪಂಚಪ್ರಾಣ. ಹೀಗಿದ್ದಾಗ ಏಡಿಗಳು ಗದ್ದೆಗಳಲ್ಲಿ ರಾಜಾರೋಷವಾಗಿ ಓಡಾಟ ನಡೆಸುತ್ತಿದ್ದರೆ ಬಿಡುತ್ತಾರಾ? ಹೀಗಾಗಿಯೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಡವನದಿಣ್ಣೆ, ಅತ್ತಿಗೆರೆ, ಮುಗ್ರಹಳ್ಳಿ ಸೇರಿದಂತೆ ಹಲವೆಡೆ ಜನರು ಏಡಿ ಶಿಕಾರಿಗೆ ಇಳಿಯುತ್ತಿದ್ದಾರೆ. ಎಲ್ಲೆಡೆ ಏಡಿಗಳ ಶಿಕಾರಿ ಚಿತ್ರಣ ಕಂಡುಬರುತ್ತಿದೆ.

 ಮಳೆಗಾಲದ ಸ್ಪೆಷಲ್ ಕಣಿಲೆ, ಏಡಿಗೆ ಮನ ಸೋತ ಮಡಿಕೇರಿ; ಕೇಜಿ ಏಡಿಗೆ 300 ರು. ಮಳೆಗಾಲದ ಸ್ಪೆಷಲ್ ಕಣಿಲೆ, ಏಡಿಗೆ ಮನ ಸೋತ ಮಡಿಕೇರಿ; ಕೇಜಿ ಏಡಿಗೆ 300 ರು.

 ಏಡಿ ಹಿಡಿಯಲು ಪೈಪೋಟಿ

ಏಡಿ ಹಿಡಿಯಲು ಪೈಪೋಟಿ

ಇತ್ತೀಚಿನ ವರ್ಷಗಳಲ್ಲಿ ಏಡಿಗಳ ಸಂಖ್ಯೆಯೇ ಕಡಿಮೆಯಾಗಿತ್ತು. ಆದರೆ ಈ ವರ್ಷ ಭಾರೀ ಪ್ರಮಾಣದಲ್ಲಿ ಗದ್ದೆಗಳಲ್ಲಿ ಏಡಿಗಳು ಕಂಡು ಬರುತ್ತಿರುವುದರಿಂದ ಜನರು ಅವುಗಳನ್ನು ಹಿಡಿಯಲು ಭಾರೀ ಪೈಪೋಟಿ ನಡೆಯುತ್ತಿದೆ. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು, ಮಹಿಳೆಯರು, ವೃದ್ಧೆಯರು, ಪುರುಷರು ಭರ್ಜರಿ ಏಡಿ ಶಿಕಾರಿ ಮಾಡುತ್ತಿದ್ದಾರೆ.

 ಕೆ.ಜಿ.ಗೆ 300-400 ರೂ

ಕೆ.ಜಿ.ಗೆ 300-400 ರೂ

ಹೀಗೆ ಏಡಿಗಳನ್ನು ಹಿಡಿದು ಮಾರಾಟ ಕೂಡ ಮಾಡಲಾಗುತ್ತಿದ್ದು, ಜನರು ಏಡಿಗಳಿಗೆ ಮುಗಿಬೀಳುತ್ತಿರುವುದರಿಂದ ಭಾರೀ ಡಿಮ್ಯಾಂಡ್ ಉಂಟಾಗಿದೆ. ಒಂದು ಕೆಜಿ ಏಡಿಗೆ 300-400 ರೂವರೆಗೆ ಹಣ ಕೊಟ್ಟು ಏಡಿಗಳನ್ನ ಜನರು ಖರೀದಿಸುತ್ತಿದ್ದಾರೆ

