ಚಿಕ್ಕಮಗಳೂರು ಉತ್ಸವ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ: ಜಿಲ್ಲಾಧಿಕಾರಿ
ಚಿಕ್ಕಮಗಳೂರು, ಜನವರಿ, 23: ಚಿಕ್ಕಮಗಳೂರು ಉತ್ಸವ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.
ಸೋಮವಾರ ನಗರದ ಎಐಟಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಜ್ಞಾನ ವೈಭವ ಫಲಪುಷ್ಪ ಹಾಗೂ ವಸ್ತು ಪ್ರದರ್ಶನ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2015ರಲ್ಲಿ ಏಕ ಭಾರತ ಶ್ರೇಷ್ಠ ಭಾರತ ಎಂಬ ಪರಿಕಲ್ಪನೆಯಂತೆ ಚಿಕ್ಕಮಗಳೂರು ಉತ್ಸವದಲ್ಲಿ ಕಲೆ, ಸಾಂಸ್ಕೃತಿಕ, ಸಾಹಿತ್ಯ, ಸಂಗೀತ, ನೃತ್ಯ ಮೂಲಕ ಪ್ರತೀ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸವನ್ನು ಮಾಡಲಾಗಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ : ಬಸವರಾಜ ಬೊಮ್ಮಾಯಿ
ಸಿಬ್ಬಂದಿಯ
ಶ್ರಮವೇ
ಉತ್ಸವ
ಯಶಸ್ಸಿಗೆ
ಕಾರಣ
ಜಿಲ್ಲಾ
ಉತ್ಸವ
ಯಶಸ್ವಿಯಾಗಿ
ನಡೆದಿದ್ದು,
ಜಿಲ್ಲಾಡಳಿತ
ಮತ್ತು
ಜಿಲ್ಲಾ
ಪಂಚಾಯತ್
ವ್ಯಾಪ್ತಿಯಲ್ಲಿ
ಬರುವ
40
ಇಲಾಖೆಗಳ
ಅಧಿಕಾರಿಗಳು
ಮತ್ತು
ಸಿಬ್ಬಂದಿ
ಒಗ್ಗೂಡಿ
ಕೆಲಸ
ಮಾಡಿದ್ದರಿಂದ
ಯಶಸ್ಸು
ಕಾಣಲು
ಸಾಧ್ಯವಾಗಿದೆ.
ಉತ್ಸವಕ್ಕೆ
ಶ್ರಮಿಸಿದ
ಎಲ್ಲಾ
ಅಧಿಕಾರಿಗಳು
ಮತ್ತು
ಸಿಬ್ಬಂದಿಗಳ
ಕಾರ್ಯವನ್ನು
ಇದೇ
ವೇಳೆ
ಶ್ಲಾಘಿಸಿದರು.
ಚಿಕ್ಕಮಗಳೂರು
ಉತ್ಸವಕ್ಕೆ
ಅನೇಕ
ಇಲಾಖೆ
ಅಧಿಕಾರಿಗಳು
ಮತ್ತು
ಸಿಬ್ಬಂದಿಗಳ
ಶ್ರಮ
ಹಾಗೂ
ತ್ಯಾಗದಿಂದ
ಕಲಾ
ವೈಭವವನ್ನು
ಕಟ್ಟಿಕೊಡುವ
ಮೂಲಕ
ಲಕ್ಷಾಂತರ
ಜನರ
ಮನ
ಗೆಲ್ಲಲು
ಸಾಧ್ಯವಾಗಿದೆ.
ಈ
ಉತ್ಸವ
ಇತಿಹಾಸವನ್ನು
ಸೃಷ್ಟಿಸಿದೆ
ಎಂದರು.
ಹಲವು
ಇಲಾಖೆಗಳ
ಶ್ರಮ
ಅಪಾರ
ನಗರಾಭಿವೃದ್ದಿ
ಪ್ರಾಧಿಕಾರದ
ಅಧ್ಯಕ್ಷ
ಸಿ.ಆನಂದ್
ಮಾತನಾಡಿ,
ಜಿಲ್ಲಾ
ಉತ್ಸವ
ಅತ್ಯಂತ
ಯಶಸ್ವಿ
ಕಾರ್ಯಕ್ರಮವಾಗಿದ್ದು,
ಜನರ
ಮನಗೆಲ್ಲುವಲ್ಲಿ
ಸಫಲವಾಗಿದೆ.
ಪೌರ
ಕಾರ್ಮಿಕರಿಂದ
ಹಿಡಿದು
ಎಲ್ಲಾ
ಇಲಾಖೆ
ಗಳ
ಅಧಿಕಾರಿಗಳು
ಮತ್ತು
ಸಿಬ್ಬಂದಿಗಳಗ
ಪರಿಶ್ರಮದಿಂದ
ಕಾರ್ಯಕ್ರಮ
ಯಶಸ್ವಿಯಾಗಲು
ಸಾಧ್ಯವಾಗಿದೆ.