ಕೊಡಗಿನ ಮಳೆಗಾಲದಲ್ಲಿ ಇವೇ ಸೂಪರ್ ಫುಡ್ಕೊಡಗಿನ ಮಳೆಗಾಲದಲ್ಲಿ ಇವೇ ಸೂಪರ್ ಫುಡ್

 ಮಲೆನಾಡಿನಲ್ಲಿ ಏಡಿ ಸಾರು ಫೇಮಸ್

ಮಲೆನಾಡಿನಲ್ಲಿ ಏಡಿ ಸಾರು ಫೇಮಸ್

ಸರ್ವರೋಗಕ್ಕೆ ಸಾರಾಯಿ ಮದ್ದು ಅನ್ನೋ ಗಾದೆ ಮಾತಿದೆ, ಹಾಗೆಯೇ ಮಲೆನಾಡಿನಲ್ಲಿ ಏಡಿ ಸಾರು ತಿಂದ್ರೆ ಯಾವುದೇ ಕಾಯಿಲೆ ಬರಲ್ಲ ಅನ್ನೋ ಮಾತು ಕೂಡ ಬಹಳ ಹಿಂದಿನಿಂದಲೂ ಇದೆ. ಹೀಗಾಗಿಯೇ ಏಡಿ ಸಾರು ಸವಿಯೋದ್ರಲ್ಲಿ ಹಿಂದಿನಿಂದಲೂ ಮಲೆನಾಡಿಗರು ಒಂದು ಹೆಜ್ಜೆ ಮುಂದೆಯೇ. ಸದ್ಯ ಕೊರೊನಾ ಹಿನ್ನೆಲೆಯಲ್ಲಿ ಏಡಿ ಸಾಂಬರಿಗೆ ಜನ ಹಾತೊರೆಯುತ್ತಿದ್ದಾರೆ. ಏಡಿ ಸಾರು ಸವಿಯೋಣ, ಕೊರೊನಾದಿಂದ ದೂರವಿರೋಣ ಅನ್ನೋ ನಂಬಿಕೆಯಿಂದ ಏಡಿಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ.

 ಪ್ರತಿದಿನ ಸಾವಿರಕ್ಕೂ ಹೆಚ್ಚು ಹಣ ಗಳಿಕೆ

ಪ್ರತಿದಿನ ಸಾವಿರಕ್ಕೂ ಹೆಚ್ಚು ಹಣ ಗಳಿಕೆ

ಏಡಿಗಳನ್ನು ಹಿಡಿಯಲೆಂದೇ ಜನರು ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಿ ಅಲ್ಲಿನ ಗದ್ದೆಗಳಲ್ಲಿ ಶಿಕಾರಿ ಮಾಡುತ್ತಿದ್ದಾರೆ. ಕೆಲವರು 2-3 ಕೆಜಿಯಷ್ಟು ಏಡಿ ಹಿಡಿದು ಸಾವಿರಕ್ಕೂ ಹೆಚ್ಚು ಹಣ ಗಳಿಸುತ್ತಿದ್ದಾರೆ. ಈ ವರ್ಷವಂತೂ ಭಾರೀ ಪ್ರಮಾಣದಲ್ಲಿ ಏಡಿಗಳು ಪ್ರತ್ಯಕ್ಷವಾಗಿರುವುದರಿಂದ ಜನರಿಗೆ ಏಡಿ ಹಿಡಿಯುವುದೇ ಒಂದು ಸಂಭ್ರಮ. 150-200 ರೂಪಾಯಿ ಕೊಟ್ರೆ ಮೀನು, ಚಿಕನ್ ಸಿಗುತ್ತೆ. ಆದ್ರೆ ಕೆಜಿ ಏಡಿಗೆ 300ರೂ ಕೊಟ್ರೂ ಸಿಗ್ತಿಲ್ಲ. ಒಟ್ಟಿನಲ್ಲಿ ಏಡಿ, ಕೊರೊನಾ ತಡೆಗಟ್ಟುತ್ತೋ, ಬಿಡುತ್ತೋ ಗೊತ್ತಿಲ್ಲ, ಆದರೆ ಈ ಬಾರಿ ಮಾತ್ರ ಏಡಿಗಳನ್ನು ಜನ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ.

English summary
The demand for crab increased in chikkamagaluru district. people here are hunting crabs in field,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X