ಎಲ್ಲಾ
ಅಧಿಕಾರಿಗಳು
ಮತ್ತು
ಸಿಬ್ಬಂದಿಗಳಿಗೆ
ಕೃತಜ್ಞತೆ
ಸಲ್ಲಿಸುವುದಾಗಿ
ತಿಳಿಸಿದರು.
ಈ
ಹಿಂದೆ
ಚಿಕ್ಕಮಗಳೂರು
ಹಬ್ಬವನ್ನು
ಆಯೋಜಿಸಲಾಗಿತ್ತು.
ಅಂದು
ಕೂಡ
ಕಾರ್ಯಕ್ರಮ
ಯಶಸ್ವಿಯಾಗಿತ್ತು.
ಬಳಿಕ
ಕೋವಿಡ್
ಹಿನ್ನೆಲೆಯಲ್ಲಿ
ಎರಡು
ವರ್ಷಗಳ
ಕಾಲ
ಉತ್ಸವ
ಆಯೋಜಿಸಲು
ಸಾಧ್ಯವಾಗಿರಲಿಲ್ಲ.
ಇದೀಗ
2023ರ
ಚಿಕ್ಕಮಗಳೂರು
ಉತ್ಸವ
ರಾಜ್ಯದಲ್ಲೇ
ಮಾದರಿ
ಉತ್ಸವವಾಗಿದೆ
ಎಂದು
ಬಣ್ಣಿಸಿದರು.
ಕಾರ್ಯನಿರ್ವಹಿಸಿದ
18
ಸಮಿತಿಗಳು
ಜಿಲ್ಲಾ
ಪಂಚಾಯತ್
ಮುಖ್ಯಕಾರ್ಯನಿರ್ವಹಣಾಧಿಕಾರಿ
ಜಿ.ಪ್ರಭು
ಮಾತನಾಡಿ,
ಜಿಲ್ಲಾ
ಉತ್ಸವ
ಯಶಸ್ವಿಗೊಳಿಸಲು
ಪ್ರತೀ
ಇಲಾಖೆ
ಅಧಿಕಾರಿಗಳು
ಮತ್ತು
ಸಿಬ್ಬಂದಿಗಳು
ಕುಟುಂಬದ
ರೀತಿಯಲ್ಲಿ
ಒಗ್ಗೂಡಿ
ಕೆಲಸ
ಮಾಡಿದ್ದಾರೆ.
ವಸ್ತು
ಪ್ರದರ್ಶನ
ಪ್ರತೀ
ಮಕ್ಕಳಿಗೆ,
ಜನರಿಗೆ
ಜ್ಞಾನ
ನೀಡುವ
ಪ್ರದರ್ಶನವಾಗಿ
ಮಾರ್ಪಟ್ಟಿದ್ದು,
ಸಂತೋಷ
ತಂದಿದೆ.
60-70ವರ್ಷದ
ವೃದ್ದೆಯೊಬ್ಬರು
ತನ್ನ
ಅಂಗವಿಕಲ
ಮೊಮ್ಮಗನನ್ನು
ಎತ್ತಿಕೊಂಡು
ವಸ್ತು
ಪ್ರದರ್ಶನವನ್ನು
ತೋರಿಸಿದ್ದು,
ಆಶಾಕಿರಣ
ಅಂದಮಕ್ಕಳ
ಪಾಠಶಾಲೆಯ
ವಿದ್ಯಾರ್ಥಿಗಳು
ವಸ್ತುಗಳನ್ನು
ಸ್ಪರ್ಶಿಸಿ
ಶಬ್ಧವನ್ನು
ಗ್ರಹಿಸಿ
ತಮ್ಮ
ಜ್ಞಾನವನ್ನು
ಹೆಚ್ಚಿಸಿಕೊಂಡಿದ್ದು,
ಎಲ್ಲಾ
ಇಲಾಖೆ
ಅಧಿಕಾರಿಗಳು
ಮತ್ತು
ಸಿಬ್ಬಂದಿಗಳ
ಶ್ರಮ
ಸಾರ್ಥಕತೆಯನ್ನು
ಪಡೆದುಕೊಂಡಿದೆ.
ಜಿಲ್ಲಾಧಿಕಾರಿಗಳ
ನೇತೃತ್ವದಲ್ಲಿ
ಎರಡು
ಮುಖ್ಯ
ಸಮಿತಿಗಳು,
9
ಉಪಸಮಿತಿಗಳು
ಸೇರಿದಂತೆ
18
ಸಮಿತಿಗಳು
ಜಿಲ್ಲಾ
ಉತ್ಸವದಲ್ಲಿ
ಕಾರ್ಯನಿರ್ವಹಿಸಿವೆ
ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್, ಅರಣ್ಯ ಸಂರಕ್ಷಣಾಧಿಕಾರಿ ಸಿದ್ಧರಾಮಪ್ಪ, ಡಿಎಫ್ಓ ಕ್ರಾಂತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರು ಮಲ್ಲೇಶ್, ಪ್ರಗತಿಪರ ಕೃಷಿಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ನಾರಾಯಣಪುರ ಸೇರಿದಂತೆ ಮತ್ತಿತರರು ಹಾಜರಿದ್ದರು.